ಜಗಳೂರು : ಮದುವೆ ಮರುದಿನ 2 ಜೋಡಿ ನವದಂಪತಿ ಕಾರಿನಲ್ಲಿ ಹೋಗುತ್ತಿದ್ದಾಗ ಹುಣಸೆ ಮರವೊಂದಕ್ಕೆ ಡಿಕ್ಕಿ ಹೊಡೆದು ಮದುಮಗನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ, ನಾಲ್ವರು ಗಂಭೀರ ಗಾಯಗೊಂಡ ಘಟನೆ ಜಗಳೂರು ತಾಲೂಕಿನ ಲಕ್ಕಂಪುರದ ಬಳಿ ಸೋಮವಾರ ನಡೆದಿದೆ.
ಶಾಂತೇಶ್(26)ಮೃತರು. ತಾಲೂಕಿನ ಹೊಸಕೆರೆ ಗ್ರಾಮದ ಭದ್ರಪ್ಪ ರತ್ನಮ್ಮರ ಇಬ್ಬರು ಪುತ್ರರಾದ ವೀರೇಶ್, ಶಾಂತೇಶ್ ಭಾನುವಾರ ತಾಲೂಕಿನ ಕೊಡದಗುಡ್ಡದ ವೀರಭದ್ರೇಶ್ವರ ದೇವಸ್ಥಾನದ ಧಾರ್ಮಿಕ ಕ್ಷೇತ್ರದಲ್ಲಿ ಮದುವೆ ಆಗಿದ್ದರು.
ವೀರೇಶ್ ಕೂಡ್ಲಿಗಿ ತಾಲೂಕಿನ ಹಾರಕಬಾವಿಯಲ್ಲಿ ಚೇತನಕುಮಾರಿ ಹಾಗೂ ಶಾಂತೇಶ್ ಚಳ್ಳಕೆರೆ ತಾಲೂಕಿನ ಓಬೇನಹಳ್ಳಿಯ ರಶ್ಮಿಯೊಂದಿಗೆ ವಿವಾಹವಾಗಿತ್ತು. ಮರುದಿನ ಸೋಮವಾರ ಮಧ್ಯಾಹ್ನ ಬೀಗರ ಮನೆ ಹಾರಕಬಾವಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗಂಭೀರ ಗಾಯಗೊಂಡ ಚಾಲಕ ಸುನಿಲ್, ಉಳಿದ ಮೂವರು ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಷೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಯುವಕ ಜಗಳೂರಿನ ಜಲಾನಯನ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸಿದರೆ, ವೀರೇಶ್ ಬೆಣ್ಣೆಹಳ್ಳಿಯ ಖಾಸಗಿ ಪ್ರೌಢÜಶಾಲೆಯಲ್ಲಿ ದೈಹಿಕ ಶಿಕ್ಷ ಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಸಿಪಿಐ ಬಿ.ಕೆ.ಲತಾ ಸ್ಥಳಕ್ಕೆ ಭೇಟಿ ನೀಡಿ, ಗಡಿಮಾಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಂತೇಶ್(26)ಮೃತರು. ತಾಲೂಕಿನ ಹೊಸಕೆರೆ ಗ್ರಾಮದ ಭದ್ರಪ್ಪ ರತ್ನಮ್ಮರ ಇಬ್ಬರು ಪುತ್ರರಾದ ವೀರೇಶ್, ಶಾಂತೇಶ್ ಭಾನುವಾರ ತಾಲೂಕಿನ ಕೊಡದಗುಡ್ಡದ ವೀರಭದ್ರೇಶ್ವರ ದೇವಸ್ಥಾನದ ಧಾರ್ಮಿಕ ಕ್ಷೇತ್ರದಲ್ಲಿ ಮದುವೆ ಆಗಿದ್ದರು.
ವೀರೇಶ್ ಕೂಡ್ಲಿಗಿ ತಾಲೂಕಿನ ಹಾರಕಬಾವಿಯಲ್ಲಿ ಚೇತನಕುಮಾರಿ ಹಾಗೂ ಶಾಂತೇಶ್ ಚಳ್ಳಕೆರೆ ತಾಲೂಕಿನ ಓಬೇನಹಳ್ಳಿಯ ರಶ್ಮಿಯೊಂದಿಗೆ ವಿವಾಹವಾಗಿತ್ತು. ಮರುದಿನ ಸೋಮವಾರ ಮಧ್ಯಾಹ್ನ ಬೀಗರ ಮನೆ ಹಾರಕಬಾವಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗಂಭೀರ ಗಾಯಗೊಂಡ ಚಾಲಕ ಸುನಿಲ್, ಉಳಿದ ಮೂವರು ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಷೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಯುವಕ ಜಗಳೂರಿನ ಜಲಾನಯನ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸಿದರೆ, ವೀರೇಶ್ ಬೆಣ್ಣೆಹಳ್ಳಿಯ ಖಾಸಗಿ ಪ್ರೌಢÜಶಾಲೆಯಲ್ಲಿ ದೈಹಿಕ ಶಿಕ್ಷ ಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಸಿಪಿಐ ಬಿ.ಕೆ.ಲತಾ ಸ್ಥಳಕ್ಕೆ ಭೇಟಿ ನೀಡಿ, ಗಡಿಮಾಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.