ಆ್ಯಪ್ನಗರ

ದಾವಣಗೆರೆಯಲ್ಲಿ ಎಲ್ಲೆಲ್ಲೂ ಸೊಳ್ಳೆ ಕಾಟ; ನೆಮ್ಮದಿಯಾಗಿ ಉಣ್ಣೋ ಹಾಗಿಲ್ಲ, ಅಡ್ಡಾಡೋ ಹಾಗಿಲ್ಲ, ಮಲಗೋ ಹಾಗಿಲ್ಲ!

2022 ಮಳೆ ವರ್ಷ. ವರ್ಷದ ಪ್ರತಿ ತಿಂಗಳೂ ವರುಣ ಆರ್ಭಟಿಸಿ ಹೋಗಿದ್ದಾನೆ. ಕೆರೆ ಕಟ್ಟೆಗಳು ತುಂಬಿವೆ. ಆದರೆ, ಸಮಸ್ಯೆ ಇರುವುದು ಹಳ್ಳಿಗಳ ತೆರೆದ ಚರಂಡಿಗಳು ಹಾಗೂ ನಗರ ಪ್ರದೇಶದಲ್ಲಿರುವ ಖಾಲಿ ಸೈಟುಗಳಿಂದ. ನವೆಂಬರ್‌ ಮುನ್ನ ಸುರಿದ ಮಳೆಯಿಂದಾಗಿ ನಗರದ ಖಾಲಿ ನಿವೇಶನಗಳಲ್ಲಿ ನೀರು ನಿಂತಿತ್ತು. ಈ ನೀರು ತಿಂಗಳವರೆಗೂ ಹಾಗೇ ಇದ್ದಿದ್ದರಿಂದ ಅಲ್ಲಿಸೊಳ್ಳೆಗಳ ಸಂತಾನೋತ್ಪತ್ತಿ ವೃದ್ಧಿಸಿದೆ. ಹೊರವಲಯದ ಹೊಸ ಲೇಔಟ್‌ಗಳ ಸುತ್ತಮುತ್ತಲೆಲ್ಲಾ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.

Edited byಚೇತನ್ ಓ.ಆರ್. | Vijaya Karnataka Web 10 Jan 2023, 8:29 am

ಹೈಲೈಟ್ಸ್‌:

  • ಸ್ಮಾರ್ಟ್‌ ಸಿಟಿ ಜನರ ನಿದ್ದೆ ಕೆಡಿಸಿರುವ ಸೊಳ್ಳೆಗಳು;
  • ಫಾಗಿಂಗ್‌ ಮಾಡುವುದನನ್ನು ಮರೆತ ಮಹಾನಗರ ಪಾಲಿಕೆ.
  • ಕತ್ತಲಾದ ಮೇಲೆ ರಸ್ತೆಗಳಲ್ಲಿ ನಡೆದಾಡುವುದೂ ಕಷ್ಟಕರವಾಗಿಸಿರುವ ಸೊಳ್ಳೆಗಳು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Mosquito - Standard
  • ಬಸವರಾಜ ಕೆ.ಜಿ.
ದಾವಣಗೆರೆ: ಸ್ಮಾರ್ಟ್‌ ಸಿಟಿಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಸಂಜೆ ಆದರೆ ಮನೆ ಬಾಗಿಲು ತೆಗಿಯಂಗಿಲ್ಲ. ಹೊರಗೆ ಹೋಗಿ ಅಕ್ಕ ಪಕ್ಕದವರ ಜತೆ ನಿಂತು ಮಾತನಾಡೋ ಹಾಗಿಲ್ಲ. ಹೋಗ್ಲಿ, ಊಟ ಆದ ಮೇಲೆ ಪ್ಯಾಸೇಜ್ ನಲ್ಲಿ ನಾಲ್ಕು ಹೆಜ್ಜೆ ನಡೆದಾಡೋಣ ಅಂದ್ರೆ ಅದಕ್ಕೂ ಬಿಡ್ತಾ ಇಲ್ಲ ಈ ಸೊಳ್ಳೆಗಳು. ಎಲ್ಲೇ ನಿಂತ್ರೂ, ಕುಂತ್ರೂ ಕಿವಿಯಲ್ಲಿ ಗುಯ್ಯ್ ಅಂತ ರಾಗ ಹಾಡುವ ಸೊಳ್ಳೆಗಳು ಕಚ್ಚಿ ಮಾಯವಾಗಿ ಬಿಡುತ್ತವೆ.
ರಾತ್ರಿ ಹೊತ್ತು ಬಿಡಿ, ಹಗಲಲ್ಲೂ ಮನೆ ಒಳಗೆ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ. ಹಾಲಲ್ಲಿ ಟಿವಿ ನೋಡಲು ಕುಳಿತುಕೊಂಡರೆ ಒಂದೋ ಸೊಳ್ಳೆ ಬತ್ತಿ ಹಚ್ಚಬೇಕು, ಇಲ್ಲದಿದ್ದರೆ ಕೈಯಲ್ಲಿಮಸ್ಕಿಟೋ ಬ್ಯಾಟ್‌ ಹಿಡಿದು ಸೊಳ್ಳೆಯ ಬರುವಿಕೆ ಕಾಯುತ್ತಾ ಕೂರಬೇಕು. ಬಹುತೇಕ ಮನೆಗಳಲ್ಲಿ ಸೊಳ್ಳೆಗಳ ಜತೆ ಹಗಲು ರಾತ್ರಿ ಯುದ್ಧ ನಡೆಯುತ್ತಿದೆ. ನಗರದ ಕೆಲ ಬಡಾವಣೆಗಳಲ್ಲಿ ಸೊಳ್ಳೆ ಕಾಟಕ್ಕೆ ಜನರ ನಿದ್ರಾಭಂಗವಾಗಿದೆ!

ಗ್ರಾಮದ ಮಧ್ಯಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ; ಗ್ರಾಮಸ್ಥರಿಂದ ಪ್ರತಿಭಟನೆ
ಸಿಟಿಯಲ್ಲಿ ಈ ಹಾಡಾದರೆ, ನೀರಾವರಿ ಸೌಲಭ್ಯವಿರುವ ಹಳ್ಳಿಗಳ ಪಾಡು ಕೇಳುವಂತಿಲ್ಲ. ಮೊನ್ನೆಯಷ್ಟೇ ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಬಿಡಲಾಗಿದೆ. ಕೆಲವೆಡೆ ಬೋರ್‌ ನೀರಿಗೆ ಭತ್ತದ ಸಸಿ ಮಡಿ ಮಾಡಲಾಗಿದೆ. ಈ ವೇಳೆ ಗದ್ದೆಯಲ್ಲಿ ಸದಾ ನೀರು ನಿಲ್ಲುವ ಕಾರಣ, ಸೊಳ್ಳೆಗಳ ಸಂತತಿ ವೃದ್ಧಿಯಾಗುತ್ತಿದೆ.

ಸೊಳ್ಳೆ ಹೆಚ್ಚಲು ಕಾರಣವೇನು?

2022 ಮಳೆ ವರ್ಷ. ವರ್ಷದ ಪ್ರತಿ ತಿಂಗಳೂ ವರುಣ ಆರ್ಭಟಿಸಿ ಹೋಗಿದ್ದಾನೆ. ಕೆರೆ ಕಟ್ಟೆಗಳು ತುಂಬಿವೆ. ಆದರೆ, ಸಮಸ್ಯೆ ಇರುವುದು ಹಳ್ಳಿಗಳ ತೆರೆದ ಚರಂಡಿಗಳು ಹಾಗೂ ನಗರ ಪ್ರದೇಶದಲ್ಲಿರುವ ಖಾಲಿ ಸೈಟುಗಳಿಂದ. ನವೆಂಬರ್‌ ಮುನ್ನ ಸುರಿದ ಮಳೆಯಿಂದಾಗಿ ನಗರದ ಖಾಲಿ ನಿವೇಶನಗಳಲ್ಲಿ ನೀರು ನಿಂತಿತ್ತು. ಈ ನೀರು ತಿಂಗಳವರೆಗೂ ಹಾಗೇ ಇದ್ದುದರಿಂದ ಅಲ್ಲಿಸೊಳ್ಳೆಗಳ ಸಂತಾನೋತ್ಪತ್ತಿ ವೃದ್ಧಿಸಿದೆ. ಹೊರವಲಯದ ಹೊಸ ಲೇಔಟ್‌ಗಳಿಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇತ್ತ ಹಳೇ ಊರಿನಲ್ಲಿರಸ್ತೆ ಬದಿ ಬೀಳುವ ತ್ಯಾಜ್ಯದಿಂದಾಗಿ ಸೊಳ್ಳೆಗಳ ಕಾಟ ನಿಯಂತ್ರಣಕ್ಕೆ ಬರುತ್ತಿಲ್ಲ.

ದಾವಣಗೆರೆ | ಜ.15ರೊಳಗೆ 150 ಕ್ಷೇತ್ರಗಳ ಟಿಕೆಟ್ ಫೈನಲ್‌; ಆಕಾಂಕ್ಷಿಗಳ ಮಾರ್ಕ್ಸ್ ಕಾರ್ಡ್ ವೀಕ್ಷಣೆ ಮಾಡಿದ ಕೈ ವೀಕ್ಷಕರು
ಫಾಗಿಂಗ್‌ ಮರೆತ ಪಾಲಿಕೆ!

ಸೊಳ್ಳೆಗಳು ಹೆಚ್ಚಾದಾಗ ಊರ ತುಂಬಾ ಫಾಗಿಂಗ್‌ ಮಾಡಬೇಕು. ಕಳೆದ ವರ್ಷವಿಡೀ ಮಳೆಯಾದ ಕಾರಣ, ಜಿಲ್ಲೆಯ ಹಲವು ಗ್ರಾಪಂ ವ್ಯಾಪ್ತಿಯಲ್ಲಿಫಾಗಿಂಗ್‌ ಮಾಡಲಾಗಿದೆ. ಆದರೆ, ದಾವಣಗೆರೆ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಗೆ ಹಾಕುವುದನ್ನೇ ಮರೆತಿದ್ದಾರೆ. ಈ ಹಿಂದೆ ಕಡೇ ಬಾರಿ ಫಾಗಿಂಗ್‌ ಮಾಡಿದ್ದು ಯಾವಾಗ ಎಂಬುದು ಕೂಡ ನಾಗರಿಕರಿಗೆ ನೆನಪಿಲ್ಲ. ಈಗ ಸೊಳ್ಳೆಗಳು ಹೆಚ್ಚಾಗಿರುವ ಕಾರಣ ಕೂಡಲೆ ಎಲ್ಲಬಡಾವಣೆಗಳಲ್ಲಿ ಫಾಗಿಂಗ್‌ ಮಾಡುವಂತೆ ಸಾರ್ವಜನಿಕರು ಪಾಲಿಕೆಯನ್ನು ಒತ್ತಾಯಿಸಿದ್ದಾರೆ.

ಡೆಂಘಿ ಕೇಸ್‌ ಹೆಚ್ಚಳ

ಸೊಳ್ಳೆ ಕಡಿತ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಜ್ವರವೇ ಮುಖ್ಯವಾಗಿರುವ ಮಲೇರಿಯಾ, ಡೆಂಘಿ, ಚಿಕೂನ್‌ಗುನ್ಯಾ ರೋಗಗಳಿಗೆ ಸೊಳ್ಳೆ ಕಡಿತ ಕಾರಣವಾಗುತ್ತದೆ. ಜಿಲ್ಲೆಯಲ್ಲಿ 2022ರ ಜೂನ್‌ ತಿಂಗಳಿಂದ ಡೆಂಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಡೀ ವರ್ಷದಲ್ಲಿಒಟ್ಟು 240 ಡೆಂಗೆ ಹಾಗೂ 78 ಚಿಕೂನ್‌ ಗುನ್ಯಾ ಕೇಸುಗಳು ಪತ್ತೆಯಾಗಿವೆ. ಈ ಪೈಕಿ ಹೆಚ್ಚಿನ ಕೇಸುಗಳು ದಾವಣಗೆರೆಯಲ್ಲೇ ಇವೆ.

2013ರಿಂದ ಈ ದೇಶದ ಇತಿಹಾಸ ಬದಲಾಗಿದೆ: ನಡ್ಡಾ
ಜನ ಏನು ಮಾಡಬೇಕು?
  • ಮನೆ ಸುತ್ತ ಸ್ವಚ್ಛತೆ ಕಾಪಾಡಿ.
  • ತೆರೆದ ಕೊಳ, ಡ್ರಮ್‌ಗಳಲ್ಲಿನೀರು ಸಂಗ್ರಹಿಸಬೇಡಿ.
  • ಮನೆ ಸುತ್ತ ದಿನಗಟ್ಟಲೆ ನೀರು ನಿಲ್ಲಲು ಬಿಡಬೇಡಿ.
  • ವಾಹನ, ಅಂಗಳ ತೊಳೆದ ನೀರು ಚರಂಡಿಗೆ ಹೋಗುವಂತೆ ಮಾಡಿ.
  • ಸಂಜೆ ವೇಳೆ ಮನೆ ಬಾಗಿಲು ಹಾಕಿ.
  • ಸೊಳ್ಳೆ ಒಳ ಬರದಂತೆ ಕಿಟಕಿಗಳಿಗೆ ಮೆಶ್‌ ಹಾಕಿಸಿ.

ಯಾರು ಏನಂತಾರೆ?

ತಿಂಗಳಿಂದ ಇದ್ದಕ್ಕಿದ್ದಂತೆ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಸೊಳ್ಳೆ ಬತ್ತಿ, ಮ್ಯಾಟ್‌ಗೆ ಸೊಳ್ಳೆಗಳು ಮೈಟ್‌ ಮಾಡುತ್ತಿಲ್ಲ. ಸೊಳ್ಳೆ ಪರದೆ ಕಟ್ಟಿಕೊಳ್ಳದೆ ಮಲಗಿದರೆ ನಿದ್ದೆ ಮಾಡಲು ಬಿಡುವುದಿಲ್ಲ. ಅತ್ತ ಪಾಲಿಕೆಯವರು ಫಾಗಿಂಗ್‌ ಮಾಡುವುದನ್ನೇ ಮರೆತಿದ್ದಾರೆ.

- ಎಸ್‌. ರಾಜಶೇಖರ ಮಠದ, ದೇವರಾಜ ಅರಸು ಬಡಾವಣೆ
------------------------------------------
ಸೊಳ್ಳೆಗಳ ಹಾವಳಿ ಹೆಚ್ಚಾದರೆ ಡೆಂಘಿಘಿ, ಮಲೇರಿಯಾ ಪ್ರಕರಣಗಳು ಕೂಡ ಹೆಚ್ಚುತ್ತವೆ. ಈ ಸಂಬಂಧ ಪಾಲಿಕೆ ಆರೋಗ್ಯ ವಿಭಾಗದ ಆದಿಕಾರಿಗಳ ಜತೆ ಚರ್ಚಿಸಿ ಕೂಡಲೆ ನಗರದಲ್ಲಿಫಾಗಿಂಗ್‌ ಮಾಡಿಸಲು ವ್ಯವಸ್ಥೆ ಮಾಡಲಾಗುವುದು.

- ಡಾ. ನಟರಾಜ್‌, ಮಲೇರಿಯಾ ಅಧಿಕಾರಿ
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ