ಆ್ಯಪ್ನಗರ

ವೀರಶೈವ-ಲಿಂಗಾಯತ ಒಂದಾಗಿ ಹೋಗಲು ನಿರ್ಣಯ

ವೀರಶೈವ-ಲಿಂಗಾಯತ ಎರಡು ಒಂದೇ ಎಂಬುದು ಸ್ಪಷ್ಟವಾಗಿದ್ದು ಇವೆರಡು ಒಂದಾಗಿ ಹೋದರೆ ಮಾತ್ರ ರಾಜ್ಯ, ಕೇಂದ್ರದಲ್ಲಿ ಸಮಾಜಕ್ಕೆ ಸಿಗುವ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಈ ಕುರಿತು ಶಿವಯೋಗ ಮಂದಿರದಲ್ಲಿ ಗುರು, ವಿರಕ್ತಮಠದವರು ಸೇರಿ ನಿರ್ಣಯ ಕೈಗೊಂಡಿದ್ದೇವೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜ.ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವಾತ್ಪಾದರು ಹೇಳಿದರು.

Vijaya Karnataka 21 Dec 2018, 4:24 pm
ಹರಪನಹಳ್ಳಿ : ವೀರಶೈವ-ಲಿಂಗಾಯತ ಎರಡು ಒಂದೇ ಎಂಬುದು ಸ್ಪಷ್ಟವಾಗಿದ್ದು ಇವೆರಡು ಒಂದಾಗಿ ಹೋದರೆ ಮಾತ್ರ ರಾಜ್ಯ, ಕೇಂದ್ರದಲ್ಲಿ ಸಮಾಜಕ್ಕೆ ಸಿಗುವ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಈ ಕುರಿತು ಶಿವಯೋಗ ಮಂದಿರದಲ್ಲಿ ಗುರು, ವಿರಕ್ತಮಠದವರು ಸೇರಿ ನಿರ್ಣಯ ಕೈಗೊಂಡಿದ್ದೇವೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜ.ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವಾತ್ಪಾದರು ಹೇಳಿದರು.
Vijaya Karnataka Web veerashaiva lingayat decided to go together
ವೀರಶೈವ-ಲಿಂಗಾಯತ ಒಂದಾಗಿ ಹೋಗಲು ನಿರ್ಣಯ


ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವತಂತ್ರ ಹೋರಾಟ ಮಾಡುವವರಿಗೆ ತಿಳಿವಳಿಕೆ ಕೊಡುವ ಕೆಲಸ ಆರಂಭವಾಗಲಿದೆ. ನಂತರ ಗುರು ಮತ್ತು ವಿರಕ್ತಮಠಗಳು ಒಡಗೂಡಿ ಸಂದೇಹ ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಗುರುವಿರಕ್ತರಲ್ಲಿ ಸಾಮರಸ್ಯ ಉಂಟು ಮಾಡಿ ಭಕ್ತರಲ್ಲಿ ಉತ್ತಮ ಬಾಂಧವ್ಯ ನಿರ್ಮಿಸಲಾಗುವುದು. ಇದರ ಜತೆಗೆ ವರ್ಷದಲ್ಲಿ ಎರಡು ಕಡೆ ಬೃಹತ್‌ ಕಾರ್ಯಕ್ರಮ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ವೀರಶೈವ-ಲಿಂಗಾಯತ ಧರ್ಮದ ರಾಜಕೀಯ ಮುಖಂಡರು ಧರ್ಮ, ಸಂಸ್ಕೃತಿ ವಿಷಯದಲ್ಲಿ ನಿರ್ಲಕ್ಷ ್ಯ ಮನೋಭಾವ ತಾಳುತ್ತಿದ್ದಾರೆ. ಕೆಲ ಕಾರ್ಯಕ್ರಮಗಳಿಗೆ ಬರುತ್ತಿಲ್ಲ. ರಾಜಕಾರಣಿಗಳ ಕಣ್ಣಿಗೆ ಬೆರಳೆಣಿಕೆಯ ಮಠಗಳು ಮಾತ್ರ ಕಾಣುತ್ತವೆ. ಹಗಲಿರುಳು ಶ್ರಮಿಸುವ ಪಂಚಪೀಠ, ಶಾಖಾಮಠಗಳು ಮಾಡುವ ಧರ್ಮ ಕಾರ್ಯಗಳಲ್ಲಿ ಬಹಳ ಪಾಲ್ಗೊಳ್ಳದಿರುವುದು ನೋವು ತಂದಿದೆ ಎಂದು ಶ್ರೀಗಳು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ