ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಶಕ್ತಿ ದೇವತೆ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಉಚ್ಚಂಗೆಮ್ಮ ದೇವಿಗೆ 101 ವಿಶೇಷ ಪೂಜೆ ಸಲ್ಲಿಸಲಾಯಿತು.
ಮಳೆ ಕಡಿಮೆಯಾಗಿದ್ದು ಬಿತ್ತಿದ ಮೆಕ್ಕೆಜೋಳ ಒಣಗುತ್ತಿವೆ. ರೈತರೂ ಸಂಕಷ್ಟಕ್ಕೆ ಸಿಲುಕಿದ್ದು, ವರುಣನ ಕೃಪೆಗೆ ಪ್ರಾರ್ಥಿಸಿ ಪೂಜೆ ನೇರವೇರಿಸಲಾಯಿತು. ಅರಿಶಿಣ ಹೊಂಡದಲ್ಲಿ ಮೊದಲು ಗಂಗೆ ಪೂಜೆ ಮಾಡಿ, ಅಲ್ಲಿಂದ ನೀರು ತಂದು 101 ಕೊಡ ನೀರು ದೇವಿಗೆ ಹಾಕಿ 101 ಬಾರಿ ಪೂಜೆ ಮಾಡಲಾಯಿತು.
ಮುಂಜಾನೆ 5.30 ಕ್ಕೆ ಪ್ರಾರಂಭವಾದ ಪೂಜೆ 9 ಗಂಟೆಗೆ ಮಹಾಮಂಗಳಾರತಿ ಮಾಡುವ ಮೂಲಕ ಪೂರ್ಣಗೊಂಡಿತು. ಈ ಸಂದರ್ಭದಲ್ಲಿ ಉತ್ಸವಾಂಭ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆಂಚ್ಚಪ್ಪ, ಅರ್ಚಕರು, ಮುಜುರಾಯಿ ಇಲಾಖೆ ರಮೇಶ್ ಹಾಗೂ ಭಕ್ತರು ಇದ್ದರು.
ಮಳೆ ಕಡಿಮೆಯಾಗಿದ್ದು ಬಿತ್ತಿದ ಮೆಕ್ಕೆಜೋಳ ಒಣಗುತ್ತಿವೆ. ರೈತರೂ ಸಂಕಷ್ಟಕ್ಕೆ ಸಿಲುಕಿದ್ದು, ವರುಣನ ಕೃಪೆಗೆ ಪ್ರಾರ್ಥಿಸಿ ಪೂಜೆ ನೇರವೇರಿಸಲಾಯಿತು. ಅರಿಶಿಣ ಹೊಂಡದಲ್ಲಿ ಮೊದಲು ಗಂಗೆ ಪೂಜೆ ಮಾಡಿ, ಅಲ್ಲಿಂದ ನೀರು ತಂದು 101 ಕೊಡ ನೀರು ದೇವಿಗೆ ಹಾಕಿ 101 ಬಾರಿ ಪೂಜೆ ಮಾಡಲಾಯಿತು.
ಮುಂಜಾನೆ 5.30 ಕ್ಕೆ ಪ್ರಾರಂಭವಾದ ಪೂಜೆ 9 ಗಂಟೆಗೆ ಮಹಾಮಂಗಳಾರತಿ ಮಾಡುವ ಮೂಲಕ ಪೂರ್ಣಗೊಂಡಿತು. ಈ ಸಂದರ್ಭದಲ್ಲಿ ಉತ್ಸವಾಂಭ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆಂಚ್ಚಪ್ಪ, ಅರ್ಚಕರು, ಮುಜುರಾಯಿ ಇಲಾಖೆ ರಮೇಶ್ ಹಾಗೂ ಭಕ್ತರು ಇದ್ದರು.