ಆ್ಯಪ್ನಗರ

ಹಿರೇಹಳ್ಳದಲ್ಲಿ ಕೊಚ್ಚಿಹೋದ ರೈತ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಕ್ಷ್ಮೇ ಸಾಗರದ ಬಳಿ ತುಂಬಿ ಹರಿಯುತ್ತಿರುವ ಹಿರೇಹಳ್ಳದಲ್ಲಿ ರೈತನೊಬ್ಬ ಕೊಚ್ಚಿಹೋದ ಘಟನೆ ಶುಕ್ರವಾರ ಸಂಜೆ ನಡೆದಿದೆ.

Vijaya Karnataka 27 May 2018, 2:18 pm
ಚನ್ನಗಿರಿ : ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಕ್ಷ್ಮೇ ಸಾಗರದ ಬಳಿ ತುಂಬಿ ಹರಿಯುತ್ತಿರುವ ಹಿರೇಹಳ್ಳದಲ್ಲಿ ರೈತನೊಬ್ಬ ಕೊಚ್ಚಿಹೋದ ಘಟನೆ ಶುಕ್ರವಾರ ಸಂಜೆ ನಡೆದಿದೆ.
Vijaya Karnataka Web the farmer who was buried in hirehallah
ಹಿರೇಹಳ್ಳದಲ್ಲಿ ಕೊಚ್ಚಿಹೋದ ರೈತ


ತಾಲೂಕಿನ ಲಕ್ಷ್ಮೇಸಾಗರದ ಬಸಪ್ಪ(65)ಕೊಚ್ಚಿ ಹೋದ ರೈತ.

ಹೊಳಲ್ಕೆರೆ ತಾಲೂಕಿನ ರಾಮಗಿರಿ, ತಾಳಿಕಟ್ಟೆ ಸುತ್ತಮುತ್ತ ಉತ್ತಮ ಮಳೆ ಆಗಿದ್ದು, ಚನ್ನಗಿರಿ ತಾಲೂಕಿನ ಕಾಕನೂರು ಕಡೆಯಿಂದ ಹರಿದು ಹೋಗುವ ಹಿರೇಹಳ್ಳ ತುಂಬಿ ಹರಿಯುತ್ತಿದೆ. ಇದು ಮುಂದೆ ಹರಿದು ಲಕ್ಷ್ಮಿ ಸಾಗರ ಚೆಕ್‌ಡ್ಯಾಂ ತಲುಪುತ್ತದೆ. ಈ ಚೆಕ್‌ಡ್ಯಾಂ ತುಂಬಿ ಹರಿಯುವಾಗ ಹೊಲಕ್ಕೆ ಹೋಗಿದ್ದ ಬಸಪ್ಪ ಎಂಬಾತ ಕೊಚ್ಚಿಹೋಗಿದ್ದಾನೆ.

ಪ್ರತಿಭಾರಿ ಮಳೆ ಬಂದಾಗಲೂ ಸಹ ಲಕ್ಷ್ಮಿಸಾಗರ ಚೆಕ್‌ ಡ್ಯಾಂ ತುಂಬಿಹರಿಯುತ್ತದೆ. ಆದರೆ ಶುಕ್ರವಾರ ಸುರಿದ ಮಳೆಗೆ ನೀರಿನ ವೇಗ ಹೆಚ್ಚಾಗಿ ರಸ್ತೆ ಮೇಲೆ 5 ರಿಂದ 6 ಅಡಿಗಳವರೆಗೂ ತುಂಬಿ ಹರಿದಿದೆ.

ತೇಲಿದ ಹಸು:


ಚನ್ನಗಿರಿ, ಸಂತೇಬೆನ್ನೂರು ಮಾರ್ಗ ಮಧ್ಯದ ಕಾಕನೂರು ಸೇತುವೆ ಬಳಿ ಕೂಡ ಒಂದು ಹಸು ತೇಲಿ ಹೋಗಿದೆ. ಸುಮಾರು ಐದಾರು ಗಂಟೆಗಳ ಕಾಲ ಸಂಚಾರ ವ್ಯತ್ಯಯವಾಗಿತ್ತು. ಸ್ಥಳಕ್ಕೆ ತಹಸೀಲ್ದಾರ್‌ ಚಂದ್ರಶೇಖರ್‌, ಅಗ್ನಿ ಶಾಮಕ, ಪೊಲೀಸ್‌ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕೊಚ್ಚಿ ಹೋದ ರೈತ, ಹಸು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಪತ್ತೆ ಕಾರ್ಯ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ