ಹೊನ್ನಾಳಿಯ ಹಿರೇಕಲ್ಮಠದಲ್ಲಿ ಶ್ರೀಶೈಲ ಪೀಠದ ಆನೆಗಳಿಗೆ ಕ್ವಾರಂಟೈನ್!
ಶ್ರೀಶೈಲ ಪೀಠದ ವಿವಿಧ ಮಠಗಳ ಮೂರು ಆನೆಗಳು ಹೊನ್ನಾಳಿಯ ಹಿರೇಕಲ್ಮಠದಲ್ಲಿ ಕ್ವಾರಂಟೈನ್ ಮಾದರಿಯಲ್ಲಿ ವಾಸ್ತವ್ಯ ಹೂಡಿವೆ. ಭಕ್ತರಿಗೆ ದರ್ಶನವನ್ನು ನೀಡುತ್ತಿವೆ. ಈ ಪೈಕಿ ಒಂದು ಆನೆ ಉಳಿದವುಗಳ ಜೊತೆ ಹೊಂದಿಕೊಳ್ಳದ ಕಾರಣ ಸೀಲ್ಡೌನ್ ಮಾದರಿಯಲ್ಲಿ ಪ್ರತ್ಯೇಕವಾಗಿ ವಾಸ್ತವ್ಯ ಹೂಡಿದೆ.
Vijaya Karnataka Web 23 May 2020, 10:55 am
ಹೈಲೈಟ್ಸ್:
- ಎರಡು ತಿಂಗಳಿಂದ ಹಿರೇಕಲ್ಮಠದಲ್ಲಿ ಆನೆಗಳ ವಾಸ್ತವ್ಯ
- ಎರಡು ಆನೆಗಳಿಗೆ ಕ್ವಾರಂಟೈನ್, ಮತ್ತೊಂದಕ್ಕೆ ಸೀಲ್ಡೌನ್
- ಭಕ್ತರಿಗೆ ಮೂರು ಆನೆಗಳ ದರ್ಶನ ಭಾಗ್ಯ
- ಚನ್ನೇಶ್ ಬಿ. ಇದರಮನಿ, ಹೊನ್ನಾಳಿ
ಕೋವಿಡ್-19 ಹಿನ್ನೆಲೆಯಲ್ಲಿ ಹೊರ ದೇಶ, ರಾಜ್ಯಗಳಿಂದ ಬರುವವರನ್ನು ಅವರ ಮನೆಗಳಿಗೆ ತೆರಳಲು ಬಿಡದೇ 14 ದಿನಗಳ ಕ್ವಾರಂಟೈನ್ನಲ್ಲಿಡುವುದು ಸಾಮಾನ್ಯವಾಗಿದೆ. ಆದರೆ, ಕೊರೋನಾ ವೈರಸ್ ಸೋಂಕು ಭೀತಿಯ ಕಾರಣ ಲಾಕ್ಡೌನ್ ಆದಾಗಿನಿಂದ ಮೂರು ಆನೆಗಳು ಹೊನ್ನಾಳಿಯ ಹಿರೇಕಲ್ಮಠದಲ್ಲಿ ಕ್ವಾರಂಟೈನ್ ಮಾದರಿಯಲ್ಲಿ ವಾಸ್ತವ್ಯ ಹೂಡಿವೆ. ಆಂಧ್ರಪ್ರದೇಶದ ಶ್ರೀಶೈಲ ಪೀಠ, ರಾಣೇಬೆನ್ನೂರು ತಾಲೂಕಿನ ಐರಣಿ ಹೊಳೆಮಠ ಹಾಗೂ ಹಿರೇಕಲ್ಮಠಕ್ಕೆ ಸೇರಿದ ಮೂರು ಆನೆಗಳು ಮಾರ್ಚ್ 23ರಿಂದಲೂ ಬೇರೆ ಎಲ್ಲೂ ಹೋಗದೇ ಹಿರೇಕಲ್ಮಠದ ಆವರಣದಲ್ಲಿಯೇ ಉಳಿದುಕೊಂಡಿವೆ. ಇದಕ್ಕೆ ಕಾರಣ ಆಂಧ್ರಪ್ರದೇಶದ ಶ್ರೀಶೈಲ ಪೀಠದ ಶಾಖಾ ಮಠ ದಾವಣಗೆರೆ ನಗರದಲ್ಲಿದೆ. ಅಲ್ಲಿ ಆನೆ ತಂಗಲು ವ್ಯವಸ್ಥೆ ಇಲ್ಲ.
ಇದೇ ರೀತಿ, ಕೊರೊನಾ ವೈರಸ್ ಹಾವಳಿಯಿಂದಾಗಿ ರಾಣೇಬೆನ್ನೂರು ತಾಲೂಕಿನ ಐರಣಿ ಹೊಳೆಮಠದಲ್ಲಿ ಕೂಡ ಆನೆ ತಂಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಎರಡೂ ಆನೆಗಳು ಹಿರೇಕಲ್ಮಠದ ಆನೆಯ ಜೊತೆಗೆ ಹೊನ್ನಾಳಿಯಲ್ಲಿ ಠಿಕಾಣಿ ಹೂಡಿವೆ.
ವಿಶ್ವ ಜೀವವೈವಿಧ್ಯ ದಿನ: ಕೊರೊನಾ ಸೋಂಕು ಕಾಡುತ್ತಿರುವ ಸಂದರ್ಭ ಜೀವವೈವಿಧ್ಯ ಅತ್ಯಂತ ಪ್ರಸ್ತುತ
ಪ್ರಸ್ತುತ ಕೊರೊನಾ ವೈರಸ್ ಸೋಂಕಿನಿಂದ ಲಾಕ್ಡೌನ್ ಪರಿಸ್ಥಿತಿ ಇರುವ ಕಾರಣ ಸಾರ್ವಜನಿಕರಂತೆ ಆನೆಗಳೂ ಕೂಡ ಮಠ ಬಿಟ್ಟು ಹೊರಗೆ ತೆರಳಿಲ್ಲ. ಆನೆಗಳಿಗೆ ಹಾಗೂ ಮಾವುತರಿಗೆ ಹಿರೇಕಲ್ಮಠದ ವತಿಯಿಂದ ಪೌಷ್ಟಿಕ ಆಹಾರ, ನೀರು ಒದಗಿಸಲಾಗುತ್ತಿದೆ. ಬೇಸಿಗೆಯಾದ್ದರಿಂದ ಆನೆಗಳಿಗೆ ಪ್ರತಿ ದಿನ ಸ್ನಾನಕ್ಕೂ ವ್ಯವಸ್ಥೆ ಮಾಡಲಾಗಿದೆ. ಮೂರು ಆನೆಗಳ ಪೈಕಿ ಒಂದು ಆನೆ ಎರಡು ಆನೆಗಳೊಂದಿಗೆ ಹೊಂದಿಕೊಳ್ಳದಿರುವ ಕಾರಣ ಅದನ್ನು ಮಾವುತರು ಸೀಲ್ಡೌನ್ ಮಾಡಿ, ಪ್ರತ್ಯೇಕವಾಗಿ ಇರಿಸಿದ್ದಾರೆ.
ಹಿರೇಕಲ್ಮಠಕ್ಕೆ ಆಗಮಿಸುವ ಭಕ್ತರು ಈ ಮೂರೂ ಆನೆಗಳ ದರ್ಶನ ಭಾಗ್ಯ ಪಡೆದುಕೊಳ್ಳುತ್ತಿದ್ದಾರೆ.
ಮತ್ತೆ ಕಸ್ತೂರಿ ರಂಗನ್ ವರದಿ ಕಿರಿಕಿರಿ: ಜಾರಿಗೆ ಕೇಂದ್ರದ ಒತ್ತಡ, ಏಕರೂಪ ಅಧಿಸೂಚನೆಗೆ ರಾಜ್ಯದ ವಿರೋಧ
ಕೋವಿಡ್-19 ಹಿನ್ನೆಲೆಯಲ್ಲಿ ಹೊರ ದೇಶ, ರಾಜ್ಯಗಳಿಂದ ಬರುವವರನ್ನು ಅವರ ಮನೆಗಳಿಗೆ ತೆರಳಲು ಬಿಡದೇ 14 ದಿನಗಳ ಕ್ವಾರಂಟೈನ್ನಲ್ಲಿಡುವುದು ಸಾಮಾನ್ಯವಾಗಿದೆ. ಆದರೆ, ಕೊರೋನಾ ವೈರಸ್ ಸೋಂಕು ಭೀತಿಯ ಕಾರಣ ಲಾಕ್ಡೌನ್ ಆದಾಗಿನಿಂದ ಮೂರು ಆನೆಗಳು ಹೊನ್ನಾಳಿಯ ಹಿರೇಕಲ್ಮಠದಲ್ಲಿ ಕ್ವಾರಂಟೈನ್ ಮಾದರಿಯಲ್ಲಿ ವಾಸ್ತವ್ಯ ಹೂಡಿವೆ.
ಇದೇ ರೀತಿ, ಕೊರೊನಾ ವೈರಸ್ ಹಾವಳಿಯಿಂದಾಗಿ ರಾಣೇಬೆನ್ನೂರು ತಾಲೂಕಿನ ಐರಣಿ ಹೊಳೆಮಠದಲ್ಲಿ ಕೂಡ ಆನೆ ತಂಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಎರಡೂ ಆನೆಗಳು ಹಿರೇಕಲ್ಮಠದ ಆನೆಯ ಜೊತೆಗೆ ಹೊನ್ನಾಳಿಯಲ್ಲಿ ಠಿಕಾಣಿ ಹೂಡಿವೆ.
ವಿಶ್ವ ಜೀವವೈವಿಧ್ಯ ದಿನ: ಕೊರೊನಾ ಸೋಂಕು ಕಾಡುತ್ತಿರುವ ಸಂದರ್ಭ ಜೀವವೈವಿಧ್ಯ ಅತ್ಯಂತ ಪ್ರಸ್ತುತ
ಪ್ರಸ್ತುತ ಕೊರೊನಾ ವೈರಸ್ ಸೋಂಕಿನಿಂದ ಲಾಕ್ಡೌನ್ ಪರಿಸ್ಥಿತಿ ಇರುವ ಕಾರಣ ಸಾರ್ವಜನಿಕರಂತೆ ಆನೆಗಳೂ ಕೂಡ ಮಠ ಬಿಟ್ಟು ಹೊರಗೆ ತೆರಳಿಲ್ಲ. ಆನೆಗಳಿಗೆ ಹಾಗೂ ಮಾವುತರಿಗೆ ಹಿರೇಕಲ್ಮಠದ ವತಿಯಿಂದ ಪೌಷ್ಟಿಕ ಆಹಾರ, ನೀರು ಒದಗಿಸಲಾಗುತ್ತಿದೆ. ಬೇಸಿಗೆಯಾದ್ದರಿಂದ ಆನೆಗಳಿಗೆ ಪ್ರತಿ ದಿನ ಸ್ನಾನಕ್ಕೂ ವ್ಯವಸ್ಥೆ ಮಾಡಲಾಗಿದೆ. ಮೂರು ಆನೆಗಳ ಪೈಕಿ ಒಂದು ಆನೆ ಎರಡು ಆನೆಗಳೊಂದಿಗೆ ಹೊಂದಿಕೊಳ್ಳದಿರುವ ಕಾರಣ ಅದನ್ನು ಮಾವುತರು ಸೀಲ್ಡೌನ್ ಮಾಡಿ, ಪ್ರತ್ಯೇಕವಾಗಿ ಇರಿಸಿದ್ದಾರೆ.
ಹಿರೇಕಲ್ಮಠಕ್ಕೆ ಆಗಮಿಸುವ ಭಕ್ತರು ಈ ಮೂರೂ ಆನೆಗಳ ದರ್ಶನ ಭಾಗ್ಯ ಪಡೆದುಕೊಳ್ಳುತ್ತಿದ್ದಾರೆ.
ಮತ್ತೆ ಕಸ್ತೂರಿ ರಂಗನ್ ವರದಿ ಕಿರಿಕಿರಿ: ಜಾರಿಗೆ ಕೇಂದ್ರದ ಒತ್ತಡ, ಏಕರೂಪ ಅಧಿಸೂಚನೆಗೆ ರಾಜ್ಯದ ವಿರೋಧ