ಆ್ಯಪ್ನಗರ

ಲಾರಿ ಹರಿದು ವ್ಯಕ್ತಿ ಸಾವು

ನಗರದ ಗಾಂಧಿ ವೃತ್ತದಲ್ಲಿ ಲಾರಿಯೊಂದು ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

Vijaya Karnataka 12 Feb 2019, 5:00 am
ಹರಿಹರ : ನಗರದ ಗಾಂಧಿ ವೃತ್ತದಲ್ಲಿ ಲಾರಿಯೊಂದು ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
Vijaya Karnataka Web the death of the man was torn by the lorry
ಲಾರಿ ಹರಿದು ವ್ಯಕ್ತಿ ಸಾವು


ಮೃತರ ಗುರುತು ಪತ್ತೆಯಾಗಿಲ್ಲ. ಅಂದಾಜು 50 ವರ್ಷ ವಯೋಮಾನದ ಮೃತರು ಹಮಾಲಿ ಕೆಲಸ ಮಾಡುತ್ತಿರಬಹುದೆಂದು ಅಂದಾಜಿಸಲಾಗಿದೆ. ಸಂಜೆ 6ರ ಸಮಯದಲ್ಲಿ ರಸ್ತೆ ದಾಟುವಾಗ ಹರಪನಹಳ್ಳಿ ಕಡೆಯಿಂದ ಬಂದ 10 ವ್ಹೀಲರ್‌ ಲಾರಿ ಹರಿದು ಈ ಅವಘಡ ಸಂಭವಿಸಿದೆ.

ಲಾರಿಯು ತಲೆ ಮೇಲೆ ಸಾಗಿರುವುದರಿಂದ ವ್ಯಕ್ತಿಯು ಸ್ಥಳದಲ್ಲೆ ಸಾವನ್ನಪ್ಪಿದರು. ಜನ, ವಾಹನಗಳು ನಿಂತಿದ್ದರಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ ಆಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಟ್ರಾಫಿಕ್‌ ಕ್ಲಿಯರ್‌ ಮಾಡಿ, ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸಿದರು. ಸ್ಥಳಕ್ಕೆ ಸಿಪಿಐ ಗುರುನಾಥ, ತಹಸೀಲ್ದಾರ್‌ ರೆಹಾನ್‌ ಪಾಷಾ ಭೇಟಿ ನೀಡಿದ್ದರು.

ಕಿಲ್ಲರ್‌ ರಸ್ತೆ:
ಆಗಾಗ್ಗೆ ಅಪಘಾತಗಳಿಗೆ ಜನ ಬಲಿಯಾಗುವ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಸೋಮವಾರ ಮತ್ತೊಂದು ಬಲಿಯಾದಂತಾಗಿದೆ. ಈ ರಸ್ತೆಯನ್ನು ವಿಸ್ತರಣೆ ಮಾಡಿ ಅಥವಾ ಬೈಪಾಸ್‌ ನಿರ್ಮಿಸಿ ಕಿಲ್ಲರ್‌ ರಸ್ತೆಯಿಂದ ಮುಕ್ತಿ ಕೊಡಿಸಿ ಎಂಬ ಸಾರ್ವಜನಿಕರ ಆಗ್ರಹಕ್ಕೆ ಆಡಳಿತಗಾರರು ಗಮನ ಹರಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ