ಆ್ಯಪ್ನಗರ

ಷಂಶೀಪುರ ಬಸವೇಶ್ವರಸ್ವಾಮಿ ರಥೋತ್ಸವ

ತಾಲೂಕಿನ ಷಂಶೀಪುರ (ಶಿವನಹಳ್ಳಿ) ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಶ್ರೀ ಬಸವೇಶ್ವರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Vijaya Karnataka 30 Apr 2019, 5:00 am
ಹರಿಹರ : ತಾಲೂಕಿನ ಷಂಶೀಪುರ (ಶಿವನಹಳ್ಳಿ) ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಶ್ರೀ ಬಸವೇಶ್ವರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Vijaya Karnataka Web shamsipur basaveshwara swamy rathotsava
ಷಂಶೀಪುರ ಬಸವೇಶ್ವರಸ್ವಾಮಿ ರಥೋತ್ಸವ


ಬೆಳಗ್ಗೆ 8ಕ್ಕೆ ದೊಡ್ಮನಿ ದಿ.ಪರಮೇಶ್ವರಪ್ಪರ ಮನೆಯಿಂದ ಪುರುವಂತರ ಆಗಮನದೊಂದಿಗೆ ರಥೋತ್ಸವಕ್ಕೆ ಎಡೆ ಹಾಕಲಾಯಿತು. ನಂತರ ಗ್ರಾಮದ ರಾಜಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ರಥೋತ್ಸವ ಜರುಗಿತು. ಸಂಜೆ 6.30ಕ್ಕೆ ಓಕುಳಿ ಕಾರ್ಯಕ್ರಮ ಜರುಗಿತು.

ಚೌಡೇಶ್ವರಿ ಜಾತ್ರೆ:
ರಥೋತ್ಸವದ ನಂತರ ಮಂಗಳವಾರ ಶ್ರೀ ಚೌಡೇಶ್ವರಿ ದೇವಿಯ ಗದ್ದಿಗೆ ಮಾಡುವುದು ಹಾಗೂ ಕಂಕಣಧಾರಣೆ, ಕುಂಕುಮಾರ್ಚನೆ ನಂತರ ಗ್ರಾಮದ ಭಕ್ತಾದಿಗಳಿಂದ ದೇವಿಒಗೆ ಹಣ್ಣು ಕಾಯಿ, ಉಡಿ ತುಂಬುವ ಕಾರ್ಯ ನಡೆಯುವುದು.

ಅಂದು ಸಂಜೆ 7ರಿಂದ ಸಾಗರದ ಶಾದಿಶಕ್ತಿ ಮಹಿಳಾ ತಂಡದಿಂದ ಡೊಳ್ಳು ಕುಣಿತದೊಂದಿಗೆ ಶ್ರೀ ದೇವಿಯ ಗಂಗೆ ಪೂಜೆ ಮುಗಿಸಿಕೊಂಡು ಮುತ್ತೈದೆಯರ ಸಮೇತ ಗೌಡರ ಮನೆಗೆ ಶ್ರೀ ದಏವಿಯನ್ನು ಕರೆದೊಯ್ಯಲಾಗುವುದು.

ರಾತ್ರಿ 10ಕ್ಕೆ ಮುತ್ತೈದೆಯರೊಂದಿಗೆ ಚೌಕಿ ಮನೆಯಲ್ಲಿ ಪೂಜೆ ಮುಗಿದ ನಂತರ ಅನ್ನಪ್ರಸಾದ ವಿತರಣೆ, ನಂತರ ಸಾರು ಹಾಕುವ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ 2ಕ್ಕೆ ಗೌಡರ ಮನೆಯಿದ ಗಟೆ ತರಲಾಗುವುದು, ನಂತರ 3ಕ್ಕೆ ಬಣಕಾರರ ಮನೆಯಿಂದ ಹುಲುಸಿನ ಜೋಳ ತರುವುದು. ಬೆಳಗಿನ ಜಾವ 4ಕ್ಕೆ ಹರಿಜನರ ಮನೆಯಿಂದ ಗಟೆ ತರುವುದು, ಬೆಳಿಗ್ಗೆ 6ಕ್ಕೆ ಹಿಟ್ಟಿನ ಕೋಣ ವಧೆ ಮಾಡಿ ಚರಗ ಚೆಲ್ಲಲಾಗುವುದು.

ಬುಧವಾರದಂದು ಸಂಜೆ 5ಕ್ಕೆ ಹಾಸ್ಯಗಾರರಿಂದ ರಸಮಂಜರಿ ಕಾರ್ಯಕ್ರಮ. ಗುರುವಾರ ಸಂಜೆ 6ಕ್ಕೆ ಹುಲುಸಿನ ಜೋಳವನ್ನು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವುದು. ಶುಕ್ರವಾರ ಸಂಜೆ 6ಕ್ಕೆ ಚೌಡೇಶ್ವರಿ ದೇವಸ್ಥಾನ ದೇವಿಯ ಮೆರವಣಿಗೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ