ಆ್ಯಪ್ನಗರ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡಿ, ಕೇಂದ್ರ ಒಬಿಸಿಗೆ ಸೇರಿಸಿ: ವಚನಾನಂದ ಸ್ವಾಮೀಜಿ ಒತ್ತಾಯ

ಎಲ್ಲಾ ವೀರಶೈವ ಲಿಂಗಾಯತ ಪಂಗಡಗಳಿಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಜಗದ್ಗುರು ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.

Vijaya Karnataka Web 14 Jan 2021, 6:24 pm
ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಎಲ್ಲಾ ವೀರಶೈವ ಲಿಂಗಾಯತ ಪಂಗಡಗಳಿಗೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂದು ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.
Vijaya Karnataka Web Vachananda Swamiji
ವಚನಾನಂದ ಸ್ವಾಮೀಜಿ


ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿಗುರುವಾರ ನಡೆದ ಹರಜಾತ್ರಾ ಮಹೋತ್ಸವದ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.

ಪಂಚಮಸಾಲಿ ಸಮುದಾಯ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರ ಬೆನ್ನಿಗೆ ಸದಾ ನಿಂತಿದೆ. ಸೂಕ್ತ ಸಂದರ್ಭ ನೋಡಿ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯ ಹಾಗೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿಎಲ್ಲಪಂಗಡಗಳನ್ನು ಸೇರಿಸಿ, ನಿಮ್ಮ ಜತೆ ನಮ್ಮ ಸಮಾಜ ಸದಾ ಇರುತ್ತದೆ ಎಂದು ಅಭಯ ನೀಡಿದರು.

ಪಂಚಮಸಾಲಿ ಮೀಸಲಿಗೆ ಜ.14 ದಿಂದ ‘ಪಂಚ ಲಕ್ಷ ಹೆಜ್ಜೆ’ ಬೃಹತ್‌ ಪಾದಯಾತ್ರೆ

ನಮ್ಮ ಸಮುದಾಯದ ಶೇ.10ರಷ್ಟು ಜನರಿಗೆ ಮನೆ, ಶೇ.15ರಷ್ಟು ಮಂದಿಗೆ ಭೂಮಿ ಇಲ್ಲ. ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಸಿಎಂ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಮಣ್ಣನ್ನೇ ಹಾಸಿ, ಹೊದ್ದು ಕೃಷಿಯಲಿ ತೊಡಗಿರುವ ಪಂಚಮಸಾಲಿಗಳು ಹೊಲ, ಕಣಗಳಲ್ಲಿಒಕ್ಕಲು ಮಾಡಿ ರಾಶಿ ಹಾಕಿದಾಗ ಎಲ್ಲಾಶ್ರಮಿಕ ವರ್ಗದವರನ್ನು ಕರೆದು ಅವರಿಗೆ ಪಾಲು ನೀಡಿ, ಉಳಿದ ದವಸ-ಧಾನ್ಯ ಮನೆಗೆ ಕೊಂಡ್ಡೊಯ್ಯುವ ಹೃದಯ ವೈಶಾಲ್ಯ ಮತ್ತು ಸ್ವಾಭಿಮಾನಿಗಳಾಗಿದ್ದಾರೆ ಎಂದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ, ಅಮಿತ್ ಶಾ ಭೇಟಿಗೆ ನಿರ್ಧಾರ: ಬಸವ ಶ್ರೀ

ತಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹರದ್ವಾರ ಉದ್ಘಾಟಿಸಿದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಡಾ.ಸಿ.ಎಸ್‌. ಅಶ್ವತ್‌ ನಾರಾಯಣ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ.ರಾಮಚಂದ್ರ, ಪ್ರೊ.ಎನ್‌.ಲಿಂಗಣ್ಣ, ಶಂಕರ ಪಾಟೀಲ ಮುನೇಕೊಪ್ಪ, ಸಮಾಜದ ಮುಖಂಡರಾದ ಬಸವರಾಜ ದಿಂಡೂರು, ಬಿ.ನಾಗನಗೌಡ ಮತ್ತಿತರರು ಹಾಜರಿದ್ದರು.

ಕೂಡಲ ಸಂಗಮದಲ್ಲಿ ಸಂಕ್ರಾಂತಿ ಸಡಗರ: ಪುಣ್ಯ ಸ್ನಾನವಿಲ್ಲ, ದರ್ಶನಕ್ಕೆ ಮಾತ್ರ ಸೀಮಿತ

ಕೊರೊನಾ ವೈರಸ್‌ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಚೀನಾ, ಆಮೆರಿಕಾ, ಇಂಗ್ಲೆಂಡ್‌ಗಂತಹ ದೇಶಗಳಲ್ಲಿಲಕ್ಷ, ಲಕ್ಷ ಜನರನ್ನು ಬಲಿ ಪಡೆಯಿತು. ಆದರೆ, ನಮ್ಮ ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ಭಾರತ ಕೊರೊನಾ ಎದುರಿಸಿ ಸುಭದ್ರವಾಗಿ ನಿಂತಿದೆ.
- ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಗುರುಪೀಠ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ