ಆ್ಯಪ್ನಗರ

ವಿದ್ಯಾರ್ಥಿಗಳ ಭಯ ಹೊಗಲಾಡಿಸಿ ಆತ್ಮವಿಶ್ವಾಸ ತುಂಬಿ

ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯಲ್ಲಿ ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸದೆ, ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ದ್ವಿತೀಯ ಪಿಯುಸಿ ಪರೀಕ್ಷಾ ಮುಖ್ಯ ಅಧೀಕ್ಷ ಕ ನಾರಾಯಣ ನಾಯ್ಕರ್‌ ಹೇಳಿದರು.

Vijaya Karnataka 28 Feb 2019, 5:00 am
ಹೊನ್ನಾಳಿ : ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯಲ್ಲಿ ಅನಗತ್ಯವಾಗಿ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸದೆ, ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ದ್ವಿತೀಯ ಪಿಯುಸಿ ಪರೀಕ್ಷಾ ಮುಖ್ಯ ಅಧೀಕ್ಷ ಕ ನಾರಾಯಣ ನಾಯ್ಕರ್‌ ಹೇಳಿದರು.
Vijaya Karnataka Web students feel confused and confused
ವಿದ್ಯಾರ್ಥಿಗಳ ಭಯ ಹೊಗಲಾಡಿಸಿ ಆತ್ಮವಿಶ್ವಾಸ ತುಂಬಿ


ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.1ರ ಶುಕ್ರವಾರದಿಂದ ಆರಂಭವಾಗುವ ಹಿನ್ನೆಲೆ ಪಟ್ಟಣದ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕೊಠಡಿ ಮೇಲ್ವಿಚಾರಕರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಸುಗಮ, ಶಾಂತಿಯುತ, ಪಾರದರ್ಶಕ ಪರೀಕ್ಷೆಗೆ ಎಲ್ಲಾ ಕೊಠಡಿ ಮೇಲ್ವಿಚಾರಕರು ಸಹಕರಿಸಬೇಕು. ಒಂದು ವೇಳೆ ಕೊಠಡಿ ಮೇಲ್ವಿಚಾರಕರು ಕರ್ತವ್ಯ ಲೋಪ ಎಸಗಿದರೆ ಬೆಂಗಳೂರಿನಲ್ಲಿರುವ ಪದವಿ ಪೂರ್ವ ಶಿಕ್ಷ ಣ ಇಲಾಖೆಯ ಕಚೇರಿಗೆ ತಮ್ಮ ಸ್ವಂತ ವೆಚ್ಚದಲ್ಲೇ ತೆರಳಿ ಲೋಪಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಎಲ್ಲಾ ಕೊಠಡಿ ಮೇಲ್ವಿಚಾರಕರು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ಪತ್ರ ತರದಿದ್ದರೆ ಗದರಿಸಬೇಡಿ:

ಕಚೇರಿ ಅಧೀಕ್ಷ ಕ ಎಚ್‌. ಬಸವರಾಜ್‌ ಮಾತನಾಡಿ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತರದಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹೆದರಿಸಬಾರದು. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕೊಠಡಿ ಮೇಲ್ವಿಚಾರಕರು ಈ ವಿಚಾರವನ್ನು ತಕ್ಷ ಣ ಪರೀಕ್ಷಾ ಮುಖ್ಯ ಅಧೀಕ್ಷ ಕರು ಮತ್ತು ಕಚೇರಿ ಅಧೀಕ್ಷ ಕರ ಗಮನಕ್ಕೆ ತರಬೇಕು. ನಂತರ ಅವರ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆ ಬಂಡಲ್‌ ಪರಿಶೀಲಿಸಿ:
ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಪ್ರಾರಂಭಕ್ಕೂ ಒಂದು ಗಂಟೆ ಮೊದಲು ಕಾಲೇಜಿಗೆ ಆಗಮಿಸಬೇಕು. ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಪಡೆದುಕೊಂಡು, ಅವುಗಳು ಸುಸ್ಥಿತಿಯಲ್ಲಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅವುಗಳ ಕ್ರಮ ಸಂಖ್ಯೆಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಸಮರ್ಪಕ ದಾಖಲೆ ಇಟ್ಟುಕೊಳ್ಳಬೇಕು ಎಂದರು.

ಉತ್ತರ ಪತ್ರಿಕೆ ಪಾಲಕ ಸುರೇಶ್‌ ಲಮಾಣಿ ಮಾತನಾಡಿದರು. ಉಪನ್ಯಾಸಕರಾದ ಬಿ.ಇ. ಪ್ರಕಾಶ್‌, ಬಿ.ಜೆ. ಸುಪ್ರಿಯಾ, ಡಿ.ಲತಾ, ಕೆ. ನಾಗರಾಜ್‌, ಸುಮತಿ, ಸಲ್ಮಾ ಬಾನು, ಮಂಜಾನಾಯ್ಕ್‌, ಉಮ್ಮೇಹಾನಿ, ಬಿ. ನೇತ್ರಾವತಿ, ಚನ್ನೇಶ್‌.ಬಿ.ಇದರಮನಿ, ಅಜಿತಾ ಜೋಗಳೇಕರ್‌, ಕೆ. ನೇತ್ರಾವತಿ, ಕಾವ್ಯ, ಶಾಲಿನಿ, ಪ್ರತಿಮಾ, ಐಟಿಐ ಕಾಲೇಜು ಉಪನ್ಯಾಸಕ ಶಶಿಧರ್‌, ಪ್ರೌಢಶಾಲಾ ವಿಭಾಗದ ಶಿಕ್ಷ ಕಿಯರಾದ ಪುಷ್ಪಾ ಹೊಂಬಾಳೆ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಶ್ನೆ ಪತ್ರಿಕೆಯ ಬಂಡಲ್‌ನ ಮೇಲೆ ಪರೀಕ್ಷಾ ಕೊಠಡಿಯಲ್ಲಿನ ಐವರು ವಿದ್ಯಾರ್ಥಿಗಳ ಸಹಿ ಮಾಡಿಸಿಕೊಂಡ ಬಳಿಕವಷ್ಟೇ ಪ್ರಶ್ನೆಪತ್ರಿಕೆ ಬಂಡಲ್‌ನ ಸೀಲ್‌ ತೆಗೆದು ವಿತರಿಸಬೇಕು. ಎಲ್ಲಾ ಹಂತಗಳಲ್ಲೂ ಕೊಠಡಿ ಮೇಲ್ವಿಚಾರಕರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಪರೀಕ್ಷೆಯ ಯಶಸ್ಸಿಗೆ ಸಹಕರಿಸಬೇಕು.
- ಎಚ್‌. ಬಸವರಾಜ್‌, ಶಿಕ್ಷಣ ಇಲಾಖೆ ಕಚೇರಿ ಅಧೀಕ್ಷ ಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ