ಆ್ಯಪ್ನಗರ

ಬಾರದ ಮಳೆ ರೈತನಿಗೆ ಬಿತ್ತನೆ ಹಿನ್ನಡೆ ಚಿಂತೆ

ತಾಲೂಕಿನಾದ್ಯಂತ ಮುಂಗಾರು ಮಳೆ ಸಕಾಲಕ್ಕೆ ಬಾರದ ಪರಿಣಾಮ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜೂನ್‌ ಆರಂಭವಾದರೂ ಬಿತ್ತನೆ ಕಾರ್ಯ ಚುರುಕು ಪಡೆಯದೆ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ.

Vijaya Karnataka 17 Jun 2019, 5:00 am
Vijaya Karnataka Web sowing setbacks for the rain fed farmer
ಬಾರದ ಮಳೆ ರೈತನಿಗೆ ಬಿತ್ತನೆ ಹಿನ್ನಡೆ ಚಿಂತೆ
ವಿಕ ವಿಶೇಷ ಹೊನ್ನಾಳಿ

ತಾಲೂಕಿನಾದ್ಯಂತ ಮುಂಗಾರು ಮಳೆ ಸಕಾಲಕ್ಕೆ ಬಾರದ ಪರಿಣಾಮ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜೂನ್‌ ಆರಂಭವಾದರೂ ಬಿತ್ತನೆ ಕಾರ್ಯ ಚುರುಕು ಪಡೆಯದೆ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬಿತ್ತನೆ ಅವಧಿ ಮುಗಿಯುತ್ತದೆ ಎಂಬ ಆತಂಕದಿಂದ ಕೆಲ ರೈತರು ಒಂದು ವಾರದಿಂದ ಬರುತ್ತಿರುವ ಅಲ್ಪಸ್ವಲ್ಪ ಮಳೆಗೆ ಶೇಂಗಾ ಬಿತ್ತನೆಗೆ ಮುಂದಾಗಿದ್ದಾರೆ. ಇನ್ನು ಕೆಲ ರೈತರು ಜಮೀನುಗಳ ಸ್ವಚ್ಛತೆ, ಹದ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬಿತ್ತನೆ ಮಾಡುವಷ್ಟು ಮಳೆ ಬಾರದೆ ಇರುವುದರಿಂದ ಬಿತ್ತನೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ವಾರದ ಹಿಂದೆ ಒಂದಿಷ್ಟು ಮಳೆ ಬಂದಿದ್ದು ಬಿಟ್ಟರೆ ಕಳೆದ ಮೂರು ನಾಲ್ಕು ದಿನಗಳಿಂದ ಮೊಡ ಕವಿದ ವಾತಾವರಣ ನಿರ್ಮಾಣವಾಗಿ ಗುಡುಗು ಮಿಂಚು ಗಾಳಿ ಎಂದು ಇನ್ನೇನು ಮಳೆ ಬಂದೆ ಬಿಟ್ಟಿತು ಎನ್ನುವಷ್ಟರಲ್ಲಿ ಮೊಡಗಳು ಚದುರಿ ಮಳೆ ಸುಳಿವು ಇಲ್ಲದಂತೆ ಮಾಯವಾಯಿತು.

ಶೇಂಗಾ ಬಿತ್ತನೆ:
ಮುಂಗಾರು ಬಿತ್ತನೆಗೆ ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಕೃಷಿ ಇಲಾಖೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲು ಸಜ್ಜಾಗಿದೆ. ಮುಂಗಾರು ನಿರೀಕ್ಷೆಯಲ್ಲಿರುವ ರೈತರು ಸಾಲ ಸೂಲ ಮಾಡಿ ಶೇಂಗಾ, ಈರುಳ್ಳಿ ಹಾಗೂ ಇತರೆ ಬೀಜಗಳನ್ನು ಖರೀದಿಸಿದ್ದಾರೆ. ತಾಲೂಕಿನ ಅರಬಗಟ್ಟೆ, ಮಾದವನಬಾವಿ ಗ್ರಾಮಗಳಲ್ಲಿ ಕೆಲ ರೈತರು ಶೇಂಗಾವನ್ನು ಬಿತ್ತನೆ ಮಾಡಿದ್ದು, ಮಳೆ ನಿರೀಕ್ಷೆಯಲ್ಲಿದ್ದಾರೆ.

ಮುಗಿಲಿನತ್ತ ಮುಖ:
ಬಿದ್ದ ಅಲ್ಪ ಸ್ವಲ್ಪ ಮಳೆಗೆ ಕೆಲ ರೈತರು ಎತ್ತುಗಳಲ್ಲಿ ಬಿತ್ತನೆ ಮಾಡಿದರೆ, ತೇವಾಂಶ ಆರಿ ಹೋಗುತ್ತದೆ ಎಂದು ಕೆಲ ಕೃಷಿಕರು ಟ್ರ್ಯಾಕ್ಟರ್‌ಗಳಿಂದ ಬಿತ್ತನೆ ಮಾಡುತ್ತಿದ್ದಾರೆ. ಹವಾಮಾನ ಇಲಾಖೆ ಲೆಕ್ಕಾಚಾರದಂತೆ ಜೂನ್‌ ಮೊದಲ ವಾರದಿಂದ ಮುಂಗಾರು ಮಳೆ ಉತ್ತಮವಾಗುತ್ತದೆ ಎಂದು ಹೇಳುತ್ತಾರೆ. ಆದರೆ, 15 ದಿನಗಳು ಕಳೆದರು ಮಳೆ ಮಾತ್ರ ಬಂದ್ದಿಲ್ಲ. ಯಾವಾಗ ಮಳೆ ಬರುತ್ತದೆ ಎಂದು ಮುಗಿಲಿನತ್ತ ರೈತರು ಮುಖ ಮಾಡಿದ್ದಾರೆ.

ಮುಂಗಾರು ಬಿತ್ತನೆಗೆ ಕೃಷಿ ಇಲಾಖೆ ಈಗಾಗಲೇ ಸಕಲ ಸಿದ್ಧತೆ ಮಾಡಿ ಕೊಂಡಿದ್ದು, ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ತಾಲೂಕಿನ 6 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಗೆ ಬೇಕಾಗುವ ಬೀಜಗಳನ್ನು ವಿತರಿಸಲಾಗುತ್ತಿದೆ.
- ವಿಶ್ವನಾಥ್‌, ಸಹಾಯಕ ಕೃಷಿ ಅಧಿಕಾರಿ, ಹೊನ್ನಾಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ