ಆ್ಯಪ್ನಗರ

ಸುಧಾರಣೆ ಕಾಣದ ಅಲೆಮಾರಿಗಳ ಜೀವನ

ಸ್ವಾತಂತ್ರ್ಯ ದೊರೆತು 7 ದಶಕಗಳಾದರೂ ದೇಶದ ಅಲೆಮಾರಿ ಬುಡಕಟ್ಟು ಸಮುದಾಯದವರ ಜನಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ ಎಂದು ಸಮುದಾಯದ ಜಿಲ್ಲಾಧ್ಯಕ್ಷ ಸಣ್ಣ ಅಜ್ಜಯ್ಯ ವಿಷಾದಿಸಿದರು.

Vijaya Karnataka 2 Jan 2019, 5:00 am
ಹರಿಹರ : ಸ್ವಾತಂತ್ರ್ಯ ದೊರೆತು 7 ದಶಕಗಳಾದರೂ ದೇಶದ ಅಲೆಮಾರಿ ಬುಡಕಟ್ಟು ಸಮುದಾಯದವರ ಜನಜೀವನ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ ಎಂದು ಸಮುದಾಯದ ಜಿಲ್ಲಾಧ್ಯಕ್ಷ ಸಣ್ಣ ಅಜ್ಜಯ್ಯ ವಿಷಾದಿಸಿದರು.
Vijaya Karnataka Web the life of undefiled wandering
ಸುಧಾರಣೆ ಕಾಣದ ಅಲೆಮಾರಿಗಳ ಜೀವನ


ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಮಾಜದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಷ್ಟೆ ಅಲ್ಲ, ನಮ್ಮ ರಾಜ್ಯದಲ್ಲೂ ಸಮುದಾಯದ ಜನಜೀವನ ಹೀನಾಯವಾಗಿದೆ. ಆದರೆ, ಆಳುವ ಯಾವುದೇ ಸರಕಾರ ಈ ಬಗ್ಗೆ ಕನಿಷ್ಟ ಕಾಳಜಿ ತೋರುತ್ತಿಲ್ಲ ಎಂದರು.

ಹಿಂದೆ ಕಾಂಗ್ರೆಸ್‌ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌.ಆಂಜನೇಯರ ಒತ್ತಾಸೆಯಂತೆ ಅಲೆಮಾರಿ ಸಮುದಾಯದ ಅಭಿವೃದ್ಧಿ ಕೋಶ ಘೋಷಣೆ ಮಾಡಲಾಯ್ತು. ಆದರೆ ಅದು ಇದುವರೆಗೆ ಆರಂಭವಾಗಿಲ್ಲ. ಕೋಶವನ್ನು ಆದಷ್ಟು ಬೇಗನೆ ಪ್ರಾರಂಭಿಸುವಂತೆ ಈಗಿನ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಒತ್ತಾಯಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಡಿ.ನಾಗರಾಜ್‌ ಮಾತನಾಡಿ, ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಸುಮಾರು ಒಂದು ಲಕ್ಷ ಕ್ಕೂ ಅಧಿಕ ಮತದಾರರಿದ್ದರೂ ಯಾವುದೇ ಪಕ್ಷ ದ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದಕ್ಕೆ ಸಂಘಟನೆಯ ಕೊರತೆಯೆ ಕಾರಣ. ಇನ್ನಾದರೂ ನೇತೃತ್ವ ವಹಿಸಿಕೊಂಡವರು ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.

ಸಭೆಯಲ್ಲಿ ತಾಲೂಕು ಅಲೆಮಾರಿ ಬುಡಕಟ್ಟು ಮಹಾಸಭಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಗಿ ಆರ್‌.ವಿ. ವೀರೇಶ್‌, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಅಂಜಿನಿ, ಕಾರ್ಯದರ್ಶಿಯಾಗಿ ದುರ್ಗೇಶ್‌, ಖಜಾಂಚಿಯಾಗಿ ಎಸ್‌.ಪ್ರಸನ್ನ ಕುಮಾರ್‌, ಕಾನೂನು ಸಲಹೆಗಾರರಾಗಿ ವೀರೇಶ್‌.ಕೆ ಎಚ್‌.ಬಸಾಪುರ, ಸಂಘಟನಾ ಕಾರ್ಯದರ್ಶಿಗಳಾಗಿ ಚೌಡಪ್ಪ, ದೇವೇಂದ್ರಪ್ಪ ಕೊಂಡ್ರೆ, ಸಣ್ಣ ಹನುಮಂತಪ್ಪ, ಸಣ್ಣ ಮಂಜಪ್ಪ, ಶಂಕರ್‌ ಹಾಗೂ ಏಳು ಜನ ತಾಲೂಕು ಉಪಾಧ್ಯಕ್ಷ ರು ಮತ್ತು ಎಂಟು ಜನ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ