ದಾವಣಗೆರೆ : ನಗರವನ್ನು ಬೆಚ್ಚಿ ಬೀಳಿಸಿದ್ದ ಭರತ್(24)ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ರಾತ್ರಿ ಮದ್ಯಪಾನ ಸೇವಿಸಿ ನಂತರ ನಿನಗೆ ಗೋಲಿ ಆಡುವುದಕ್ಕೆ ಬರುವುದಿಲ್ಲ ಎನ್ನುವ ಕ್ಷುಲ್ಲಕ್ಕ ಕಾರಣಕ್ಕೆ ಜಗಳವಾಡಿಕೊಂಡು ಈ ಕೊಲೆ ನಡೆದಿದೆ ಎನ್ನಲಾಗಿದೆ.
ವಿನಾಯಕ ನಗರದ ವಾಸಿಗಳಾದ ಚಾಲಕ ವೃತ್ತಿಯ ಪಿ.ಅಶೋಕ್ (23), ಖಾಸಗಿ ಕಂಪನಿಯ ಉದ್ಯೋಗಿ ವಿ.ಎಸ್.ಶಿಲ್ಪಾಚಾರಿ(22)ಬಂಧಿತರು. ಘಟನೆ ನಡೆದು 24 ತಾಸಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭರತ್ ಕೊಲೆ ಕುರಿತು ಆತನ ತಂದೆ ಬಸಪ್ಪ ಬಡಾವಣೆ ಪೊಲೀಸ್ ಠಾಣೆ ದೂರು ಸಲ್ಲಿಸಿದ್ದರು.
ಘಟನೆ ವಿವರ: ಜು.10ರಂದು ಮೂವರು ಸೇರಿಕೊಂಡು ರಾತ್ರಿ ಖಾಲಿ ಜಾಗದಲ್ಲಿ ಮದ್ಯಪಾನ ಸೇವನೆ ಮಾಡಿದ್ದಾರೆ. ನಂತರ ಗೋಲಿ ಆಡಲು ಬರದಿದ್ದ ವಿಚಾರದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.
ಶಿಲ್ಪಾಚಾರಿ ಭರತ್ಗೆ ಕೈಯಿಂದ ಹೊಡೆದು ಬೀಳಿಸಿದ ತಕ್ಷಣ ಅಶೋಕ್ ಅಲ್ಲಿ ಇದ್ದ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಮೃತ ದೇಹಕ್ಕೆ ಹಂದಿಗಳು ತಿನ್ನಲೆಂದು ಖಾರದ ಪುಡಿ ಹಾಕಿ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾನಗರ ಪಿಎಸ್ಐ ಎಂ.ಡಿ.ಸಿದ್ದೇಶ್, ಎಎಸ್ಐ ಲಕ್ಷ್ಮಣ್, ಸಿಬ್ಬಂದಿಯಾದ ಕೆ.ಎಲ್.ತಿಪ್ಪೇಸ್ವಾಮಿ, ಆಂಜನೇಯ, ಲೋಕ್ಯಾನಾಯ್ಕ, ಮಂಜುನಾಥ್, ಸೈಯದ್ ಅಲಿ, ದ್ಯಾಮೇಶ್, ವಿಶ್ವನಾಥ್, ಅರುಣ ಕುಮಾರ್, ಸುರೇಶ್, ಚಂದ್ರಪ್ಪ, ಹರೀಶ್, ಮಂಜುನಾಥ್ ತನಿಖೆ ನಡೆಸಿ ಆರೋಪಿ ಪತ್ತೆ ಹಚ್ಚಿದ್ದು, ಇವರ ಕಾರ್ಯಕ್ಕೆ ಎಸ್ಪಿ ಆರ್. ಚೇತನ್ ಶ್ಲಾಘಿಸಿದ್ದಾರೆ.
ರಾತ್ರಿ ಮದ್ಯಪಾನ ಸೇವಿಸಿ ನಂತರ ನಿನಗೆ ಗೋಲಿ ಆಡುವುದಕ್ಕೆ ಬರುವುದಿಲ್ಲ ಎನ್ನುವ ಕ್ಷುಲ್ಲಕ್ಕ ಕಾರಣಕ್ಕೆ ಜಗಳವಾಡಿಕೊಂಡು ಈ ಕೊಲೆ ನಡೆದಿದೆ ಎನ್ನಲಾಗಿದೆ.
ವಿನಾಯಕ ನಗರದ ವಾಸಿಗಳಾದ ಚಾಲಕ ವೃತ್ತಿಯ ಪಿ.ಅಶೋಕ್ (23), ಖಾಸಗಿ ಕಂಪನಿಯ ಉದ್ಯೋಗಿ ವಿ.ಎಸ್.ಶಿಲ್ಪಾಚಾರಿ(22)ಬಂಧಿತರು. ಘಟನೆ ನಡೆದು 24 ತಾಸಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭರತ್ ಕೊಲೆ ಕುರಿತು ಆತನ ತಂದೆ ಬಸಪ್ಪ ಬಡಾವಣೆ ಪೊಲೀಸ್ ಠಾಣೆ ದೂರು ಸಲ್ಲಿಸಿದ್ದರು.
ಘಟನೆ ವಿವರ: ಜು.10ರಂದು ಮೂವರು ಸೇರಿಕೊಂಡು ರಾತ್ರಿ ಖಾಲಿ ಜಾಗದಲ್ಲಿ ಮದ್ಯಪಾನ ಸೇವನೆ ಮಾಡಿದ್ದಾರೆ. ನಂತರ ಗೋಲಿ ಆಡಲು ಬರದಿದ್ದ ವಿಚಾರದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.
ಶಿಲ್ಪಾಚಾರಿ ಭರತ್ಗೆ ಕೈಯಿಂದ ಹೊಡೆದು ಬೀಳಿಸಿದ ತಕ್ಷಣ ಅಶೋಕ್ ಅಲ್ಲಿ ಇದ್ದ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಮೃತ ದೇಹಕ್ಕೆ ಹಂದಿಗಳು ತಿನ್ನಲೆಂದು ಖಾರದ ಪುಡಿ ಹಾಕಿ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾನಗರ ಪಿಎಸ್ಐ ಎಂ.ಡಿ.ಸಿದ್ದೇಶ್, ಎಎಸ್ಐ ಲಕ್ಷ್ಮಣ್, ಸಿಬ್ಬಂದಿಯಾದ ಕೆ.ಎಲ್.ತಿಪ್ಪೇಸ್ವಾಮಿ, ಆಂಜನೇಯ, ಲೋಕ್ಯಾನಾಯ್ಕ, ಮಂಜುನಾಥ್, ಸೈಯದ್ ಅಲಿ, ದ್ಯಾಮೇಶ್, ವಿಶ್ವನಾಥ್, ಅರುಣ ಕುಮಾರ್, ಸುರೇಶ್, ಚಂದ್ರಪ್ಪ, ಹರೀಶ್, ಮಂಜುನಾಥ್ ತನಿಖೆ ನಡೆಸಿ ಆರೋಪಿ ಪತ್ತೆ ಹಚ್ಚಿದ್ದು, ಇವರ ಕಾರ್ಯಕ್ಕೆ ಎಸ್ಪಿ ಆರ್. ಚೇತನ್ ಶ್ಲಾಘಿಸಿದ್ದಾರೆ.