ಆ್ಯಪ್ನಗರ

ಧೂಳೆ ಹೊಳೆಗೆ ನುಗ್ಗಿದ ಚಿರತೆ, ಗ್ರಾಮಸ್ಥರ ಆತಂಕ

ಹೊಳೆಸಿರಿಗೆರೆಯಲ್ಲಿ ನಾಲ್ವರ ಮೇಲೆ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ, ಧೂಳೆಹೊಳೆ ಗ್ರಾಮಕ್ಕೆ ನುಗ್ಗಿದ್ದು ಮಂಗಳವಾರವೂ ಅರಣ್ಯ ಇಲಾಖೆ ಠಿಋಡಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆಸಿತು.

Vijaya Karnataka 3 Jul 2019, 5:00 am
ಮಲೆಬೆನ್ನೂರು ; ಹೊಳೆಸಿರಿಗೆರೆಯಲ್ಲಿ ನಾಲ್ವರ ಮೇಲೆ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ, ಧೂಳೆಹೊಳೆ ಗ್ರಾಮಕ್ಕೆ ನುಗ್ಗಿದ್ದು ಮಂಗಳವಾರವೂ ಅರಣ್ಯ ಇಲಾಖೆ ಠಿಋಡಿ ಚಿರತೆ ಸೆರೆ ಕಾರ್ಯಾಚರಣೆ ಮುಂದುವರೆಸಿತು.
Vijaya Karnataka Web the leopard that burst into dust the fury of the villagers
ಧೂಳೆ ಹೊಳೆಗೆ ನುಗ್ಗಿದ ಚಿರತೆ, ಗ್ರಾಮಸ್ಥರ ಆತಂಕ


ಗ್ರಾಮದ ಕಬ್ಬಿನ ಗದ್ದೆ ಹಾಗೂ ಜಾಲಿ ಪೊದೆಯಲ್ಲಿ ಅಡಗಿರಬಹುದೆಂದು ಅರಣ್ಯ ಸಿಬ್ಬಂದಿ ದ್ರೋಣ್‌ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಿದರು. ಆದರೆ ಎಲ್ಲಿಯೂ ದ್ರೋಣ್‌ ಕ್ಯಾಮೆರಾಗೆ ಚಿರತೆ ಇರುವಿಕೆ ಪತ್ತೆಯಾಗಲಿಲ್ಲ.

ಗದ್ದೆಯ ಸುತ್ತ ಮುತ್ತ ಚಿರತೆಯ ಹೆಜ್ಜೆ ಗುರುತುಗಳು ಮಾತ್ರ ಪತ್ತೆಯಾದವು. ಯಾರೊಬ್ಬರೂ ತಾವು ಗ್ರಾಮದಲ್ಲಿ ಚಿರತೆಯನ್ನು ಕಣ್ಣಾರೆ ನೋಡಿರುವುದಾಗಿ ಹೇಳಿಕೊಂಡಿಲ್ಲ. ಬಹುಶಃ ಇಲ್ಲಿಂದಲೂ ಚಿರತೆ ಪರಾರಿಯಾಗಿರಬಹುದೆಂದು ಅರಣ್ಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚಿರತೆ ಹಿಡಿಯಲು ಸಮೀಪದಲ್ಲೇ ಬೋನೊಂದನ್ನು ಇಟ್ಟಿದ್ದು, ಬೋನಿನಲ್ಲಿ ನಾಯಿಯನ್ನು ಇಡಲಾಗಿದೆ.

ಗ್ರಾಮಸ್ಥರು ಚಿರತೆ ಭಯದಿಂದ ಹೊಲಕ್ಕೆ ಹೋಗಲು ಹೆದರುತ್ತಿದ್ದಾರೆ. ಚಿರತೆ ಭಯದಿಂದ ಗ್ರಾಮದಲ್ಲಿ ಶಾಲೆಗೆ ಮಂಗಳವಾರ ರಜೆ ನೀಡಲಾಗಿತ್ತು. ಮಂಗಳವಾರ ಸಹ ಅರಣ್ಯ ಇಲಾಖೆಯ ಆರ್‌ಎಫ್‌ಓ ಉಷಾರಾಣಿ, ಅರವಳಿಕೆ ಮದ್ದು ತಜ್ಞ ಡಾ.ವಿನಯ್‌, ಡಿಆರ್‌ಎಫ್‌ಓ ಚಂದ್ರಶೇಖರ್‌ ನಾಯ್ಕ್‌ ಹಾಗೂ ಪೊಲೀಸರೂ ಪಾಲ್ಗೊಂಡಿದ್ದರು.

ಗ್ರಾಮಸ್ಥರು ನೀಡಿದ ಸುಳಿವಿನ ಮೇರೆಗೆ ಕಬ್ಬಿನ ಹೊಲ ಹಾಗೂ ಜಾಲಿ ಪೊದೆಯ ಮೇಲ್ಭಾಗದಲ್ಲಿ ದ್ರೋಣ್‌ ಕ್ಯಾಮೆರಾ ಬಿಟ್ಟು ನೋಡಿದೆವು. ಆದರೆ ಎಲ್ಲೂ ಚಿರತೆ ಪತ್ತೆಯಾಗಲಿಲ್ಲ. ಅಕ್ಕಪಕ್ಕದಲ್ಲಿ ಹೆಜ್ಜೆ ಗುರುತುಗಳಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದೇವೆ.
- ಉಷಾರಾಣಿ, ಆರ್‌ಎಫ್‌ಓ, ಅರಣ್ಯ ಇಲಾಖೆ, ದಾವಣಗೆರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ