ಆ್ಯಪ್ನಗರ

ಬಿರುಗಾಳಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ತರಕಾರಿ ಬೆಳೆ

ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಪಾಲಿ ಹೌಸ್‌, ಅಡಕೆ ಗಿಡಗಳು, ಬಾಳೆ ಮತ್ತು ತರಕಾರಿ ಬೆಳೆಗಳು ನೆಲಕಚ್ಚಿ ಅಪಾರ ಪ್ರಮಾಣದ ಹಾನಿಯಾಗಿದೆ.

Vijaya Karnataka 12 May 2018, 3:50 pm
ಮಾಯಕೊಂಡ : ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಪಾಲಿ ಹೌಸ್‌, ಅಡಕೆ ಗಿಡಗಳು, ಬಾಳೆ ಮತ್ತು ತರಕಾರಿ ಬೆಳೆಗಳು ನೆಲಕಚ್ಚಿ ಅಪಾರ ಪ್ರಮಾಣದ ಹಾನಿಯಾಗಿದೆ.
Vijaya Karnataka Web vegetable crops stormed to storm hail
ಬಿರುಗಾಳಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ತರಕಾರಿ ಬೆಳೆ


ದಾವಣಗೆರೆ ತಾಲೂಕಿನ ಗಂಗನಕಟ್ಟೆ, ಕೊಡಗನೂರು, ಸುಲ್ತಾನಿಪುರ ಗ್ರಾಮಗಳು ಸೇರಿ ಹಲವು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಅಡಕೆ ಗಿಡಗಳು ಧರೆಗುರುಳಿವೆ. ಗಂಗನಕಟ್ಟೆ ಗ್ರಾಮದ ರೈತ ಬಿ.ಎಂ. ವೀರಪ್ಪ ಎನ್ನುವವರ ಪಾಲಿ ಹೌಸ್‌ ಗಾಳಿಗೆ ಹಾರಿಹೋಗಿ ಅದರಲ್ಲಿನ ಕ್ಯಾಬೇಜ್‌ ಬೆಳೆ ನೆಲಕಚ್ಚಿ ಸುಮಾರು 10 ಲಕ್ಷ ರೂ. ಮೌಲ್ಯದ ನಷ್ಟವಾಗಿದೆ.

ನೆಲಕಚ್ಚಿದ ತರಕಾರಿ ಬೆಳೆಗಳು:

ಗಂಗನಕಟ್ಟೆ ಗ್ರಾಮದ ಜಯ್ಯಪ್ಪ ಎಂಬವರ 2.5 ಎಕರೆ ಅಡಕೆ ತೋಟದಲ್ಲಿ 150 ಮರಗಳು ಮರಿದು ಬಿದ್ದಿವೆ. ಕಾಜವಾಲಿ ಎಂಬ ರೈತ ಬೆಳೆದಿದ್ದ ಸುಮಾರು 3 ಎಕರೆಯಲ್ಲಿನ ಫಸಲಿಗೆ ಬಂದ ಟೊಮೆಟೊ ಬೆಳೆ ಆಲಿಕಲ್ಲು ಹೊಡೆತಕ್ಕೆ ಹಾಳಾಗಿದೆ. ಇದೇ ಗ್ರಾಮದ ಹೇಮಂತ್‌ ಎಂಬ ರೈತನ 2 ಎಕರೆ ಜಮೀನಿನಲ್ಲಿನ ಫಲಬಿಟ್ಟಿದ್ದ ಮೆಣಸಿನ ಕಾಯಿ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಸಮೀಪದ ಹಳ್ಳ ಸೇರಿದೆ. ಕೊಡಗನೂರು ಗ್ರಾಮದ ರೇವಣಸಿದ್ದಪ್ಪ ಎಂಬವರ ಟೊಮೆಟೊ ಬೆಳೆ ಹಾಳಾಗಿದೆ.

ಹೊಸದುರ್ಗ - ದಾವಣಗೆರೆ ರಾಜ್ಯ ಹೆದ್ದಾರಿ ಬದಿಯಲ್ಲಿನ ಬೇವಿನ ಮರಗಳು ಬುಡ ಸಮೇತ ಧರೆಗುರುಳಿವೆ. ಹಲವು ವಿದ್ಯುತ್‌ ಕಂಬಗಳು ಬಿದ್ದು ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ.

ಬಿರುಗಾಳಿ ಆಲಿಕಲ್ಲು ಮಳೆಗೆ ನಮ್ಮ ಪಾಲಿಹೌಸ್‌ ಸೇರಿದಂತೆ ಸುಮಾರು ನೂರಾರು ಎಕರೆ ಪ್ರದೇಶಗಳಲ್ಲಿನ ತರಕಾರಿ ಮತ್ತು ಅಡಕೆ ಮರಗಳು ನೆಲಕಚ್ಚಿ ಲಕ್ಷಾಂತರ ರೂ. ನಷ್ಟವಾಗಿದೆ. ಸರಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಗಂಂಗನಕಟ್ಟೆ ರೈತರಾದ ನಾಗರಾಜ್‌, ವೀರಪ್ಪ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ