ಆ್ಯಪ್ನಗರ

ಪ್ರೇಮಿಗಳ ದಿನ: ಸಪ್ತಪದಿ ತುಳಿದ ಡಿಸಿ, ಸಿಇಒ

ದಾವಣಗೆರೆಯ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮತ್ತು ಜಿಪಂ ಸಿಇಒ ಎಸ್‌. ಅಶ್ವತಿ ಪ್ರೇಮಿಗಳ ದಿನವಾದ ಗುರುವಾರ ಮದುವೆಯಾಗುವ ಮೂಲಕ ದಾಂಪತ್ಯ ಬದುಕಿಗೆ ಅಡಿಯಿಟ್ಟರು.

Vijaya Karnataka 15 Feb 2019, 5:00 am
ದಾವಣಗೆರೆ : ದಾವಣಗೆರೆಯ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮತ್ತು ಜಿಪಂ ಸಿಇಒ ಎಸ್‌. ಅಶ್ವತಿ ಪ್ರೇಮಿಗಳ ದಿನವಾದ ಗುರುವಾರ ಮದುವೆಯಾಗುವ ಮೂಲಕ ದಾಂಪತ್ಯ ಬದುಕಿಗೆ ಅಡಿಯಿಟ್ಟರು.
Vijaya Karnataka Web valentines day ceo of dc ceo
ಪ್ರೇಮಿಗಳ ದಿನ: ಸಪ್ತಪದಿ ತುಳಿದ ಡಿಸಿ, ಸಿಇಒ


ಸಿಇಒ ಎಸ್‌. ಅಶ್ವತಿ ಊರಾದ ಕೇರಳದ ಕೊಯಿಕ್ಕೋಡ್‌ನಲ್ಲಿನ ಟ್ಯಾಗೋರ್‌ ಶತಮಾನೋತ್ಸವ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ವಿವಾಹ ಸರಳವಾಗಿ ನೆರವೇರಿತು. ವಧು ಕೇರಳದ ಸಾಂಪ್ರದಾಯಿಕ ಶೈಲಿಯಲ್ಲಿ ಕೇವಲ 30 ನಿಮಿಷದಲ್ಲಿ ವಿವಾಹ ನೆರವೇರಿತು. ಸಾಂಪ್ರದಾಯಿಕ ಉಡುಗೆ ತೊಟ್ಟು ವರ ಗೌತಮ್‌ ಮದುವೆ ಮನೆಗೆ ಆಗಮಿಸಿದರು. ನಂತರ ಕೇರಳ ಶೈಲಿಯಲ್ಲಿ 15 ನಿಮಿಷದಲ್ಲಿ ಮದುವೆಯ ಎಲ್ಲ ಸಂಪ್ರದಾಯಗಳು ಮುಗಿಸಿ ನಂತರ ವಧು-ವರರು ಹಿರಿಯರ ಆಶೀರ್ವಾದ ಪಡೆದರು. ಎಲ್ಲವೂ ಅರ್ಧ ಗಂಟೆಯಲ್ಲಿ ಮುಗಿಯಿತು. ಜಿಲ್ಲೆಯಿಂದ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು. ಫೆ . 17ರ ಸಂಜೆ 7 ಕ್ಕೆ ಡಿಸಿ ಗೌತಮ್‌ ಬಗಾದಿ ಅವರ ಊರಾದ ಆಂಧ್ರಪ್ರದೇಶದ ವಿಶಾಖಪಟ್ಟಣದ ದಿ ಪಾರ್ಕ್‌ ಹೋಟೆಲ್‌ನಲ್ಲಿ ಅರತಕ್ಷತೆ ನಡೆಯಲಿದೆ.

ರಾಯಚೂರಿನಲ್ಲಿ ಡಿಸಿ ಆಗಿದ್ದ ಡಾ. ಬಗಾದಿ ಗೌತಮ್‌ ನಾಲ್ಕು ತಿಂಗಳ ಹಿಂದೆ ದಾವಣಗೆರೆಗೆ ಡಿಸಿಯಾಗಿ ವರ್ಗಾವಣೆ ಆಗಿದ್ದರು. ಎಸ್‌. ಅಶ್ವತಿ ಎರಡು ವರ್ಷದಿಂದ ಇಲ್ಲಿಯೇ ಸಿಇಒ ಆಗಿದ್ದರು. ತಮ್ಮ ಮದುವೆ ಬಗ್ಗೆ ಅವರು ತಿಳಿಸಿದಾಗ ನಮ್ಮ ನಡುವೆ ನಾಲ್ಕು ವರ್ಷದಿಂದ ಸ್ನೇಹವಿತ್ತು. ಈಗ ಸ್ನೇಹಿತನನ್ನು ವಿವಾಹ ಆಗುತ್ತಿರುವುದು ಖುಷಿ ಆಗಿದೆ ಎಂದಿದ್ದರು. ಪ್ರೇಮಿಗಳ ದಿನದಂದು ಸರಳವಾಗಿ ವಿವಾಹ ಆಗುವುದಾಗಿ ಇಬ್ಬರು ತಿಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ