ಆ್ಯಪ್ನಗರ

ಜೂನ್ 21ಕ್ಕೆ ಕಂಕಣ ಸೂರ್ಯಗ್ರಹಣ, ವೀಕ್ಷಣೆಗೆ ಅವಕಾಶ

ಕಂಕಣ ಸೂರ್ಯಗ್ರಹಣ ಜೂನ್‌ 21ಕ್ಕೆ ಸಂಭವಿಸಲಿದ್ದು, ಮೌಢ್ಯದಿಂದ ಹೊರಬಂದು ನಭೋ ಮಂಡಲದಲ್ಲಿ ಭಾನುವಾರ ಕಾಣುವ ನೆರಳು ಬೆಳಕಿನ ಆಟದ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.

Vijaya Karnataka Web 18 Jun 2020, 3:16 pm
ದಾವಣಗೆರೆ: ಕಂಕಣ ಸೂರ್ಯಗ್ರಹಣ ಜೂನ್‌ 21ಕ್ಕೆ ಸಂಭವಿಸಲಿದ್ದು, ಗ್ರಹಣ ವೀಕ್ಷಣೆಯಿಂದ ಕೆಡುಕಾಗುತ್ತದೆ ಎಂಬ ಮೌಢ್ಯದಿಂದ ಹೊರಬಂದು ಆಕಾಶದಲ್ಲಿ ನಡೆಯುವ ಈ ನೆರಳು ಬೆಳಕಿನ ಆಟದ ಕೌತುಕ ವೀಕ್ಷಿಸಬೇಕು ಎಂದು ವಿಜ್ಞಾನ ಪರಿಷತ್‌ ಸದಸ್ಯ ಎಂ. ಗುರುಸಿದ್ಧಸ್ವಾಮಿ ತಿಳಿಸಿದ್ದಾರೆ.
Vijaya Karnataka Web ಜೂ.21ರಂದು ಸೂರ್ಯ ಗ್ರಹಣ


ಅಂದು ಬೆಳಗ್ಗೆ 10 ಗಂಟೆ 7 ನಿಮಿಷ 26 ಸೆಕೆಂಡ್‌ಗೆ ಗ್ರಹಣ ಆರಂಭಗೊಳ್ಳುತ್ತದೆ. ಮಧ್ಯಾಹ್ನ 1 ಗಂಟೆ 29 ನಿಮಿಷಕ್ಕೆ ಕೊನೆಗೊಳ್ಳಲಿದೆ. ಬೆಳಗ್ಗೆ 11 ಗಂಟೆ 42 ನಿಮಿಷ 53 ಸೆಕೆಂಡ್‌ಗೆ ಸೂರ್ಯನನ್ನು ಚಂದ್ರ ಶೇ.42.7ರಷ್ಟು ಮರೆ ಮಾಡುವನು ಎಂದು ಅವರು ಹೇಳಿದ್ದಾರೆ.

ಸೂರ್ಯ, ಭೂಮಿ ಮಧ್ಯೆ ಚಂದ್ರ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣವಾಗುತ್ತದೆ. ಬರೀಗಣ್ಣಲ್ಲಿ ಗ್ರಹಣ ನೋಡಬಾರದು. ಸುರಕ್ಷಾ ಸಾಧನ ಬಳಸಿ ವೀಕ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ದಾವಣಗೆರೆ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿ (ಕೆಜಿವಿಎಸ್‌), ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್‌) ಮನೆ ಮನೆ ವಿಜ್ಞಾನ ದಾಸೋಹ ಬಳಗದ ಆಶ್ರಯದಲ್ಲಿ ನಗರದ ಪ್ರೌಢಶಾಲಾ ಮೈದಾನದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವೀಕ್ಷಣೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಸಂಪನ್ಮೂಲ ವ್ಯಕ್ತಿಗಳಾದ ಎಂ.ಟಿ. ಶರಣಪ್ಪ, ಡಾ. ಬಿ.ಇ. ರಂಗಸ್ವಾಮಿ, ಕೆ.ಸಿ. ಬಸವರಾಜ, ಕೆ. ಸಿದ್ದೇಶ್‌, ಅಂಗಡಿ ಸಂಗಪ್ಪ 'ಗ್ರಹಣ' ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಗುರುಸಿದ್ಧಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ