ಆ್ಯಪ್ನಗರ

ಇಂದು ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಸಾಧ್ಯತೆ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾರು ಸ್ಫರ್ಧಿಸುತ್ತಾರೆಂಬ ಕುತುಹೂಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು (ಸೋಮವಾರ) ಬಹುತೇಕ ಟಿಕೆಟ್‌ ಯಾರಿಗೆ ಎಂಬುವುದು ಫೈನಲ್‌ ಆಗುವ ಸಾಧ್ಯತೆಯಿದೆ.

Vijaya Karnataka 1 Apr 2019, 5:00 am
ದಾವಣಗೆರೆ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾರು ಸ್ಫರ್ಧಿಸುತ್ತಾರೆಂಬ ಕುತುಹೂಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು (ಸೋಮವಾರ) ಬಹುತೇಕ ಟಿಕೆಟ್‌ ಯಾರಿಗೆ ಎಂಬುವುದು ಫೈನಲ್‌ ಆಗುವ ಸಾಧ್ಯತೆಯಿದೆ.
Vijaya Karnataka Web today the congress ticket final is likely
ಇಂದು ಕಾಂಗ್ರೆಸ್‌ ಟಿಕೆಟ್‌ ಫೈನಲ್‌ ಸಾಧ್ಯತೆ


'ಯಾರು ಫೈನಲ್‌ ಅಭ್ಯರ್ಥಿ ಆಗುತ್ತಾರೆಂದು ಕಾಂಗ್ರೆಸ್‌ ಹೈಕಮಾಂಡ್‌ ಏ.1ರಂದು ತೀರ್ಮಾನ ಮಾಡಲಿದೆ' ಎಂದು ಸ್ವತಃ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ. ಸೋಮವಾರ ರಾಹುಲ್‌ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿ ದಾವಣಗೆರೆ ಲೋಕಸಭೆ ಟಿಕೆಟ್‌ ಯಾರಿಗೆ ನೀಡಬೇಕೆಂಬ ವಿಷಯವೂ ಚರ್ಚೆಗೆ ಬರಲಿದೆ. ಹೀಗಾಗಿ ಬಹುತೇಕ ಇಂದು ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎನ್ನುವುದು ನಿಚ್ಚಳವಾಗುವ ಸಂಭವವಿದೆ.

ಜಿಲ್ಲೆಯಲ್ಲಿ ಹಲವು ದಿನಗಳಿಂದ ಕಾಂಗ್ರೆಸ್‌ ಟಿಕೆಟ್‌ ವಿಷಯ ಚರ್ಚಿತ ವಿಷಯವಾಗಿ ಪರಿಣಮಿಸಿದ್ದು, ಯಾರಿಗೆ ಟಿಕೆಟ್‌ ಲಭಿಸಲಿದೆ ಎಂಬ ಕುತೂಹಲ ಸಹಜವಾಗಿಯೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರಲ್ಲೂ ಮನೆ ಮಾಡಿದೆ.

ಈ ನಡುವೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್‌ ವಿಷಯವಾಗಿ ತೇಜಸ್ವಿ ಪಟೇಲ್‌, ಎಚ್‌.ಬಿ. ಮಂಜಪ್ಪ, ಎಚ್‌.ಎಂ.ರೇವಣ್ಣ ಹೆಸರುಗಳು ಸಹ ಹರಿದಾಡಿದವು. ಈ ವಿಷಯದ ಚರ್ಚೆ ಕೊನೆಗೆ ಕಾಂಗ್ರೆಸ್‌ ಹೈಕಮಾಂಡ್‌ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಬಹುದು ಎಂಬ ಪ್ರಶ್ನೆಯಲ್ಲೇ ಕೊನೆ ಕಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ