ಆ್ಯಪ್ನಗರ

'ಎಂಬಿ ಪಾಟೀಲ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಡಿ ಎಂದಿಲ್ಲ': ಯಾರಿಗೆ ಕೊಟ್ಟರೂ ಓಕೆ ಅಂದ್ರು ಶಾಮನೂರು

‘ಲಿಂಗಾಯತರಾಗಲಿ, ದಲಿತರಾಗಲಿ ಯಾರಿಗಾದರೂ ಕೊಡಲಿ, ಇದು ಪಕ್ಷದ ವರಿಷ್ಠರಿಗೆ ಬಿಟ್ಟ ತೀರ್ಮಾನ. ನಾನು ಇಂಥವರಿಗೆ ಕೊಡಿ, ಇವರಿಗೆ ಬೇಡಾ ಅಂತ ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಕೆಲವರು ನನ್ನ ಹೆಸರಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ' - ಶಿವಶಂಕರಪ್ಪ

Vijaya Karnataka Web 16 Jan 2020, 5:58 pm
ದಾವಣಗೆರೆ: ‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಕೊಟ್ಟರೂ ನಮ್ಮ ತಕರಾರು ಇಲ್ಲ, ಕೆಲವರು ನನ್ನ ಹೆಸರಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ಧಾರೆ.
Vijaya Karnataka Web mb patil and shamanuru shivashankarappa
'ಎಂಬಿ ಪಾಟೀಲ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಡಿ ಎಂದಿಲ್ಲ': ಯಾರಿಗೆ ಕೊಟ್ಟರೂ ಓಕೆ ಅಂದ್ರು ಶಾಮನೂರು


ದಾವಣಗೆರೆ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಂ.ಬಿ. ಪಾಟೀಲ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬಾರದು ಎಂದು ನಾನು ಹೇಳಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಲಿಂಗಾಯತರಾಗಲಿ, ದಲಿತರಾಗಲಿ ಯಾರಿಗಾದರೂ ಕೊಡಲಿ, ಇದು ಪಕ್ಷದ ವರಿಷ್ಠರಿಗೆ ಬಿಟ್ಟ ತೀರ್ಮಾನ. ನಾನು ಇಂಥವರಿಗೆ ಕೊಡಿ, ಇವರಿಗೆ ಬೇಡಾ ಅಂತ ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಕೆಲವರು ನನ್ನ ಹೆಸರಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ' ಎಂದ ಶಿವಶಂಕರಪ್ಪ, ತಪ್ಪು ಮಾಹಿತಿ ನೀಡುವವರು ಯಾರು ಎಂದು ಹೇಳಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಪದವಿ ರೇಸ್‌ನಲ್ಲಿ ಮುನಿಯಪ್ಪ ಹೆಸರು..! 'ಅನಿರೀಕ್ಷಿತ ಆಯ್ಕೆ'ಯ ಸುಳಿವು ನೀಡಿದ ಕೈ ನಾಯಕ

'ಪಂಚಮಸಾಲಿಶ್ರೀ ಬಗ್ಗೆ ಏನೂ ಹೇಳಲ್ಲ'

‘ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀವಚನಾನಂದ ಸ್ವಾಮೀಜಿ ಬಗ್ಗೆ ನಾನು ಏನೂ ಮಾತನಾಡಲ್ಲ' ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಸಿಎಂ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಪಂಚಮ ಸಾಲಿ ಸಮುದಾಯಕ್ಕೆ ಇಂತಿಷ್ಟು ಸಚಿವ ಸ್ಥಾನ ಬೇಕೆಂದು ವಚನಾನಂದ ಶ್ರೀ ಬೇಡಿಕೆ ಇಟ್ಟಿದ್ರು. ಈ ವೇಳೆ ಸಿಎಂ ಸಿಟ್ಟಾಗಿದ್ರು. ಈ ಘಟನೆಯನ್ನು ನೆನಪಿಸಿಕೊಂಡ ಶಾಮನೂರು ಶಿವಶಂಕರಪ್ಪ, 'ಅಂದು ನಾನೂ ವೇದಿಕೆಯಲ್ಲಿದ್ದೆ. ಎಲ್ಲವನ್ನೂ ನೋಡಿದ್ದೇನೆ. ಸ್ವಾಮೀಜಿ ಬಗ್ಗೆಯಾಗಲೀ, ಸಿಎಂ ಬಗ್ಗೆಯೇ ಆಗಲಿ ಯಾವುದೇ ಹೇಳಿಕೆ ನೀಡುವುದಿಲ್ಲ’ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಅಧ್ಯಕ್ಷರ ಆಯ್ಕೆ ಬಳಿಕ ಕೆಪಿಸಿಸಿ ಪುನಾರಚನೆ: ಸಿದ್ದರಾಮಯ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ