ಸಂತ್ರಸ್ತರಿಗೆ ನ್ಯಾಯ ಪೊಲೀಸ್ ಇಲಾಖೆ ಬದ್ಧ
ಯಾರೇ ತಪ್ಪು ಮಾಡಿದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಅಪರಾಧಿಗಳಿಗೆ ಶಿಕ್ಷೆ ವಿಧಿಸಿ, ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಕಲ್ಪಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಡಿ.ದುರುಗಪ್ಪ ಹೇಳಿದರು.
Vijaya Karnataka 5 Jul 2018, 5:00 am
ಹರಪನಹಳ್ಳಿ : ಯಾರೇ ತಪ್ಪು ಮಾಡಿದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಅಪರಾಧಿಗಳಿಗೆ ಶಿಕ್ಷೆ ವಿಧಿಸಿ, ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಕಲ್ಪಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಡಿ.ದುರುಗಪ್ಪ ಹೇಳಿದರು.
ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಬೀಟ್ ನಾಗರಿಕ ಸಮಿತಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಕೆಲವು ಅಪರಾಧ ಪ್ರಕರಣಗಳು ಸರಿಯಾದ ಸಾಕ್ಷಾಧಾರಗಳಿಲ್ಲದೇ ವಿಫಲವಾಗುತ್ತವೆ. ಅಂಥ ಸಂದರ್ಭ ಪ್ರತ್ಯಕ್ಷ ದರ್ಶಿಗಳು ಸ್ವಯಂ ಪ್ರೇರಿತರಾಗಿ ಪೊಲೀಸ್ರೊಂದಿಗೆ ಕೈ ಜೋಡಿಸಿದರೆ ಖಂಡಿತ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಾಧ್ಯ ಎಂದು ತಿಳಿಸಿದರು.
ಪ್ರತಿ ಹಳ್ಳಿಗೂ ಪೊಲೀಸ್ ಬೀಟ್ ನಿಯೋಜಿಸಲಾಗಿದೆ. ಅವರೊಂದಿಗೆ ಸಾರ್ವಜನಿಕರು ಸಹಕರಿಸಿ ಆಪ್ತ ಸಮಾಲೋಚನೆ ಮಾಡಬೇಕು ಎಂದ ಅವರು, ತಾಲೂಕಿನ 224 ಹಳ್ಳಿಗಳಲ್ಲಿ ಸಮಿತಿಗಳ ಮೂಲಕ ಜನಸ್ನೇಹಿ ಪೊಲೀಸ್ ಠಾಣೆ ಬಲವರ್ಧಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಪಿಎಸ್ಐ ಟಿ.ಎನ್.ತಿಪ್ಪೆಸ್ವಾಮಿ ಮಾತನಾಡಿ, ಪೊಲೀಸ್ ಇಲಾಖೆಯ ಪೇದೆಗಳು ತಮ್ಮ ಬಳಿ ಮಾಹಿತಿ ಕೇಳಿಕೊಂಡು ಬಂದಾಗ ಗೊತ್ತಿದಷ್ಟು ಹೇಳಿ, ಅಥವಾ ಅಹಿತಕರ ಘಟನೆಗಳ ಬಗ್ಗೆ ತಿಳಿಸುವ ವ್ಯಕ್ತಿಯ ಹೆಸರು ಇಲಾಖೆ ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದು ಭರವಸೆ ನೀಡಿದರು.
ಹಳ್ಳಿಯ ಮುಖ್ಯ ಕೇಂದ್ರ ಸ್ಥಾನದಲ್ಲಿ ಹಗಲು-ರಾತ್ರಿ ಒಬ್ಬ ಪೇದೆ ನಿಯೋಜಿಸುವಂತೆ ಗ್ರಾಮದ ಮುಖಂಡರು ಮನವಿ ಮಾಡಿದರು.ವೀರಭದ್ರಪ್ಪ, ಬಸವರಾಜ್, ಕರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ್ದ ಬೀಟ್ ನಾಗರಿಕ ಸಮಿತಿ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಕೆಲವು ಅಪರಾಧ ಪ್ರಕರಣಗಳು ಸರಿಯಾದ ಸಾಕ್ಷಾಧಾರಗಳಿಲ್ಲದೇ ವಿಫಲವಾಗುತ್ತವೆ. ಅಂಥ ಸಂದರ್ಭ ಪ್ರತ್ಯಕ್ಷ ದರ್ಶಿಗಳು ಸ್ವಯಂ ಪ್ರೇರಿತರಾಗಿ ಪೊಲೀಸ್ರೊಂದಿಗೆ ಕೈ ಜೋಡಿಸಿದರೆ ಖಂಡಿತ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಾಧ್ಯ ಎಂದು ತಿಳಿಸಿದರು.
ಪ್ರತಿ ಹಳ್ಳಿಗೂ ಪೊಲೀಸ್ ಬೀಟ್ ನಿಯೋಜಿಸಲಾಗಿದೆ. ಅವರೊಂದಿಗೆ ಸಾರ್ವಜನಿಕರು ಸಹಕರಿಸಿ ಆಪ್ತ ಸಮಾಲೋಚನೆ ಮಾಡಬೇಕು ಎಂದ ಅವರು, ತಾಲೂಕಿನ 224 ಹಳ್ಳಿಗಳಲ್ಲಿ ಸಮಿತಿಗಳ ಮೂಲಕ ಜನಸ್ನೇಹಿ ಪೊಲೀಸ್ ಠಾಣೆ ಬಲವರ್ಧಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಪಿಎಸ್ಐ ಟಿ.ಎನ್.ತಿಪ್ಪೆಸ್ವಾಮಿ ಮಾತನಾಡಿ, ಪೊಲೀಸ್ ಇಲಾಖೆಯ ಪೇದೆಗಳು ತಮ್ಮ ಬಳಿ ಮಾಹಿತಿ ಕೇಳಿಕೊಂಡು ಬಂದಾಗ ಗೊತ್ತಿದಷ್ಟು ಹೇಳಿ, ಅಥವಾ ಅಹಿತಕರ ಘಟನೆಗಳ ಬಗ್ಗೆ ತಿಳಿಸುವ ವ್ಯಕ್ತಿಯ ಹೆಸರು ಇಲಾಖೆ ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದು ಭರವಸೆ ನೀಡಿದರು.
ಹಳ್ಳಿಯ ಮುಖ್ಯ ಕೇಂದ್ರ ಸ್ಥಾನದಲ್ಲಿ ಹಗಲು-ರಾತ್ರಿ ಒಬ್ಬ ಪೇದೆ ನಿಯೋಜಿಸುವಂತೆ ಗ್ರಾಮದ ಮುಖಂಡರು ಮನವಿ ಮಾಡಿದರು.ವೀರಭದ್ರಪ್ಪ, ಬಸವರಾಜ್, ಕರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.