ಆ್ಯಪ್ನಗರ

ಉಡುಗಿರಿ ಲಕ್ಷ್ಮೇರಂಗನಾಥ ಬ್ರಹ್ಮರಥೋತ್ಸವ

ತಾಲೂಕಿನ ದೇವರಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಉಡುಗಿರಿ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

Vijaya Karnataka 20 Apr 2019, 5:00 am
ಚನ್ನಗಿರಿ : ತಾಲೂಕಿನ ದೇವರಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಉಡುಗಿರಿ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
Vijaya Karnataka Web udugiri lakshmeerangatha brahmarathotsava
ಉಡುಗಿರಿ ಲಕ್ಷ್ಮೇರಂಗನಾಥ ಬ್ರಹ್ಮರಥೋತ್ಸವ


ಪ್ರತಿ ವರ್ಷ ನಡೆಯುವ ಜಾತ್ರಾ ಮಹೊತ್ಸವವು ಮೂರು ದಿನಗಳವರೆಗೆ ನಡೆಯುತ್ತಿದ್ದು, ದೇವತಾ ಪೂಜಾ ಕಾರ್ಯಕ್ರಮ, ಲಕ್ಷ್ಮಿ ರಂಗನಾಥನ ಕಲ್ಯಾಣೋತ್ಸವ ನಡೆದವು. ರಥೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಮತ್ತು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದರು. ರಥದ ಚಕ್ರಕ್ಕೆ ಮಂಡಕ್ಕಿ, ಕಾಳು ಮೆಣಸು ಮತ್ತು ಬಾಳೆಹಣ್ಣನ್ನು ಹಾಕುವ ಮೂಲಕ ಭಕ್ತಿ ಸನರ್ಪಿಸಿದರು.

ಶುಕ್ರವಾರ ಆನೆ ರಥೋತ್ಸವ ಮತ್ತು ಬ್ರಹ್ಮ ರಥೋತ್ಸವ ನಡೆದರೆ, ಶನಿವಾರ ಮುಂಜಾಣೆ ದೇವರನ್ನು ಹೊತ್ತ ರಥವು ಬೆಟ್ಟದಿಂದ ಊರೊಳಿಗೆ ಸಂಚರಿಸಿ ಮತ್ತೆ ಬೆಟ್ಟವನ್ನು ಸೇರಿಕೊಳ್ಳುತ್ತದೆ.

ಈ ಬಾರಿ ರಥೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಹೆಚ್ಚು ಜನರು ಸಂಚರಿಸುವ ಸ್ಥಳಗಳಲ್ಲಿ ಸಿಸಿ ಟಿವಿ ಕಣ್ಗಾವಲು ಹಾಕಲಾಗಿದೆ ಎಂದು ಪಿಎಸ್‌ಐ ಶಿವರುದ್ರಪ್ಪ ಮೇಟಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ