ಆ್ಯಪ್ನಗರ

ವೀರಶೈವ ಲಿಂಗಾಯತ ವಧು, ವರರ ಸಮಾವೇಶ 9ಕ್ಕೆ

ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌, ಕರ್ನಾಟಕ ವೀರಶೈವ ವಧು-ವರರ ಅನ್ವೇಷಣಾ ಕೇಂದ್ರದಿಂದ ನಗರದ ಚೇತನಾ ಹೋಟೆಲ್‌ ಎದುರಿನ ಜೆಪಿ ಸಭಾಂಗಣದಲ್ಲಿ ಡಿ.9ರ ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಮತ್ತು ಪಾಲಕರ ಸಮಾವೇಶ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ತಿಳಿಸಿದರು.

Vijaya Karnataka 4 Dec 2018, 5:00 am
ದಾವಣಗೆರೆ : ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌, ಕರ್ನಾಟಕ ವೀರಶೈವ ವಧು-ವರರ ಅನ್ವೇಷಣಾ ಕೇಂದ್ರದಿಂದ ನಗರದ ಚೇತನಾ ಹೋಟೆಲ್‌ ಎದುರಿನ ಜೆಪಿ ಸಭಾಂಗಣದಲ್ಲಿ ಡಿ.9ರ ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಮತ್ತು ಪಾಲಕರ ಸಮಾವೇಶ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ತಿಳಿಸಿದರು.
Vijaya Karnataka Web veerashaiva lingayatam bride and grooms convention
ವೀರಶೈವ ಲಿಂಗಾಯತ ವಧು, ವರರ ಸಮಾವೇಶ 9ಕ್ಕೆ


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಶಿವಸಿಂಪಿ, ಸಾದರು, ಗಾಣಿಗರ, ಮಡಿವಾಳರು, ಹಡಪದ, ನಾಮಧೇವರೆಡ್ಡಿ, ಲಿಂಗಾಯತ ರೆಡ್ಡಿ, ನೊಳಂಬ, ನೇಕಾರ, ಪಂಚಾಚಾರ್ಯರು ಸೇರಿದಂತೆ ಎಲ್ಲ ಒಳಪಂಗಡಗಳ, ಸರಕಾರಿ, ಅರೆ ಸರಕಾರಿ, ಡಾಕ್ಟರ್‌, ಎಂಜಿನಿಯರ್‌, ವಿದೇಶಿವಾಸಿ, ವ್ಯಾಪಾರಸ್ಥ, ಉದ್ಯೋಗಸ್ಥ, ಉದ್ದಿಮೆದಾರರು, ಪದವೀಧರ ವರ-ವಧು, ಎಲ್ಲ ವರ್ಗದ ಜನ ಭಾಗವಹಿಸುವರು ಎಂದು ತಿಳಿಸಿದರು.

ಸಮಾವೇಶದಲ್ಲಿ ವಧು-ವರರನ್ನು ಪರಸ್ಪರ ಪರಿಚಯಿಸಲಾಗುವುದು. ಅಪೇಕ್ಷೆ ಹೊಂದಿದ ವಧು-ವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು. ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ನೀಡಲಾಗುವುದು. ವಧು-ವರರ ಎರಡು ಫೋಟೋ ಜಾತಕದೊಂದಿಗೆ ಪಾಲ್ಗೊಳ್ಳಬೇಕು. ವಿಧವೆ, ವಿಧುರ ಮರು ವಿವಾಹ ಆಗ ಬಯಸುವವರು, ಅಂಗವಿಕಲರು, ಪಾಲಕರು ಭಾಗವಹಿಸಬಹುದು ಎಂದು ಹೇಳಿದರು.

ಸಮಾವೇಶದಲ್ಲಿ ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ, ಅನ್ವೇಷಣಾ ಕೇಂದ್ರದ ಶಿವಕುಮಾರ ಹಿರೇಮಠ ಭಾಗವಹಿಸುವರು. ಮೊ : 9686927111, 9663108606 ಸಂಪರ್ಕಿಸಬಹುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ