ಆ್ಯಪ್ನಗರ

ಮಳೆಗಾಗಿ ಶಕ್ತಿ ದೇವಿಗೆ ಪೂಜೆ

ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಶಕ್ತಿ ದೇವತೆ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಉಚ್ಚಂಗೆಮ್ಮ ದೇವಿಗೆ 101 ವಿಶೇಷ ಪೂಜೆ ಸಲ್ಲಿಸಲಾಯಿತು.

Vijaya Karnataka 7 Jul 2018, 2:25 pm
ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಶಕ್ತಿ ದೇವತೆ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಉಚ್ಚಂಗೆಮ್ಮ ದೇವಿಗೆ 101 ವಿಶೇಷ ಪೂಜೆ ಸಲ್ಲಿಸಲಾಯಿತು.
Vijaya Karnataka Web shakti devi worshiped for the rain
ಮಳೆಗಾಗಿ ಶಕ್ತಿ ದೇವಿಗೆ ಪೂಜೆ


ಮಳೆ ಕಡಿಮೆಯಾಗಿದ್ದು ಬಿತ್ತಿದ ಮೆಕ್ಕೆಜೋಳ ಒಣಗುತ್ತಿವೆ. ರೈತರೂ ಸಂಕಷ್ಟಕ್ಕೆ ಸಿಲುಕಿದ್ದು, ವರುಣನ ಕೃಪೆಗೆ ಪ್ರಾರ್ಥಿಸಿ ಪೂಜೆ ನೇರವೇರಿಸಲಾಯಿತು. ಅರಿಶಿಣ ಹೊಂಡದಲ್ಲಿ ಮೊದಲು ಗಂಗೆ ಪೂಜೆ ಮಾಡಿ, ಅಲ್ಲಿಂದ ನೀರು ತಂದು 101 ಕೊಡ ನೀರು ದೇವಿಗೆ ಹಾಕಿ 101 ಬಾರಿ ಪೂಜೆ ಮಾಡಲಾಯಿತು.

ಮುಂಜಾನೆ 5.30 ಕ್ಕೆ ಪ್ರಾರಂಭವಾದ ಪೂಜೆ 9 ಗಂಟೆಗೆ ಮಹಾಮಂಗಳಾರತಿ ಮಾಡುವ ಮೂಲಕ ಪೂರ್ಣಗೊಂಡಿತು. ಈ ಸಂದರ್ಭದಲ್ಲಿ ಉತ್ಸವಾಂಭ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆಂಚ್ಚಪ್ಪ, ಅರ್ಚಕರು, ಮುಜುರಾಯಿ ಇಲಾಖೆ ರಮೇಶ್‌ ಹಾಗೂ ಭಕ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ