ಆ್ಯಪ್ನಗರ

ಶಿಕ್ಷಕರೇ ಶಾಲೆಗೆ ಚಕ್ಕರ್! ಸ್ಕೂಲಿಗೆ ಬೀಗ ಜಡಿದು ಪ್ರವಾಸ, ಮೋಜು- ಮಸ್ತಿ!!

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗೂ ಮಾಹಿತಿ ನೀಡದೇ ಮುಖ್ಯೋಪಾಧ್ಯಾಯ ಆನಂದಪ್ಪನವರ ನೇತೃತ್ವದಲ್ಲಿ ಎಲ್ಲಾ 14 ಜನ ಶಿಕ್ಷಕರು ಮತ್ತು ಶಿಕ್ಷಕಿಯರು ಸೇರಿಕೊಂಡು ಶನಿವಾರ ಮತ್ತು ಭಾನುವಾರ ದಾಂಡೇಲಿ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಈ ಶಾಲೆಯಲ್ಲಿ 290 ಮಕ್ಕಳು ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ.

Edited byಚೇತನ್ ಓ.ಆರ್. | Vijaya Karnataka Web 28 Nov 2022, 10:29 am

ಹೈಲೈಟ್ಸ್‌:

  • ಜಗಳೂರು ತಾಲೂಕಿನ ಬಿಳಚೋಡು ಕೆಪಿಎಸ್‌ ಶಾಲಾ ಶಿಕ್ಷಕರ ಮೋಜು ಮಸ್ತಿ.
  • ಮುಖ್ಯಶಿಕ್ಷಕ ಸೇರಿ 14 ಜನ ಶಿಕ್ಷಕರು ರಜೆ ಘೋಷಿಸಿ ದಾಂಡೇಲಿ ಪ್ರವಾಸ.
  • ಶಾಲೆಯ ಮುಖ್ಯೋಪಾಧ್ಯಾಯ ಆನಂದಪ್ಪನವರ ನೇತೃತ್ವದಲ್ಲಿ ಎಲ್ಲಾ 14 ಜನ ಶಿಕ್ಷಕರು ಮತ್ತು ಶಿಕ್ಷಕಿಯರು ಸೇರಿಕೊಂಡು ಶನಿವಾರ ಮತ್ತು ಭಾನುವಾರ ದಾಂಡೇಲಿ ಪ್ರವಾಸ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Teacher
Representational Image
ವಿನಾಯಕ ಪೂಜಾರ, ದಾವಣಗೆರೆ
ದಾವಣಗೆರೆ: ಶಾಲೆಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳಿಗೆ ತಕ್ಕ ಶಾಸ್ತಿ ಮಾಡಿ ಅವರನ್ನು ವಿದ್ಯಾವಂತರಾಗಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿರುತ್ತದೆ. ಆದರೆ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗೂ ಮಾಹಿತಿ ನೀಡದೇ ತಮ್ಮಷ್ಟಕ್ಕೆ ತಾವೇ ಶಾಲೆಗೆ ರಜೆ ಘೋಷಿಸಿ, ಶಾಲೆಗೆ ಬೀಗ ಜಡಿದು ತಮ್ಮ ವೈಯಕ್ತಿಕ ಮೋಜು- ಮಸ್ತಿಗಾಗಿ ಪ್ರವಾಸ ಕೈಗೊಂಡಿರುವುದು ಬೆಳಕಿಗೆ ಬಂದಿದೆ.

ನವೆಂಬರ್‌ 12ರ ಶನಿವಾರ ಶಾಲೆಗೆ ಬೀಗ ಜಡಿದು, ಮಕ್ಕಳಿಗೆ ರಜೆ ಘೋಷಿಸಿ ದಾಂಡೇಲಿ ಪ್ರವಾಸಕ್ಕೆ ಹೋಗಿ ಮೋಜು-ಮಸ್ತಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇದು ಗ್ರಾಮಸ್ಥರ ಕೆಂಗಣ್ಣಿಗೆ ಕಾರಣವಾಗಿದೆ. ಈ ಶಾಲೆಯಲ್ಲಿ 290 ಮಕ್ಕಳು ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡುತ್ತಿದ್ದು, ಈ ಎಲ್ಲಾ ಮಕ್ಕಳಿಗೆ ಶನಿವಾರ ಒಂದು ದಿನ ರಜೆ ನೀಡಿ, ಶಾಲೆಯ ಮುಖ್ಯೋಪಾಧ್ಯಾಯ ಆನಂದಪ್ಪನವರ ನೇತೃತ್ವದಲ್ಲಿ ಎಲ್ಲಾ 14 ಜನ ಶಿಕ್ಷಕರು ಮತ್ತು ಶಿಕ್ಷಕಿಯರು ಸೇರಿಕೊಂಡು ಶನಿವಾರ ಮತ್ತು ಭಾನುವಾರ ದಾಂಡೇಲಿ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

ಮಕ್ಕಳಿಗೆ ದಾರಿ ತಪ್ಪದಂತೆ ಪಾಠ ಮಾಡಬೇಕಾಗಿದ್ದ, ಭವಿಷ್ಯತ್ತಿನ ನಿರ್ಮಾತೃಗಳಾಗಿರುವ ಶಿಕ್ಷಕರೇ ಹೀಗೆ ಮೋಜು- ಮಸ್ತಿಯಲ್ಲಿತೊಡಗಿದರೆ, ಇವರ ಕೈಯಲ್ಲಿಓದುವ ನಮ್ಮ ಮಕ್ಕಳ ಗತಿ ಏನು? ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಯ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಯಾರ ಗಮನಕ್ಕೂ ತರದೆ ಶಾಲೆ ಬಂದ್‌ ಮಾಡಿಕೊಂಡು ಪ್ರವಾಸಕ್ಕೆ ಹೋಗಿ ಬಂದಿರುವ ಎಲ್ಲಾಶಿಕ್ಷಕರಿಗೂ ಕಾರಣ ಕೇಳಿ ನೋಟಿಸ್‌ ನೀಡಿ, ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಜಗಳೂರು ಬಿಇಒಗೆ ಸೂಚನೆ ನೀಡಿದ್ದೇನೆ. ಜತೆಗೆ 14 ಜನ ಶಿಕ್ಷಕರ ಒಂದು ದಿನದ ಸಂಬಳ ಕಡಿತಗೊಳಿಸುತ್ತೇವೆ.
ಜಿ.ಆರ್‌. ತಿಪ್ಪೇಶಪ್ಪ, ದಾವಣಗೆರೆ ಡಿಡಿಪಿಐ

ಶಾಲೆಯ ಮುಖ್ಯ ಶಿಕ್ಷಕ ಆನಂದಪ್ಪ ಜನಪ್ರತಿನಿಧಿಯೊಬ್ಬರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ, ತಮ್ಮನ್ನು ಯಾವ ಅಧಿಕಾರಿ ಏನು ಮಾಡಲು ಸಾಧ್ಯ ಎಂಬ ಅಹಮ್ಮಿನಿಂದ ಅವರು ಎಲ್ಲಾಶಿಕ್ಷಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಕ್ಕಳಿಗೆ ರಜೆ ನೀಡಿ ಪ್ರವಾಸಕ್ಕೆ ಹೋಗಿ ಬಂದಿರುವ ಎಲ್ಲಾಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದು ಜಿಲ್ಲಾಡಳಿತಕ್ಕೂ ಮುಟ್ಟಿದ್ದು, ಜಿಲ್ಲಾ ಸಾರ್ವಜನಿಕ ಶೀಕ್ಷಣ ಇಲಾಖೆಯ ಉಪನಿರ್ದೇಶಕರು ಈ ವಿಷಯವಾಗಿ ಕಾರಣ ಕೇಳಿ 14 ಜನ ಶಿಕ್ಷಕರಿಗೂ ನೋಟಿಸ್‌ ಜಾರಿಯಾಗಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ