ಆ್ಯಪ್ನಗರ

ನಿರಶನ ನಿರತ ಹೊನ್ನಾಳಿ ಶಾಸಕ ಅಸ್ವಸ್ಥ

ತಾಲೂಕು ಕಚೇರಿ ಮುಂಭಾಗ ಆಹೋ ರಾತ್ರಿ ಧರಣಿಯಲ್ಲಿ ಪಾಲ್ಗೊಂಡಿರುವ ಶಾಸಕ ಎಂಪಿರೇಣುಕಾಚಾರ್ಯ ಮತ್ತೊಮ್ಮೆ ಅಸ್ವಸ್ಥಗೊಂಡಿದ್ದಾರೆ...

Vijaya Karnataka 3 Dec 2018, 5:00 am
ಹೊನ್ನಾಳಿ : ತಾಲೂಕು ಕಚೇರಿ ಮುಂಭಾಗ ಆಹೋ ರಾತ್ರಿ ಧರಣಿಯಲ್ಲಿ ಪಾಲ್ಗೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತೊಮ್ಮೆ ಅಸ್ವಸ್ಥಗೊಂಡಿದ್ದಾರೆ. ಬಾನುವಾರ ಬೆಳಗಿನಜಾವ ಹಲವಾರು ಬಾರಿ ವಾಂತಿ ಆಗಿದ್ದರಿಂದ ಶಾಸಕರನ್ನು ಮನೆಗೆ ಕರೆ ತರಲಾಯಿತು.
Vijaya Karnataka Web the fast haulah legislator is ill
ನಿರಶನ ನಿರತ ಹೊನ್ನಾಳಿ ಶಾಸಕ ಅಸ್ವಸ್ಥ


ನಂತರ ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಗ್ಲೂಕೋಸ್‌ ಹಾಕಿಸಿದ್ದರು, ರಕ್ತದೊತ್ತಡ ಹೆಚ್ಚಾಗಿ ವಾಂತಿ ಆಗಿದೆ. ಅವರಿಗೆ ವಿಶ್ರಾಂತಿ ಅಗತ್ಯ ಇದೆ ಎಂದು ತಿಳಿಸಿದರು. ಸ್ಥಳಕ್ಕೆ ತಹಸೀಲ್ದಾರ್‌ ತುಷಾರ್‌ ಬಿ. ಹೊಸೂರು ಭೇಟಿ ನೀಡಿ ಶಾಸಕರ ಆರೋಗ್ಯ ವಿಚಾರಿಸಿದರು. ಈ ಹಿಂದೆ ನಿರಶನ ವೇಳೆಯಲ್ಲೂ ಶುಗರ್‌, ಬಿಪಿ ಹೆಚ್ಚಾಗಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ