ಆ್ಯಪ್ನಗರ

ಇರುವೆಗಳಿಗಿರುವ ಶಿಸ್ತು ಮನುಷ್ಯನಿಗಿಲ್ಲ

ಇರುವೆಗಳಿಗೆ ಇರುವ ಶಿಸ್ತು ಮನುಷ್ಯರಿಗಿಲ್ಲ, ಸರ್ವೆ ಪ್ರಕಾರ ಶೇ.60 ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಸಂಭವಿಸುತ್ತಿವೆ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ ಹೇಳಿದರು.

Vijaya Karnataka 26 Jul 2018, 2:02 pm
ಹರಪನಹಳ್ಳಿ : ಇರುವೆಗಳಿಗೆ ಇರುವ ಶಿಸ್ತು ಮನುಷ್ಯರಿಗಿಲ್ಲ, ಸರ್ವೆ ಪ್ರಕಾರ ಶೇ.60 ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಂದಲೇ ಸಂಭವಿಸುತ್ತಿವೆ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ ಹೇಳಿದರು.
Vijaya Karnataka Web there is no discipline with ants
ಇರುವೆಗಳಿಗಿರುವ ಶಿಸ್ತು ಮನುಷ್ಯನಿಗಿಲ್ಲ


ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಲೀಸ್‌ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ನಿಯಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಅಪಘಾತಗಳಿಗೆ ಪಾದಚಾರಿಗಳ, ವಾಹನ ಚಾಲಕರ ವರ್ತನೆ, ವಾಹನಗಳಲ್ಲಿರುವ ದೋಷ, ಪರಿಸರದ ವ್ಯತಿರಿಕ್ತ ಪರಿಣಾಮ ಇವೆಲ್ಲಾ ಕಾರಣಗಳಿರುತ್ತವೆ. 2017 ರ ಸರ್ವೆ ಪ್ರಕಾರ ಶೇ.84 ರಷ್ಟು ಅಪಘಾತಗಳು ಚಾಲಕರ ಅಜಾಗರುಕತೆಯ ಚಾಲನೆಯಿಂದ ಆಗುತ್ತವೆ ಎಂದರು.

ಐಎಸ್‌ಐ ಮಾರ್ಕ್‌ನ ಹೆಲ್ಮೆಟ್‌ನ್ನು ಕಡ್ಡಾಯವಾಗಿ ದ್ವಿಚಕ್ರ ವಾಹನ ಚಾಲಕರು ಧರಿಸಬೇಕು. ರಸ್ತೆಯಲ್ಲಿ ಜಾಗಿಂಗ್‌ ಮಾಡುತ್ತಾರೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ಹೋಗುತ್ತಾರೆ, ವಾಹನ ಚಾಲನೆ ಮಾಡುತ್ತಾರೆ. ಈ ಕಾರಣಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ರಸ್ತೆ ಸುರಕ್ಷಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಕೆ.ಮಂಜಣ್ಣ ಅಧ್ಯಕ್ಷ ತೆ ವಹಿಸಿದ್ದರು. ಡಿವೈಎಸ್ಪಿ ನಾಗೇಶ ಐತಾಳು, ಸಿಪಿಐ ಡಿ.ದುರುಗಪ್ಪ, ಪಿಎಸ್‌ಐ ಉಮೇಶ, ಪ್ರಾಧ್ಯಾಪಕ ಬಸವರಾಜ , ಉಪನ್ಯಾಸಕ ಪ್ರಭುದೇವ, ಎಂ.ಬಸವರಾಜ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ