ಆ್ಯಪ್ನಗರ

ಲಿಂಗಾಯಿತ ಅರಿವು ಕಾರ್ಯಕ್ರಮ ಜುಲೈ1ರಿಂದ

ಲಿಂಗಾಯಿತ ಧರ್ಮಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಸ್ಥಾನಮಾನ ನೀಡಲು ಒತ್ತಾಯಿಸಿ, ಹೋರಾಟಕ್ಕೆ ಕಿಚ್ಚು ಹತ್ತಿಸಲು ರಾಜ್ಯಾದ್ಯಂತ ಜುಲೈ1ರಿಂದ ಲಿಂಗಾಯಿತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್‌ ತಿಳಿಸಿದರು.

Vijaya Karnataka 14 Jun 2018, 2:31 pm
ದಾವಣಗೆರೆ : ಲಿಂಗಾಯಿತ ಧರ್ಮಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಸ್ಥಾನಮಾನ ನೀಡಲು ಒತ್ತಾಯಿಸಿ, ಹೋರಾಟಕ್ಕೆ ಕಿಚ್ಚು ಹತ್ತಿಸಲು ರಾಜ್ಯಾದ್ಯಂತ ಜುಲೈ1ರಿಂದ ಲಿಂಗಾಯಿತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್‌ ತಿಳಿಸಿದರು.
Vijaya Karnataka Web the linguistic awareness program is from july
ಲಿಂಗಾಯಿತ ಅರಿವು ಕಾರ್ಯಕ್ರಮ ಜುಲೈ1ರಿಂದ


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡುವ ನಿರೀಕ್ಷೆ ಇದೆ. ಆದ್ದರಿಂದ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಲಿಂಗಾಯತದ ಅರಿವು ಕಾರ್ಯಕ್ರಮ ಮೂಡಿಸಲು ಸಂಚಾರ ಮಾಡಲಾಗುವುದು. ಈ ಅರಿವು ಕಾರ್ಯಕ್ರಮಕ್ಕೆ ಬಸವ ಬಳಗ, ಬಸವ ಅನುಯಾಯಿಗಳು ಸೇರಿದಂತೆ ಇತರರು ಭಾಗವಹಿಸುವರು ಎಂದರು.

ಯಥವತ್ತಾಗಿ ಅಂಗೀಕರಿಸಿ:


ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು. ಕೂಡಲೇ ಕೇಂದ್ರ ಸರಕಾರ ತಡ ಮಾಡದೆ ಶಿಫಾರಸುಗೊಳಿಸಬೇಕು. ರಾಜ್ಯ ಸರಕಾರದ ಶಿಫಾರಸ್ಸನ್ನು ಕೇಂದ್ರ ಸರಕಾರ ಯಥಾವತ್ತಾಗಿ ಅಂಗೀಕರಿಸಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಸುಳ್ಳು ಸುದ್ದಿ:

ಕಳೆದ ಕೆಲ ದಿನಗಳಿಂದ ಕೇಂದ್ರದಿಂದ ಕಡತ ವಾಪಸ್‌ ಬಂದಿದೆ ಎಂಬ ಸುದ್ದಿ ಹರಡುತ್ತಿದ್ದು, ಸ್ವತಹ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಕಡತ ವಾಪಸ್‌ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೀರಶೈವ ಮುಖಂಡರು, ಸ್ವಾಮೀಜಿಗಳು ಬಸವಣ್ಣನನ್ನು ಒಪ್ಪಿ ಬರುವುದಾದರೆ ನಮ್ಮದೇನು ತಕರಾರು ಇಲ್ಲ. ಈಗಾಗಲೇ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಮಾನಕ್ಕಾಗಿ ಹೋರಾಟ ನಡೆಯುತ್ತಿದೆ. ಒಂದು ವೇಳೆ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗದೇ ಹೋದರೆ, ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಮಹಾಂತೇಶ್‌ ಅಗಡಿ, ಹುಚ್ಚಪ್ಪ ಮಾಸ್ತರ್‌, ಬಾಡದ ಆನಂದರಾಜ…, ವೀಣಾ ಮಂಜುನಾಥ್‌, ದೇವಿಗೆರೆ ವೀರಭದ್ರಪ್ಪ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ