ದಾವಣಗೆರೆ : ವೈಕುಂಠ ಏಕಾದಶಿ ಡಿ.18 ರ ಮಂಗಳವಾರ ನಡೆಯಲಿದ್ದು ನಗರದ ಲಕ್ಷ್ಮೇ ವೆಂಕಟೇಶ್ವರ ದೇವಳ ಸೇರಿ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಸಾದವಾಗಿ ಲಾಡು, ಕೇಸರಿ ಬಾತ್ ವಿತರಣೆಗೆ ಸೋಮವಾರ ಕೊನೇ ಕ್ಷಣದ ಸಿದ್ಧತೆ ನಡೆಸುವುದು ಕಂಡು ಬಂತು.
ನಗರದ ಎಂಸಿಸಿ ಬಿ ಬ್ಲಾಕ್ ಏಳನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೇ ವೆಂಕಟೇಶ್ವರ ದೇವಳದಲ್ಲಿ ಈ ಬಾರಿ 25 ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವ ಆಯೋಜಿಸಿರುವುದು ವಿಶೇಷ. ಅಖಂಡ ದರ್ಶನಕ್ಕೆ ಎಲ್ಲ ಸಿದ್ಧತೆ ಆಗಿದೆ. ಭಕ್ತರಿ ಸರದಿ ಸಾಲಿನಲ್ಲಿ ನಿಲ್ಲಲು ಶಾಮಿಯಾನ, ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 6.30 ಕ್ಕೆ ವೈಕುಂಠದ ಬಾಗಿಲು ತೆಗೆಯಲಿದೆ. ಆ ನಂತರ ಪೂಜೆ ನಡೆಯಲಿದ್ದು, ನಿರಂತರ ರಾತ್ರಿ 10 ಗಂಟೆವರೆಗೂ ಸ್ವಾಮಿಯ ಅಖಂಡ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನದ ನಂತರ ಸ್ವರ್ಗದ ಬಾಗಿಲು ಮೂಲಕ ಹೊರ ಹೋಗಲು, ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
25 ಸಾವಿರ ಲಾಡು
ತಿರುಪತಿ ವೆಂಕಟೇಶ್ವರ ಎಂದರೆ ಲಾಡು ಪ್ರಸಾದವೇ ವಿಶೇಷ. ಇಲ್ಲಿಯೂ ಕೂಡ 25 ಸಾವಿರ ಲಾಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಜತೆ 25 ಕೆಜಿ ಬೂಂದಿ ಲಾಡು, ಪ್ರಸಾದ ವಿತರಣೆಗೆ 100 ಕೆಜಿ ಕೇಸರಿಬಾತ್ ವಿತರಿಸಲಾಗುತ್ತಿದೆ. ಕಳೆದ ವರ್ಷ ಸುಮಾರು 65 ಸಾವಿರ ಭಕ್ತರು ದರ್ಶನ ಪಡೆದಿದ್ದರು, ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಈ ಬಾರಿ 25 ನೇ ವರ್ಷದ ಮಹೋತ್ಸವ ಆಚರಣೆಯಾಗಿರುವುದರಿಂದ 70 ಸಾವಿರ ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದು ಟ್ರಸ್ಟ್ ತಿಳಿಸಿದೆ.
ಬೇತೂರು ರಸ್ತೆ
ನಗರದ ಬೇತೂರು ರಸ್ತೆಯಲ್ಲೂ ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲೂ ವೈಕುಂಠ ಏಕಾದಶಿ ಮಹೋತ್ಸವ ಆಚರಿಸಲಾಗುತ್ತಿದೆ. ಈ ದೇವಾಲಯ ಸುಮಾರು 400 ವರ್ಷದ ಹಿಂದೆ ನಿರ್ಮಾಣವಾಗಿದ್ದು, ಇಲ್ಲೂ ಏಕಾದಶಿಯ ವಿಶೇಷ ಪೂಜೆ, ದರ್ಶನ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ವೈಕುಂಠ ಏಕಾದಶಿ ಮಹೋತ್ಸವವಿದ್ದು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 25 ನೇ ವರ್ಷದ ಮಹೋತ್ಸವ ಆಗಿದ್ದು ಹೆಚ್ಚಿನ ಭಕ್ತರ ನಿರೀಕ್ಷೆಯಿದೆ. 25 ಸಾವಿರ ಲಾಡು ವಿತರಣೆ ಮಾಡಲಾಗುತ್ತಿದೆ.
- ಎಂ.ಎನ್. ರಾಮಮೋಹನ್, ಪ್ರಧಾನ ಟ್ರಸ್ಟಿ, ಲಕ್ಷ್ಮೇ ವೆಂಕಟೇಶ್ವರ ದೇವಳ, ಎಂಸಿಸಿ ಬಿ ಬ್ಲಾಕ್.
ನಗರದ ಎಂಸಿಸಿ ಬಿ ಬ್ಲಾಕ್ ಏಳನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೇ ವೆಂಕಟೇಶ್ವರ ದೇವಳದಲ್ಲಿ ಈ ಬಾರಿ 25 ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವ ಆಯೋಜಿಸಿರುವುದು ವಿಶೇಷ. ಅಖಂಡ ದರ್ಶನಕ್ಕೆ ಎಲ್ಲ ಸಿದ್ಧತೆ ಆಗಿದೆ. ಭಕ್ತರಿ ಸರದಿ ಸಾಲಿನಲ್ಲಿ ನಿಲ್ಲಲು ಶಾಮಿಯಾನ, ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 6.30 ಕ್ಕೆ ವೈಕುಂಠದ ಬಾಗಿಲು ತೆಗೆಯಲಿದೆ. ಆ ನಂತರ ಪೂಜೆ ನಡೆಯಲಿದ್ದು, ನಿರಂತರ ರಾತ್ರಿ 10 ಗಂಟೆವರೆಗೂ ಸ್ವಾಮಿಯ ಅಖಂಡ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನದ ನಂತರ ಸ್ವರ್ಗದ ಬಾಗಿಲು ಮೂಲಕ ಹೊರ ಹೋಗಲು, ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
25 ಸಾವಿರ ಲಾಡು
ತಿರುಪತಿ ವೆಂಕಟೇಶ್ವರ ಎಂದರೆ ಲಾಡು ಪ್ರಸಾದವೇ ವಿಶೇಷ. ಇಲ್ಲಿಯೂ ಕೂಡ 25 ಸಾವಿರ ಲಾಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಜತೆ 25 ಕೆಜಿ ಬೂಂದಿ ಲಾಡು, ಪ್ರಸಾದ ವಿತರಣೆಗೆ 100 ಕೆಜಿ ಕೇಸರಿಬಾತ್ ವಿತರಿಸಲಾಗುತ್ತಿದೆ. ಕಳೆದ ವರ್ಷ ಸುಮಾರು 65 ಸಾವಿರ ಭಕ್ತರು ದರ್ಶನ ಪಡೆದಿದ್ದರು, ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಈ ಬಾರಿ 25 ನೇ ವರ್ಷದ ಮಹೋತ್ಸವ ಆಚರಣೆಯಾಗಿರುವುದರಿಂದ 70 ಸಾವಿರ ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದು ಟ್ರಸ್ಟ್ ತಿಳಿಸಿದೆ.
ಬೇತೂರು ರಸ್ತೆ
ನಗರದ ಬೇತೂರು ರಸ್ತೆಯಲ್ಲೂ ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲೂ ವೈಕುಂಠ ಏಕಾದಶಿ ಮಹೋತ್ಸವ ಆಚರಿಸಲಾಗುತ್ತಿದೆ. ಈ ದೇವಾಲಯ ಸುಮಾರು 400 ವರ್ಷದ ಹಿಂದೆ ನಿರ್ಮಾಣವಾಗಿದ್ದು, ಇಲ್ಲೂ ಏಕಾದಶಿಯ ವಿಶೇಷ ಪೂಜೆ, ದರ್ಶನ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ವೈಕುಂಠ ಏಕಾದಶಿ ಮಹೋತ್ಸವವಿದ್ದು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 25 ನೇ ವರ್ಷದ ಮಹೋತ್ಸವ ಆಗಿದ್ದು ಹೆಚ್ಚಿನ ಭಕ್ತರ ನಿರೀಕ್ಷೆಯಿದೆ. 25 ಸಾವಿರ ಲಾಡು ವಿತರಣೆ ಮಾಡಲಾಗುತ್ತಿದೆ.
- ಎಂ.ಎನ್. ರಾಮಮೋಹನ್, ಪ್ರಧಾನ ಟ್ರಸ್ಟಿ, ಲಕ್ಷ್ಮೇ ವೆಂಕಟೇಶ್ವರ ದೇವಳ, ಎಂಸಿಸಿ ಬಿ ಬ್ಲಾಕ್.