ಆ್ಯಪ್ನಗರ

ಗಿಡಗಳಿಗೆ ಬಾಟಲಿ ಅಳವಡಿಸಿ ಪಕ್ಷಿಗಳಿಗೆ ನೀರು!

ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಕುಡಿವ ನೀರು ಸೇರಿ ಮೂಲ ಸೌಕರ್ಯಗಳ ಕಲ್ಪಿಸುವ ನಿರ್ವಹಣೆ ಜತೆಗೆ ಅಧಿಕಾರಿಯೊಬ್ಬರೂ ಪಕ್ಷಿಗಳಿಗೆ ನೀರುಣಿಸುವ ಸೇವೆಯಲ್ಲಿ ತೊಡಗಿ ಪಕ್ಷಿ ಪ್ರೇಮ ಮೆರೆದಿದ್ದಾರೆ.

Vijaya Karnataka 6 May 2019, 5:00 am
ವಿಕ ವಿಶೇಷ ಜಗಳೂರು
Vijaya Karnataka Web water to the birds by planting a bottle of plants
ಗಿಡಗಳಿಗೆ ಬಾಟಲಿ ಅಳವಡಿಸಿ ಪಕ್ಷಿಗಳಿಗೆ ನೀರು!


ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಕುಡಿವ ನೀರು ಸೇರಿ ಮೂಲ ಸೌಕರ್ಯಗಳ ಕಲ್ಪಿಸುವ ನಿರ್ವಹಣೆ ಜತೆಗೆ ಅಧಿಕಾರಿಯೊಬ್ಬರೂ ಪಕ್ಷಿಗಳಿಗೆ ನೀರುಣಿಸುವ ಸೇವೆಯಲ್ಲಿ ತೊಡಗಿ ಪಕ್ಷಿ ಪ್ರೇಮ ಮೆರೆದಿದ್ದಾರೆ.

ಇಂತ ಜನ ಮೆಚ್ಚುವ ಕೆಲಸವನ್ನು ತಾಲೂಕಿನ ಕಲ್ಲೇದೇವರಪುರ ಪಿಡಿಒ ಓಬಣ್ಣ ಮಾಡುತ್ತಿದ್ದಾರೆ. ಗ್ರಾಪಂ ಆವರಣದಲ್ಲಿ ಸುಮಾರು 25ಕ್ಕೂ ಹೆಚ್ಚು ಮರಗಳಿದ್ದು, ಎಲ್ಲ ಮರಗಳಿಗೆ ನೀರಿನ ಬಾಟಲಿಯನ್ನು ಅಳವಡಿಸಿ, ಅದರ ತುಂಬಾ ಪ್ರತಿ ದಿನ ನೀರು ತುಂಬಿಸಿ ಪಕ್ಷಿಗಳಿಗೆ ನೀರು ಕುಡಿಯಲು ಓಬಣ್ಣ ಅನುವು ಮಾಡಿಕೊಟ್ಟಿದ್ದಾರೆ.

ಬೇಸಿಗೆ ಕಾಲದಲ್ಲಿ ಪಕ್ಷಿಗಳು ನೀರು ಕುಡಿಯಲು ಅನುಕೂಲ ಆಗಲೆಂದು ಮರಕ್ಕೊಂದು ನೀರಿನ ಬಾಟಲಿಯ ಅರ್ಧ ಭಾಗ ಕತ್ತರಿಸಿ, ಬಿರುಡೆ ಮುಚ್ಚಿ ಅದರ ತುಂಬಾ ನೀರು ತುಂಬಿಸಿ ಮರಗಳಿಗೆ ಅಳವಡಿಸಿದ್ದಾರೆ. ಪ್ರತಿ ದಿನ ಹಿಂದಿನ ದಿನದ ನೀರನ್ನು ಬದಲಾಯಿಸಿ ಹೊಸ ನೀರನ್ನು ಬಾಟಲಿಗೆ ಶೇಖರಣೆ ಮಾಡಿ, ಪಕ್ಷಿಗಳಿಗೆ ಕುಡಿಯಲು ಅನುಕೂಲ ಕಲ್ಪಿಸಿ ಕೊಟ್ಟಿದ್ದಾರೆ.

ಪ್ರತಿ ದಿನ ಕಚೇರಿಗೆ ಬಂದ ಕೂಡಲೇ ಎಷ್ಟೇ ಕೆಲಸದ ಒತ್ತಡ ಇದ್ದರೂ ಮೊದಲು ಮರಕ್ಕೆ ಕಟ್ಟಿದ ಬಾಟಲಿಗಳಿಗೆ ನೀರು ತುಂಬಿಸಿದ ನಂತರ ತಮ್ಮ ದೈನಂದಿನ ಕಚೇರಿಯ ಕೆಲಸ ಕಾರ್ಯಗಳಿಗೆ ಮುಂದಾಗುತ್ತಾರೆ ಪಿಡಿಒ ಓಬಣ್ಣ. ಹೀಗೆ ಕಟ್ಟಿರುವ ಬಾಟಲಿಯಲ್ಲಿನ ನೀರು ಕುಡಿಯಲು ನಿತ್ಯ ನೂರಾರು ಹಕ್ಕಿ, ಪಕ್ಷಿಗಳು ಧಾವಿಸಿ ಬಂದು ಜಲ ದಾಹವನ್ನು ಇಂಗಿಸಿಕೊಂಡು ಹೋಗುತ್ತಿವೆ.

'ತಾಲೂಕಿನಲ್ಲಿ ಸದಾ ಬರಗಾಲ, ಬಿರು ಬಿಸಿಲಿನಿಂದ ಕೂಡಿದ್ದು, ಸಕಾಲಕ್ಕೆ ಮಳೆ ಬಾರದೇ ಕೆರೆ ಕಟ್ಟೆಗಳೆಲ್ಲಾ ಬತ್ತಿ ಹೋಗಿವೆ. ಜನರಿಗೆ ಕುಡಿಯಲು ಸಹ ನೀರು ಸಿಗುವುದು ಕಷ್ಟವಾಗುತ್ತಿದೆ. ಇದನ್ನು ಅರಿತು ಮೂಕ ಪ್ರಾಣಿ, ಪಕ್ಷಿಗಳಿಗೆ ನೀರು ಲಭಿಸುವುದು ಕಷ್ಟವೆಂದು ಅರಿತು ಇಂತಹ ಪುಣ್ಯದ ಕೆಲಸ ಮಾಡುತ್ತಿದ್ದೇನೆ' ಎನ್ನುತ್ತಾರೆ ಪಿಡಿಒ ಓಬಣ್ಣ.

ಎಲ್ಲ ಗ್ರಾಪಂ ಪಿಡಿಒಗಳು ಸಹ ತಮ್ಮ ಕಚೇರಿಯ ಆವರಣದಲ್ಲಿರುವ ಮರ, ಗಿಡಗಳು ಹಾಗೂ ಮನೆಯ ತಾರಸಿಯ ಮೇಲೆ ಪಿಡಿಒ ಓಬಣ್ಣರಂತೆ ನೀರಿನ ಬಾಟಲಿಗಳನ್ನು ಅಳವಡಿಸಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸಿದರೆ ಪುಣ್ಯ ಪ್ರಾಪ್ತಿಯಾಗಲಿದೆ.

- ಜಾನಕಿರಾಮ್‌, ತಾಪಂ ಇಒ, ಜಗಳೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ