ಆ್ಯಪ್ನಗರ

ಪ್ರಧಾನಿ ಮೋದಿಗೆ ಉಜ್ಜಯಿನಿ ಶ್ರೀ ಹಾರೈಕೆ

ಎರಡನೇ ಬಾರಿ ದೇಶದ ಪ್ರಧಾನಮಂತ್ರಿ ಆಗುತ್ತಿರುವ ನರೇಂದ್ರ ಮೋದಿ ಅವರಿಗೆ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಕೆ ಸಂದೇಶ ನೀಡಿದ್ದಾರೆ.

Vijaya Karnataka 30 May 2019, 5:00 am
ದಾವಣಗೆರೆ : ಎರಡನೇ ಬಾರಿ ದೇಶದ ಪ್ರಧಾನಮಂತ್ರಿ ಆಗುತ್ತಿರುವ ನರೇಂದ್ರ ಮೋದಿ ಅವರಿಗೆ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಕೆ ಸಂದೇಶ ನೀಡಿದ್ದಾರೆ.
Vijaya Karnataka Web ujjayini shri hariakek to prime minister modi
ಪ್ರಧಾನಿ ಮೋದಿಗೆ ಉಜ್ಜಯಿನಿ ಶ್ರೀ ಹಾರೈಕೆ


ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗಳಿಸಿ ಎರಡನೆ ಅವಧಿಗೆ ಮತ್ತೆ ನರೇಂದ್ರ ದಾಮೋದರ ಮೋದಿ ಅವರು ಪ್ರಧಾನಮಂತ್ರಿ ಆಗುತ್ತಿದ್ದಾರೆ. ಭಾರತ ಸಂವಿಧಾನದ ಆಶಯಕ್ಕನುಗುಣವಾಗಿ ಪ್ರಜಾಸತ್ತಾತ್ಮಕ, ಜಾತ್ಯಾತೀತ ಸಮಾಜವಾದದ ನಿಲುವನ್ನು ಹೊಂದಿ, ಸಮಸ್ತ ಜನತೆಯ ಸರ್ವಾಂಗೀಣ ಪ್ರಗತಿ ಸಾಧಿಸುವಂತಹ ಕಾರ್ಯ ಯೋಜನೆಗಳನ್ನು ಕೈಗೊಂಡು ಅವುಗಳನ್ನು ಅನುಷ್ಠಾನಗೊಳಿಸುವುದು. ಸರ್ವೋದಯ, ಸಮನ್ವಯ, ಸಹಬಾಳ್ವೆ ಹಾಗೂ ಸಮಾನತೆಯ ತತ್ವ- ಸಿದ್ಧಾಂತಗಳನ್ನು ತಮ್ಮದಾಗಿಸಿಕೊಂಡು ವಿಶ್ವಶಾಂತಿಯನ್ನು ಬಯಸುವುದು. ಭಾರತೀಯ ಧರ್ಮ-ಸಂಸ್ಕೃತಿಯೊಂದಿಗೆ ಇತರೆ ಧರ್ಮಗಳ ಸಾರಸತ್ತ್ವದ ಮುಖೇನ ಭಾರತದ ಏಕತೆ ಮತ್ತು ಸಮಗ್ರತೆ ಪ್ರದರ್ಶಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶ್ರೀಗಳು ತಿಳಿಸಿದ್ದಾರೆ.

ವಿದೇಶಿ ಹೂಡಿಕೆಯೊಂದಿಗೆ ಆರ್ಥಿಕ ವಲಯಗಳ ಭದ್ರತೆ, ಆಧುನಿಕ ಹಾಗೂ ಸಾಂಪ್ರದಾಯಿಕ ಕೃಷಿ ಅಭಿವೃದ್ಧಿ, ದೇಶದ ರೈತರ ಹಿಸಕ್ತಿಯನ್ನು ಕಾಪಾಡುವುದರೊಂದಿಗೆ ಅವರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸುವುದು, ಅವರು ಮಾಡಿದ ಸಾಲ ಮನ್ನಾ ಮಾಡಲು ರಾಷ್ಟ್ರೀಯ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವುದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಮಾಡುವುದು, ಭಯೋತ್ಪಾದನಾ ನಿಗ್ರಹ, ಜಾಗತಿಕ ಶಿಕ್ಷಣ ವ್ಯವಸ್ಥೆ, ಅಟಲ್‌ ವಾಜಪೇಯಿ ಅವರ ಬಹುಕನಸಿನ ಗಂಗಾ-ತುಂಗಾ ನದಿ ಜೋಡಣೆ ಕಾರ್ಯಗತ, ದೇಶದ ಭವ್ಯ ಪರಂಪರೆ ಮತ್ತು ಇತಿಹಾಸ ಸಾರುತ್ತಿರುವ ಹನ್ನೆರಡು ಜ್ಯೋತಿರ್ಲಿಂಗಗಳ ಮಹಾಕ್ಷೇತ್ರಗಳಿಗೆ ಚತುಷ್ಪಥರಸ್ತೆ ಮಾರ್ಗ, ಜೋಡಿರೈಲು ಮಾರ್ಗ ಹಾಗೂ ವಿಮಾನ ಸಾರಿಗೆಯನ್ನು ಸಾಕಾರಗೊಳಿಸಬೇಕು ಎಂದು ಹೇಳಿದ್ದಾರೆ.

ಇಡೀ ವಿಶ್ವ ತನ್ನತ್ತ ಸೆಳೆಯುವಂತಹ ಶಕ್ತಿಯನ್ನು ಪ್ರಧಾನ ಮಂತ್ರಿ ಮೋದಿಯವರಿಗೆ ಪಾರ್ವತಿ-ಪರಮೇಶ್ವರರು ಅನುಗ್ರಹಿಸಲಿ, ಶ್ರೀಪೀಠದ ಮರುಳಸಿದ್ಧೇಶ್ವರಸ್ವಾಮಿ ಹಾಗೂ ಶಕ್ತಿಮಾತೆ ಗೌರಿಯವರ ಕೃಪಾ ಕಾರುಣ್ಯರಲಿ ಎಂದು ತಮ್ಮ ಶುಭಾಶೀರ್ವಾದ ಸಂದೇಶದಲ್ಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ