ಆ್ಯಪ್ನಗರ

ಶಿವರಾತ್ರಿ ಜಾಗರಣೆ ಇಂದು

ತಾಲೂಕಿನ ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಮಹಾ ಶಿವರಾತ್ರಿ ಜಾಗರಣೆ , ಪಲ್ಲಕ್ಕಿ ಉತ್ಸವ, ಧಾರ್ಮಿಕ ನಾನಾ ಪೂಜಾ ಕಾರ್ಯಕ್ರಮ ಫೆ.15ರಿಂದ 16 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಹಾಲಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ವಿ.ಎಚ್‌.ರುದ್ರೇಶ್‌ ತಿಳಿಸಿದ್ದಾರೆ.

Vijaya Karnataka 13 Feb 2018, 5:00 am

ನ್ಯಾಮತಿ: ತಾಲೂಕಿನ ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಮಹಾ ಶಿವರಾತ್ರಿ ಜಾಗರಣೆ , ಪಲ್ಲಕ್ಕಿ ಉತ್ಸವ, ಧಾರ್ಮಿಕ ನಾನಾ ಪೂಜಾ ಕಾರ್ಯಕ್ರಮ ಫೆ.15ರಿಂದ 16 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಹಾಲಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ವಿ.ಎಚ್‌.ರುದ್ರೇಶ್‌ ತಿಳಿಸಿದ್ದಾರೆ.

15ರಂದು ರಾತ್ರಿ ಶಿವರಾತ್ರಿ ಅಮಾವಾಸ್ಯೆ ಜಾಗರಣೆ, 16ರಂದು ಬೆಳಗ್ಗೆ ತುಂಗಾ ಭದ್ರಾ ನದಿಯಲ್ಲಿ ಗಂಗಾ ಪೂಜೆ ,ನಾನಾ ಪೂಜೆ ಜರುಗಲಿವೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ , ತೇಜಿ ಉತ್ಸವದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ , ವೀರಗಾಸೆ , ನಂದಿಧ್ವಜ , ಗೊಂಬೆಕುಣಿತ , ಭಜನಾ ಸೇರಿದಂತೆ ನಾನಾ ಮೇಳ ಭಾಗವಹಿಸಲಿವೆ. ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ