ಆ್ಯಪ್ನಗರ

ದಾವಣಗೆರೆ: ಇನ್ನೂ 298 ಫಲಿತಾಂಶ ಬಾಕಿ

​​ಇಲ್ಲಿಯವರೆಗೆ 1447 ಸ್ಯಾಂಪಲ್‌ ಕಳುಹಿಸಲಾಗಿದೆ. 309 ಜನರನ್ನು ನಾನಾ ಲಾಡ್ಜ್‌ಗಳಲ್ಲಿ ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ ಮಾಡಲಾಗಿದೆ. ಆಸ್ಪತ್ರೆಯಲ್ಲಿ 22 ಜನರನ್ನು ಐಸೊಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ ಎಂದು ಡಿಸಿ ಮಹಾತೇಶ್‌ ಬೀಳಗಿ ತಿಳಿಸಿದ್ದಾರೆ.

Vijaya Karnataka Web 7 May 2020, 9:23 pm
ದಾವಣಗೆರೆ: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ದಾವಣಗೆರೆಯಲ್ಲಿ ಇನ್ನೂ ಆತಂಕ ಕಡಿಮೆಯಾಗಿಲ್ಲ.98 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಒಟ್ಟು 298 ಫಲಿತಾಂಶ ಬಾಕಿ ಇದೆ.
Vijaya Karnataka Web ಕೊರೊನಾ
ಕೊರೊನಾ


ಇಲ್ಲಿಯವರೆಗೆ 1447 ಸ್ಯಾಂಪಲ್‌ ಕಳುಹಿಸಲಾಗಿದೆ. 309 ಜನರನ್ನು ನಾನಾ ಲಾಡ್ಜ್‌ಗಳಲ್ಲಿ ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ ಮಾಡಲಾಗಿದೆ. ಆಸ್ಪತ್ರೆಯಲ್ಲಿ 22 ಜನರನ್ನು ಐಸೊಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ ಎಂದು ಡಿಸಿ ಮಹಾತೇಶ್‌ ಬೀಳಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲಾಸ್ಪತ್ರೆಯಲ್ಲಿನಾಲ್ಕು ಜನರ ತಜ್ಞ ವೈದ್ಯರ ತಂಡವನ್ನು ಇಂದಿನಿಂದಲೇ ರಚಿಸಿ ವರದಿಯಾಗಿರುವ 15 ತೀವ್ರ ಉಸಿರಾಟದ ತೊಂದರೆ ಇರುವ ಪ್ರಕರಣಗಳನ್ನು ದಿನದಲ್ಲಿ3 ಬಾರಿ ತಪಾಸಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಐಎಲ್‌ಐ ಸರ್ವೆ: ಜಾಲಿನಗರದಲ್ಲಿ 39 ಮತ್ತು ಬಾಷಾನಗರದಲ್ಲಿ 33 ಐಎಲ್‌ಐ ಪ್ರಕರಣಗಳು ಗುರುವಾರದ ಸರ್ವೆಯಲ್ಲಿ ಕಂಡುಬಂದಿವೆ. ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜನರು ಐಎಲ್‌ಐ ಮತ್ತು ಉಸಿರಾಟದ ತೊಂದರೆಗಳನ್ನು ಮುಚ್ಚಿಡುವ ಸಾಧ್ಯತೆ ಇರುವುದರಿಂದ ಐಎಲ್‌ಐ ಮತ್ತು ಸಾರಿ ಪ್ರಕರಣಗಳನ್ನು ಪತ್ತೆ ಹಚ್ಚಲು ಎಲ್ಲಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಸರ್ವೇ ನಡೆಸಲಾಗುವುದು ಎಂದರು.

ಎಸ್ಪಿ ಹನುಮಂತರಾಯ ಕಂಟೋನ್ಮೆಂಟ್‌ ಜೋನ್‌ ಗಳಲ್ಲಿ ಕೈಗೊಂಡಿರುವ ಬಿಗಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌, ಜಿಲ್ಲಾಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ