ಆ್ಯಪ್ನಗರ

ದಾವಣಗೆರೆ: ಮಲಿನ ನೀರಿಗೆ ಕೊಕ್ಕೆ, ಸಾರಿಗೆ ಇಲಾಖೆಗೆ ನೋಟಿಸ್‌

ಇಲ್ಲಿನ ಕೋವಿಡ್‌ ಆಸ್ಪತ್ರೆಯ ಸೋಂಕಿತರು ಬಳಸಿದ ಮಲಿನ ನೀರು ತನ್ನ ಆವರಣದೊಳಗೆ ಬರುತ್ತಿದೆಯೆಂದು ನೀರು ಬರುವುದನ್ನು ಸಾರಿಗೆ ಘಟಕ ಬಂದ್‌ ಮಾಡಿತ್ತು. ಇದಕ್ಕೆ ಕಾರಣ ಕೇಳಿ ಜಿಲ್ಲಾಡಳಿತ ನೀಡಿದ ನೋಟಿಸ್‌ನಿಂದ ಸಾರಿಗೆ ಇಲಾಖೆ ಜಿಲ್ಲಾಡಳಿತದ ಸೂಚನೆ ಪಾಲಿಸಬೇಕೋ, ಇಲ್ಲವೋ ಸಿಬ್ಬಂದಿ ಆರೋಗ್ಯ ಕಾಪಾಡಬೇಕೊ ಎಂಬ ಧರ್ಮ ಸಂಕಟ ಎದುರಿಸುವಂತಾಗಿದೆ.

Vijaya Karnataka Web 1 Jun 2020, 10:29 am
ಚಳ್ಳಕೆರೆ: ಇಲ್ಲಿನ ಸಾರಿಗೆ ಡಿಪೋದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದೆ. ಅದರ ಮೇಲೆ ಬಸ್‌ ಮೆಕ್ಯಾನಿಕಲ್‌ಗಳಿಗಾಗಿ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಿಸಲಾಗಿದೆ. ಈ ಸ್ಥಳದ ಬಳಿಯೇ ಬಿಸಿಎಂ ಹಾಸ್ಟೆಲ್‌ನಿಂದ ಕಾಂಪೌಂಡ್‌ ತಳಪಾಯ ಕೊರೆದು ಕೋವಿಡ್‌ ಆಸ್ಪತ್ರೆಯ ಸೋಂಕಿತರು ಬಳಸಿದ ಮಲಿನ ನೀರನ್ನು ಚರಂಡಿಗೆ ಹರಿದು ಬಿಡಲಾಗಿತ್ತು. ಹೀಗಾಗಿ ಜೀವ ಭಯದಿಂದ ಸಾರಿಗೆ ಇಲಾಖೆ ಮಲೀನ ನೀರು ಬರುವುದನ್ನು ಬಂದ್‌ ಮಾಡಿತ್ತು. ಹೀಗಾಗಿ ತಹಸೀಲ್ದಾರ್‌ ಸ್ಥಳಕ್ಕೆ ಹೋಗಿ ತೆರವುಗೊಳಿಸಿ ಎಂದು ಸೂಚಿಸಿದರೂ ಸಾರಿಗೆ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ತೆರವುಗೊಳಿಸುವುದು ಕಷ್ಟವೆಂದು ಕೈಚೆಲ್ಲಿತ್ತು. ಇದಕ್ಕೆ ಸಿಟ್ಟಿಗೆದ್ದ ಜಿಲ್ಲಾಡಳಿತ ಕಾರಣ ಕೇಳಿ ಮೇ 30ರಂದು ಸಾರಿಗೆ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ.
Vijaya Karnataka Web water pollution notice issued by the district administration to transport department
ದಾವಣಗೆರೆ: ಮಲಿನ ನೀರಿಗೆ ಕೊಕ್ಕೆ, ಸಾರಿಗೆ ಇಲಾಖೆಗೆ ನೋಟಿಸ್‌


ಜಿಲ್ಲಾಡಳಿತಕ್ಕೆ ಪತ್ರ
ಸೋಂಕಿತರು ಸ್ನಾನ ಮತ್ತು ಶೌಚಕ್ಕೆ ಬಳಸುತ್ತಿರುವ ಮಲೀನ ನೀರು ಡಿಪೋದ ಚರಂಡಿಗೆ ಹರಿಯ ಬಿಟ್ಟಿರುವ ಕಾರಣ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಆಗುತ್ತಿದ್ದಾರೆ. ಜತೆಗೆ ಡಿಪೋದ ಚರಂಡಿಯೊಳಗೆ ಮಲಿನ ನೀರು ಹರಿಯಲು ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾಡಳಿತದ ನೋಟಿಸ್‌ಗೆ ಸಾರಿಗೆ ಇಲಾಖೆ ಮೇ31ರಂದು ಉತ್ತರ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ