ನಂದೀಶ್ ಭದ್ರಾವತಿ ದಾವಣಗೆರೆ
ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ದಾವಣಗೆರೆ ಲೋಕಸಭೆ ಕ್ಷೇತ್ರ ತಡವಾಗಿ 1977 ರಲ್ಲಿ ರೂಪಗೊಂಡಿತು. ಮೊದಲ ಚುನಾವಣೆಯಲ್ಲಿಯೇ ಇಲ್ಲಿಂದ ಆಯ್ಕೆಯಾದ ಕೊಂಡಜ್ಜಿ ಬಸಪ್ಪ ಸಚಿವರಾಗುವ ಭಾಗ್ಯ ದೊರೆಯುವುದು ಈ ಕ್ಷೇತ್ರದ ಮತ್ತೊಂದು ವಿಶೇಷ. ಈ ಕ್ಷೇತ್ರದಿಂದ ಆಯ್ಕೆಯಾದವರು ಎರಡನೇ ಬಾರಿ 37 ವರ್ಷದ ನಂತರ 2014 ರಲ್ಲಿ ಇಲ್ಲಿಂದ ಆಯ್ಕೆಯಾದ ಸಂಸದ ಜಿ.ಎಂ. ಸಿದ್ದೇಶ್ವರ ಸಚಿವರಾದರು.
ಕಾಂಗ್ರೆಸ್ನಿಂದ ಗೆದ್ದು ಜನತಾ ಪರಿವಾರದ ಸರಕಾರದಲ್ಲಿ ಮಂತ್ರಿಯಾಗಿರುವುದು ಈ ಕ್ಷೇತ್ರದ ವಿಶೇಷ ಪ್ರಕರಣ. ತುರ್ತು ಪರಿಸ್ಥಿತಿ ನಂತರ 1977 ರಲ್ಲಿ ದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ರಚನೆಯಾಯಿತು. ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿದ್ದರು. ಆ ವರ್ಷವೇ ದಾವಣಗೆರೆ ಪ್ರತ್ಯೇಕ ಲೋಕಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಮೊದಲ ಬಾರಿ ಇಲ್ಲಿ ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ, ಜನತಾ ಪರಿವಾರದಿಂದ ಕೆ.ಜಿ. ಮಹೇಶ್ವರಪ್ಪ ಕಣಕ್ಕಿಳಿದಿದ್ದರು.
ಕೊಂಡಜ್ಜಿ ಬಸಪ್ಪ ಅವರು 92,212 ಮತಗಳ ಅಂತರದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಆದರೆ, ಜನತಾ ಪರಿವಾರದ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದರು. ಈ ಕ್ಷೇತ್ರಕ್ಕೆ ಮೊದಲ ಬಾರಿಯೇ ಮಂತ್ರಿ ಪದವಿಯೇನೋ ಸಿಕ್ಕಂತಾಯಿತು. ಆದರೆ ಅಸಮಾಧಾನ ಕಂಡು ಬಂದರೂ ನಂತರ ಎಲ್ಲವೂ ಸರಿಯಾಯಿತು. ಈ ಸರಕಾರ ಎರಡು ವರ್ಷ ಮಾತ್ರ ಇತ್ತು, ನಂತರ ಮತ್ತೆ 1980 ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪರಿವಾರದಿಂದ ಕೊಂಡಜ್ಜಿ ಬಸಪ್ಪ ಸ್ಪರ್ಧಿಸಿದರಾದರೂ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಟಿ.ವಿ. ಚಂದ್ರಶೇಖರ್ ವಿರುದ್ಧ 1,40,966 ಮತಗಳ ಅಂತರದಲ್ಲಿ ಸೋಲುಂಡರು.
ಪಕ್ಷಾಂತರ ಕಾಯಿದೆ:
ಆಗ ಪಕ್ಷಾಂತರ ಕಾಯಿದೆಯ ಅಡ್ಡಿಯಿರಲಿಲ್ಲ, ಗೆದ್ದವರು ಪಕ್ಷ ಬದಲಿಸಿದರೂ ಸದಸ್ಯತ್ವಕ್ಕೆ ಯಾವುದೇ ಧಕ್ಕೆ ಇರಲಿಲ್ಲ. ಹಾಗಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಕೊಂಡಜ್ಜಿ ಬಸಪ್ಪ ಅವರು ಜನತಾಪರಿವಾರದ ಜತೆ ಕೈ ಜೋಡಿಸಿದ್ದರು. ಆಗಿನ ರಾಜಕೀಯ ಪರಿಸ್ಥಿತಿ ಕೂಡ ಹಾಗೆ ಇತ್ತು ಎಂದು ಹಳೆಯ ನಾಯಕರು ನೆನೆಯುತ್ತಾರೆ.
ಸಿದ್ದೇಶ್ವರ ಮಿನಿಸ್ಟರ್
ದಾವಣಗೆರೆ ಕ್ಷೇತ್ರದಿಂದ ಟಿ.ವಿ. ಚಂದ್ರಶೇಖರಪ್ಪ, ಮೂರು ಬಾರಿ ಚೆನ್ನಯ್ಯ ಒಡೆಯರ್, ಜಿ. ಮಲ್ಲಿಕಾರ್ಜುನಪ್ಪ, ಶಾಮನೂರು ಶಿವಶಂಕರಪ್ಪ ಹೀಗೆ ಹಲವಾರು ಮಂದಿ ಆಯ್ಕೆಯಾಗಿ ಹೋದರೂ ಯಾರಿಗೂ ಮತ್ತೆ ಸಚಿವರಾಗುವ ಭಾಗ್ಯ ದೊರೆತಿರಲಿಲ್ಲ. 2014 ರಲ್ಲಿ ಇಲ್ಲಿಂದ ಮೂರನೇ ಬಾರಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ ಜಿ.ಎಂ. ಸಿದ್ದೇಶ್ವರ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರಕಾರದಲ್ಲಿ ಮಂತ್ರಿಯಾದರು. ವಿಮಾನಯಾನ ಹಾಗೂ ಸಣ್ಣ ಕೈಗಾರಿಕೆ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ದಾವಣಗೆರೆ ಲೋಕಸಭೆ ಕ್ಷೇತ್ರ ತಡವಾಗಿ 1977 ರಲ್ಲಿ ರೂಪಗೊಂಡಿತು. ಮೊದಲ ಚುನಾವಣೆಯಲ್ಲಿಯೇ ಇಲ್ಲಿಂದ ಆಯ್ಕೆಯಾದ ಕೊಂಡಜ್ಜಿ ಬಸಪ್ಪ ಸಚಿವರಾಗುವ ಭಾಗ್ಯ ದೊರೆಯುವುದು ಈ ಕ್ಷೇತ್ರದ ಮತ್ತೊಂದು ವಿಶೇಷ. ಈ ಕ್ಷೇತ್ರದಿಂದ ಆಯ್ಕೆಯಾದವರು ಎರಡನೇ ಬಾರಿ 37 ವರ್ಷದ ನಂತರ 2014 ರಲ್ಲಿ ಇಲ್ಲಿಂದ ಆಯ್ಕೆಯಾದ ಸಂಸದ ಜಿ.ಎಂ. ಸಿದ್ದೇಶ್ವರ ಸಚಿವರಾದರು.
ಕಾಂಗ್ರೆಸ್ನಿಂದ ಗೆದ್ದು ಜನತಾ ಪರಿವಾರದ ಸರಕಾರದಲ್ಲಿ ಮಂತ್ರಿಯಾಗಿರುವುದು ಈ ಕ್ಷೇತ್ರದ ವಿಶೇಷ ಪ್ರಕರಣ. ತುರ್ತು ಪರಿಸ್ಥಿತಿ ನಂತರ 1977 ರಲ್ಲಿ ದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ ರಚನೆಯಾಯಿತು. ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿದ್ದರು. ಆ ವರ್ಷವೇ ದಾವಣಗೆರೆ ಪ್ರತ್ಯೇಕ ಲೋಕಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಮೊದಲ ಬಾರಿ ಇಲ್ಲಿ ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ, ಜನತಾ ಪರಿವಾರದಿಂದ ಕೆ.ಜಿ. ಮಹೇಶ್ವರಪ್ಪ ಕಣಕ್ಕಿಳಿದಿದ್ದರು.
ಕೊಂಡಜ್ಜಿ ಬಸಪ್ಪ ಅವರು 92,212 ಮತಗಳ ಅಂತರದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಆದರೆ, ಜನತಾ ಪರಿವಾರದ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದರು. ಈ ಕ್ಷೇತ್ರಕ್ಕೆ ಮೊದಲ ಬಾರಿಯೇ ಮಂತ್ರಿ ಪದವಿಯೇನೋ ಸಿಕ್ಕಂತಾಯಿತು. ಆದರೆ ಅಸಮಾಧಾನ ಕಂಡು ಬಂದರೂ ನಂತರ ಎಲ್ಲವೂ ಸರಿಯಾಯಿತು. ಈ ಸರಕಾರ ಎರಡು ವರ್ಷ ಮಾತ್ರ ಇತ್ತು, ನಂತರ ಮತ್ತೆ 1980 ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪರಿವಾರದಿಂದ ಕೊಂಡಜ್ಜಿ ಬಸಪ್ಪ ಸ್ಪರ್ಧಿಸಿದರಾದರೂ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಟಿ.ವಿ. ಚಂದ್ರಶೇಖರ್ ವಿರುದ್ಧ 1,40,966 ಮತಗಳ ಅಂತರದಲ್ಲಿ ಸೋಲುಂಡರು.
ಪಕ್ಷಾಂತರ ಕಾಯಿದೆ:
ಆಗ ಪಕ್ಷಾಂತರ ಕಾಯಿದೆಯ ಅಡ್ಡಿಯಿರಲಿಲ್ಲ, ಗೆದ್ದವರು ಪಕ್ಷ ಬದಲಿಸಿದರೂ ಸದಸ್ಯತ್ವಕ್ಕೆ ಯಾವುದೇ ಧಕ್ಕೆ ಇರಲಿಲ್ಲ. ಹಾಗಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಕೊಂಡಜ್ಜಿ ಬಸಪ್ಪ ಅವರು ಜನತಾಪರಿವಾರದ ಜತೆ ಕೈ ಜೋಡಿಸಿದ್ದರು. ಆಗಿನ ರಾಜಕೀಯ ಪರಿಸ್ಥಿತಿ ಕೂಡ ಹಾಗೆ ಇತ್ತು ಎಂದು ಹಳೆಯ ನಾಯಕರು ನೆನೆಯುತ್ತಾರೆ.
ಸಿದ್ದೇಶ್ವರ ಮಿನಿಸ್ಟರ್
ದಾವಣಗೆರೆ ಕ್ಷೇತ್ರದಿಂದ ಟಿ.ವಿ. ಚಂದ್ರಶೇಖರಪ್ಪ, ಮೂರು ಬಾರಿ ಚೆನ್ನಯ್ಯ ಒಡೆಯರ್, ಜಿ. ಮಲ್ಲಿಕಾರ್ಜುನಪ್ಪ, ಶಾಮನೂರು ಶಿವಶಂಕರಪ್ಪ ಹೀಗೆ ಹಲವಾರು ಮಂದಿ ಆಯ್ಕೆಯಾಗಿ ಹೋದರೂ ಯಾರಿಗೂ ಮತ್ತೆ ಸಚಿವರಾಗುವ ಭಾಗ್ಯ ದೊರೆತಿರಲಿಲ್ಲ. 2014 ರಲ್ಲಿ ಇಲ್ಲಿಂದ ಮೂರನೇ ಬಾರಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ ಜಿ.ಎಂ. ಸಿದ್ದೇಶ್ವರ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರಕಾರದಲ್ಲಿ ಮಂತ್ರಿಯಾದರು. ವಿಮಾನಯಾನ ಹಾಗೂ ಸಣ್ಣ ಕೈಗಾರಿಕೆ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದರು.