ದಾವಣಗೆರೆ : ಎಲ್ಲ ಕಡೆಗೂ, ಎಲ್ಲರಲ್ಲಿಯೂ ದೇವರಿದ್ದಾನೆ. ಕರೆಂಟ್ ಇಲ್ಲದೆ ಯಾವ ಯಂತ್ರವೂ ಹೇಗೆ ನಡೆಯಲ್ಲವೋ ಹಾಗೆ ದೇವರಿಲ್ಲದೆ ಇಲ್ಲಿ ಏನೂ ನಡೆಯಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ನಗರದ ಎಂಸಿಸಿ ಎ ಬ್ಲಾಕ್ನ ಶ್ರೀಕೃಷ್ಣ ಸೇವಾ ಟ್ರಸ್ಟ್ನ ಶ್ರೀ ಕೃಷ್ಣ ಕಲಾ ಮಂದಿರದಲ್ಲಿ ಸೋಮವಾರ ಸಂಸ್ಥಾನ ಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.
ಎಲ್ಲರಲ್ಲೂ ದೇವರನ್ನು ಕಾಣಬೇಕು. ಎಲ್ಲರ ಒಳಿತಿಗೆ ಪರಮಾತ್ಮನಲ್ಲಿ ಪ್ರಾರ್ಥಿಸಬೇಕು. ನಮ್ಮಲ್ಲಿ ನಮಗೆ ಆಧಾರವಾಗಿ, ಆಶ್ರಯವಾಗಿ ದೇವರಿದ್ದಾನೆ. ಎಲ್ಲರೂ ಈ ನೆಲದ ಮೇಲಿದ್ದೇವೆ. ಎಲ್ಲರಿಗೂ ಆಧಾರ ಭೂಮಿ. ಈ ಭೂಮಿಗೆ ಆಧಾರ ಪರಮಾತ್ಮ. ಎಲ್ಲರೊಳಗೂ ದೇವರಿದ್ದಾನೆ ಎಂದು ಭಾವಿಸಿ ಬದುಕುಬೇಕು. ಎಲ್ಲರ ಮೇಲೂ ದೇವನ ದಯೆ ಇರುತ್ತದೆ ಎಂದು ಹೇಳಿದರು.
ಎರಡು ವರ್ಷದ ಪರ್ಯಾಯದಲ್ಲಿ ಶ್ರೀ ಕೃಷ್ಣನ ಪೂಜೆ ಮಾಡುವಾಗ ಎಲ್ಲರಿಗೂ ಸುಖವಾಗಲಿ, ಲೋಕಕ್ಕೆ ಕಲ್ಯಾಣ ಆಗಲಿ ಎಂದು ಭಗವಂತನಲ್ಲಿ ಸಂಕಲ್ಪ ಮಾಡಿದೆ. ಪ್ರಾಣಿಗಳಲ್ಲಿ, ಎಲ್ಲರಲ್ಲೂ ದೇವರು ಇದ್ದಾನೆ. ದೇವರ ಬಗ್ಗೆ ಭಕ್ತಿ, ಸೇವೆ ಮೂಲಕ ಸಮಾಜಕ್ಕೆ ಉಪಕಾರ ಮಾಡಿದರೆ ಭಗವಂತ ಸಂತುಷ್ಟನಾಗುತ್ತಾನೆ. ಭಕ್ತಿ ಮತ್ತು ಸೇವೆ ಮುಖ್ಯ. ಇದನ್ನೇ ಮಧ್ವಾಚಾರ್ಯರು ಹೇಳಿದ್ದಾರೆ. ಎರಡು ವರ್ಷದ ಪರ್ಯಾಯ ಪೂಜೆ ನಂತರ ನಾವೀಗ ಶಾಲಾ ಕಾಲೇಜು ಆರಂಭಿಸಿ ಶಿಕ್ಷಣ ಸೇವಾ ಕಾರ್ಯ ಯೋಜನೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಶ್ರೀ ಕೃಷ್ಣ ಸೇವಾ ಟ್ರಸ್ಟ್ನ ಕೆ.ವಿ. ಆನಂದರಾವ್, ಕೆ. ಪದ್ಮನಾಭ ಭಟ್, ಡಿ. ಅನಂತಯ್ಯ, ಶ್ರೀಕಾಂತ್ ಸೇರಿ ಟ್ರಸ್ಟ್ನ ಇನ್ನಿತರೆ ಪದಾಧಿಕಾರಿಗಳು ಇದ್ದರು.
ವಿದ್ಯಾಲಯಕ್ಕೆ ಧನ ಸಹಾಯ ಮಾಡಿ
ಎರಡು ವರ್ಷದ ಪರ್ಯಾಯ ನಂತರ ಮಧ್ವಾಚಾರ್ಯರ ಜನ್ಮ ಸ್ಥಳ ಪಾಜಕದಲ್ಲಿ ಪ್ರಾಥಮಿಕದಿಂದ ಕಾಲೇಜುವರೆಗೆ ಶಿಕ್ಷಣ ನೀಡುವ ಯೋಜನೆ ರೂಪಿಸಿದ್ದೇವೆ. ಹತ್ತಾರು ಕೋಟಿ ರೂ.ಗಳ ಈ ಯೋಜನೆಗೆ ಭಕ್ತರು ಸಹಕಾರ ನೀಡುತ್ತಿದ್ದಾರೆ. 5 ಸಾವಿರದಿಂದ 5 ಲಕ್ಷದವರೆಗೂ ದೇಣಿಗೆ ಕೊಡಬಹುದು. ಯಾರಿಗೂ ಒತ್ತಾಯ ಇಲ್ಲ ಎಂದು ಶ್ರೀಗಳು ಹೇಳಿದರು.
ಇಲ್ಲಿ ಊಟ ಮತ್ತು ವಸತಿ ಉಚಿತ. ಶಿಕ್ಷಣದ ವೆಚ್ಚ ಮಾತ್ರ ಶುಲ್ಕವಾಗಿ ತೆಗೆದುಕೊಳ್ಳಲಾಗುವುದು. ಇಲ್ಲಿ ಶಿಕ್ಷಣದ ಜತೆ ಧರ್ಮ, ಸಂಸ್ಕಾರ, ಸಂಸ್ಕೃತಿ ಜ್ಞಾನ ನೀಡಲಾಗುವುದು. ಈ ಆನಂದತೀರ್ಥ ವಸತಿ ವಿದ್ಯಾಲಯದಲ್ಲಿ ಕೇವಲ ಉಡುಪಿ ವಿದ್ಯಾರ್ಥಿಗಳು ಮಾತ್ರ ಇಲ್ಲ, ಕೊಪ್ಪಳ, ಬಾಗಲಕೋಟೆ, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದವರಿದ್ದಾರೆ. ಹಾಸ್ಟೆಲ್ ಕಟ್ಟಡಗಳು ಆಗಿವೆ, ಕಾಲೇಜು ಆಗಬೇಕಿದೆ. ಶಿಕ್ಷಣದಲ್ಲಿ ರಾಜಕೀಯ, ಅರ್ಥಶಾಸ್ತ್ರದ ಜತೆ ದೇವರು, ಧರ್ಮ ಸೇರಿ ಧಾರ್ಮಿಕ ಶಿಕ್ಷಣವೂ ಆಗಬೇಕು. ಇದು ಪ್ರಹ್ಲಾದ ಶಿಕ್ಷಣ ಆಗಬೇಕು, ಹಿರಣ್ಯಕಶಿಪು ಶಿಕ್ಷಣ ಆಗಬಾರದು ಎಂದರು.
21ರವರೆಗೆ ಉಪನ್ಯಾಸ
ದಾವಣಗೆರೆ ನಗರದ ಕೆ.ಬಿ. ಬಡಾವಣೆಯ ರಾಘವೇಂದ್ರ ಮಠದಲ್ಲಿ ಜೂ. 21 ರವರೆಗೆ ಉಪನ್ಯಾಸ ಇರುತ್ತದೆ. ಎಲ್ಲರೂ ಪಾಲ್ಗೊಳ್ಳುವಂತೆ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ತಿಳಿಸಿದರು.
ನಗರದ ಎಂಸಿಸಿ ಎ ಬ್ಲಾಕ್ನ ಶ್ರೀಕೃಷ್ಣ ಸೇವಾ ಟ್ರಸ್ಟ್ನ ಶ್ರೀ ಕೃಷ್ಣ ಕಲಾ ಮಂದಿರದಲ್ಲಿ ಸೋಮವಾರ ಸಂಸ್ಥಾನ ಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.
ಎಲ್ಲರಲ್ಲೂ ದೇವರನ್ನು ಕಾಣಬೇಕು. ಎಲ್ಲರ ಒಳಿತಿಗೆ ಪರಮಾತ್ಮನಲ್ಲಿ ಪ್ರಾರ್ಥಿಸಬೇಕು. ನಮ್ಮಲ್ಲಿ ನಮಗೆ ಆಧಾರವಾಗಿ, ಆಶ್ರಯವಾಗಿ ದೇವರಿದ್ದಾನೆ. ಎಲ್ಲರೂ ಈ ನೆಲದ ಮೇಲಿದ್ದೇವೆ. ಎಲ್ಲರಿಗೂ ಆಧಾರ ಭೂಮಿ. ಈ ಭೂಮಿಗೆ ಆಧಾರ ಪರಮಾತ್ಮ. ಎಲ್ಲರೊಳಗೂ ದೇವರಿದ್ದಾನೆ ಎಂದು ಭಾವಿಸಿ ಬದುಕುಬೇಕು. ಎಲ್ಲರ ಮೇಲೂ ದೇವನ ದಯೆ ಇರುತ್ತದೆ ಎಂದು ಹೇಳಿದರು.
ಎರಡು ವರ್ಷದ ಪರ್ಯಾಯದಲ್ಲಿ ಶ್ರೀ ಕೃಷ್ಣನ ಪೂಜೆ ಮಾಡುವಾಗ ಎಲ್ಲರಿಗೂ ಸುಖವಾಗಲಿ, ಲೋಕಕ್ಕೆ ಕಲ್ಯಾಣ ಆಗಲಿ ಎಂದು ಭಗವಂತನಲ್ಲಿ ಸಂಕಲ್ಪ ಮಾಡಿದೆ. ಪ್ರಾಣಿಗಳಲ್ಲಿ, ಎಲ್ಲರಲ್ಲೂ ದೇವರು ಇದ್ದಾನೆ. ದೇವರ ಬಗ್ಗೆ ಭಕ್ತಿ, ಸೇವೆ ಮೂಲಕ ಸಮಾಜಕ್ಕೆ ಉಪಕಾರ ಮಾಡಿದರೆ ಭಗವಂತ ಸಂತುಷ್ಟನಾಗುತ್ತಾನೆ. ಭಕ್ತಿ ಮತ್ತು ಸೇವೆ ಮುಖ್ಯ. ಇದನ್ನೇ ಮಧ್ವಾಚಾರ್ಯರು ಹೇಳಿದ್ದಾರೆ. ಎರಡು ವರ್ಷದ ಪರ್ಯಾಯ ಪೂಜೆ ನಂತರ ನಾವೀಗ ಶಾಲಾ ಕಾಲೇಜು ಆರಂಭಿಸಿ ಶಿಕ್ಷಣ ಸೇವಾ ಕಾರ್ಯ ಯೋಜನೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಶ್ರೀ ಕೃಷ್ಣ ಸೇವಾ ಟ್ರಸ್ಟ್ನ ಕೆ.ವಿ. ಆನಂದರಾವ್, ಕೆ. ಪದ್ಮನಾಭ ಭಟ್, ಡಿ. ಅನಂತಯ್ಯ, ಶ್ರೀಕಾಂತ್ ಸೇರಿ ಟ್ರಸ್ಟ್ನ ಇನ್ನಿತರೆ ಪದಾಧಿಕಾರಿಗಳು ಇದ್ದರು.
ವಿದ್ಯಾಲಯಕ್ಕೆ ಧನ ಸಹಾಯ ಮಾಡಿ
ಎರಡು ವರ್ಷದ ಪರ್ಯಾಯ ನಂತರ ಮಧ್ವಾಚಾರ್ಯರ ಜನ್ಮ ಸ್ಥಳ ಪಾಜಕದಲ್ಲಿ ಪ್ರಾಥಮಿಕದಿಂದ ಕಾಲೇಜುವರೆಗೆ ಶಿಕ್ಷಣ ನೀಡುವ ಯೋಜನೆ ರೂಪಿಸಿದ್ದೇವೆ. ಹತ್ತಾರು ಕೋಟಿ ರೂ.ಗಳ ಈ ಯೋಜನೆಗೆ ಭಕ್ತರು ಸಹಕಾರ ನೀಡುತ್ತಿದ್ದಾರೆ. 5 ಸಾವಿರದಿಂದ 5 ಲಕ್ಷದವರೆಗೂ ದೇಣಿಗೆ ಕೊಡಬಹುದು. ಯಾರಿಗೂ ಒತ್ತಾಯ ಇಲ್ಲ ಎಂದು ಶ್ರೀಗಳು ಹೇಳಿದರು.
ಇಲ್ಲಿ ಊಟ ಮತ್ತು ವಸತಿ ಉಚಿತ. ಶಿಕ್ಷಣದ ವೆಚ್ಚ ಮಾತ್ರ ಶುಲ್ಕವಾಗಿ ತೆಗೆದುಕೊಳ್ಳಲಾಗುವುದು. ಇಲ್ಲಿ ಶಿಕ್ಷಣದ ಜತೆ ಧರ್ಮ, ಸಂಸ್ಕಾರ, ಸಂಸ್ಕೃತಿ ಜ್ಞಾನ ನೀಡಲಾಗುವುದು. ಈ ಆನಂದತೀರ್ಥ ವಸತಿ ವಿದ್ಯಾಲಯದಲ್ಲಿ ಕೇವಲ ಉಡುಪಿ ವಿದ್ಯಾರ್ಥಿಗಳು ಮಾತ್ರ ಇಲ್ಲ, ಕೊಪ್ಪಳ, ಬಾಗಲಕೋಟೆ, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದವರಿದ್ದಾರೆ. ಹಾಸ್ಟೆಲ್ ಕಟ್ಟಡಗಳು ಆಗಿವೆ, ಕಾಲೇಜು ಆಗಬೇಕಿದೆ. ಶಿಕ್ಷಣದಲ್ಲಿ ರಾಜಕೀಯ, ಅರ್ಥಶಾಸ್ತ್ರದ ಜತೆ ದೇವರು, ಧರ್ಮ ಸೇರಿ ಧಾರ್ಮಿಕ ಶಿಕ್ಷಣವೂ ಆಗಬೇಕು. ಇದು ಪ್ರಹ್ಲಾದ ಶಿಕ್ಷಣ ಆಗಬೇಕು, ಹಿರಣ್ಯಕಶಿಪು ಶಿಕ್ಷಣ ಆಗಬಾರದು ಎಂದರು.
21ರವರೆಗೆ ಉಪನ್ಯಾಸ
ದಾವಣಗೆರೆ ನಗರದ ಕೆ.ಬಿ. ಬಡಾವಣೆಯ ರಾಘವೇಂದ್ರ ಮಠದಲ್ಲಿ ಜೂ. 21 ರವರೆಗೆ ಉಪನ್ಯಾಸ ಇರುತ್ತದೆ. ಎಲ್ಲರೂ ಪಾಲ್ಗೊಳ್ಳುವಂತೆ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ತಿಳಿಸಿದರು.