ಆ್ಯಪ್ನಗರ

ಜೆಡಿಎಸ್‌ ವಿಶ್ವಾಸಕ್ಕೆ ತೆಗೆದುಕೊಳ್ಳಲು ಶ್ರೀಗಳ ಸಲಹೆ

ಜೆಡಿಎಸ್‌ ಪಕ್ಷ ದ ಮುಖಂಡರು ಸೇರಿದಂತೆ ಕ್ಷೇತ್ರದ ಎಲ್ಲಾ ಸಮಾಜದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವಂತೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪಗೆ ಕಿವಿಮಾತು ಹೇಳಿದ್ದಾರೆ.

Vijaya Karnataka 13 Apr 2019, 5:00 am
ಹರಿಹರ : ಜೆಡಿಎಸ್‌ ಪಕ್ಷ ದ ಮುಖಂಡರು ಸೇರಿದಂತೆ ಕ್ಷೇತ್ರದ ಎಲ್ಲಾ ಸಮಾಜದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವಂತೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪಗೆ ಕಿವಿಮಾತು ಹೇಳಿದ್ದಾರೆ.
Vijaya Karnataka Web srinivas advised jds to take confidence
ಜೆಡಿಎಸ್‌ ವಿಶ್ವಾಸಕ್ಕೆ ತೆಗೆದುಕೊಳ್ಳಲು ಶ್ರೀಗಳ ಸಲಹೆ


ಶ್ರೀಗಳ 43ನೇ ಹುಟ್ಟುಹಬ್ಬದ ನಿಮಿತ್ತ ಬುಧವಾರ ಶುಭ ಕೋರಿ, ಆಶೀರ್ವಾದ ಪಡೆಯಲು ಸಮೀಪದ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠಕ್ಕೆ ತೆರಳಿದ್ದ ಎಚ್‌.ಬಿ.ಮಂಜಪ್ಪ ಮತ್ತಿತರ ಕಾಂಗ್ರೆಸ್‌ ಮುಖಂಡರೊಂದಿಗೆ ಆಪ್ತ ಸಮಾಲೋಚನೆ ನಡೆಸಿರುವ ಶ್ರೀಗಳು ಮತದಾರರ ವಿಶ್ವಾಸ ಪಡೆದು ಚುನಾವಣೆಯಲ್ಲಿ ಯಶಸ್ಸು ಗಳಿಸಲು ಹಲವು ಸೂತ್ರಗಳನ್ನು ಹಾಕಿಕೊಟ್ಟರೆಂದು ತಿಳಿದುಬಂದಿದೆ.

ಚನ್ನಯ್ಯ ಒಡೆಯರ್‌ ನಂತರ ಸಮಾಜದ ಮುಖಂಡರೊಬ್ಬರಿಗೆ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುವ ಸುವರ್ಣಾವಕಾಶ ಒದಗಿ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಕಾರ್ಯ ನಡೆಸಿರಿ. ಸೂಕ್ತ ಕಾರ್ಯತಂತ್ರ ರೂಪಿಸಿ, ಎಲ್ಲರ ವಿಶ್ವಾಸಗಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಹೇಳಿದ್ದಾರೆ.

ಕ್ಷೇತ್ರದ ಹರಿಹರ, ಹೊನ್ನಾಳಿ, ಹರಪನಹಳ್ಳಿ ಹಾಗೂ ಮಾಯಕೊಂಡ ಪ್ರದೇಶಗಳಲ್ಲಿ ಕುರುಬ ಸಮುದಾಯದ ಮತದಾರರು ಗರಿಷ್ಟ ಸಂಖ್ಯೆಯಲ್ಲಿದ್ದಾರೆ. ಲಿಂಗಾಯಿತರು, ಅಲ್ಪಸಂಖ್ಯಾತರು, ಪರಿಶಿಷ್ಟರು, ಇತರೆ ಹಿಂದುಳಿದ ವರ್ಗದವರೆಲ್ಲರ ಮನಗೆದ್ದು ಮತ ಪಡೆಯುವಂತೆ ಸೂಚಿಸಿದ್ದಾರೆ.

ಜೆಡಿಎಸ್‌ ಮುಖಂಡರ ಭೇಟಿಯಾಗಿ:

ಜೆಡಿಎಸ್‌ ಮುಖಂಡರ ಚುನಾವಣಾ ಪ್ರಚಾರಕ್ಕೆ ಬರುತ್ತಿಲ್ಲವೆಂದು ದೂರುವುದು ಬೇಡ, ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ಸ್ಥಳೀಯವಾಗಿ ನಿಮ್ಮ ಮಧ್ಯೆ ಏನೆ ಬಿನ್ನಾಭಿಪ್ರಾಯ, ವೈಮನಸ್ಸುಗಳಿದ್ದರೂ ಅವುಗಳನ್ನು ಬದಿಗೊತ್ತಿ ಗೌರವದಿಂದ ಕಾಣಿರಿ. ಕೂಡಲೆ ಎಚ್‌.ಎಸ್‌.ಶಿವಶಂಕರ್‌ ಸೇರಿದಂತೆ ಮತ್ತಿತರೆ ಮುಖಂಡರ ಭೇಟಿಯಾಗಿ ಪ್ರಚಾರಕ್ಕೆ ಕರೆತನ್ನಿ ಎಂದು ಸಲಹೆ ನೀಡಿದ್ದಾರೆ.

ಎಸ್‌ಎಸ್‌ಎಂ ಪಾಲ್ಗುಳ್ಳುವಿಕೆ?:

ಚುನಾವಣೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಇನ್ವಾಲ್ಮೆಂಟ್‌ ಹೇಗಿದೆ? ಅವರು ಪೂರ್ಣ ಪ್ರಮಾಣದಲ್ಲಿ ಚುನಾವಣೆಗೆ ತೊಡಗಿಸಿಕೊಳ್ಳುತ್ತಿದ್ದಾರೆಯೇ ಎಂದು ಶ್ರೀಗಳು ಕೇಳಿದ್ದು, ಶಾಮನೂರು ಕುಟುಂಬದವರು ಪೂರ್ಣ ಮನಸ್ಸಿನಿಂದ ನನಗೆ ಬೆಂಬಲಿಸುತ್ತಿದ್ದಾರೆಂದು ಮಂಜಪ್ಪ ಹೇಳಿದ್ದಾರೆ.

ಡಾ.ನಾಗಪ್ಪ ಬೆಂಬಲ ಪಡೆಯಿರಿ:

ಸಮಾಜದ ಹಿರಿಯ ಮುಖಂಡರೂ ಆದ ಮಾಜಿ ಸಚಿವ ಡಾ.ವೈ.ನಾಗಪ್ಪರ ಮನೆಗೂ ತೆರಳಿ ಮಾತುಕತೆ ನಡೆಸಿರಿ. ಅವರೂ ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗುವಂತೆ ಮನವೊಲಿಸಿ ಎಂದು ಸಹ ಶ್ರೀಗಳು ಹೇಳಿದ್ದು, ಎಚ್‌.ಬಿ.ಮಂಜಪ್ಪ ಖುದ್ದು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ಮತದಾನದ ವೇಳೆ ನಾನು ಇಲ್ಲಿರುವುದಿಲ್ಲ. ಪೂರ್ವ ನಿಗದಿತ ಧಾರ್ಮಿಕ ಕಾರ್ಯಗಳಿಗೆಂದು ನಾನು ಜಪಾನ್‌ ದೇಶಕ್ಕೆ ತೆರಳಬೇಕಿದೆ. ನಮ್ಮ ಹಾರೈಕೆ ಸದಾ ನಿಮ್ಮೊಂದಿಗಿರುತ್ತದೆ ಎಂದು ಮಂಜಪ್ಪಗೆ ಶ್ರೀಗಳು ಆಶಿರ್ವದಿಸಿದ್ದಾರೆಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ