ಆ್ಯಪ್ನಗರ

ತಿಮ್ಮಲಾಪುರ ಕ್ಯಾಂಪ್‌ಗೆ ನೀರಿನ ಭಾಗ್ಯ

ಸಮರ್ಪಕ ಕುಡಿಯುವ ನೀರು ಒದಗಿಸುವವರೆಗೂ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡು ಶಾಸಕರ ಮನವೊಲಿಕೆ ನಂತರ ಮತದಾನ ಮಾಡಿದ್ದ ತಾಲೂಕಿನ ಅರಸೀಕೆರೆಯ ತಿಮ್ಮಲಾಪುರ ಕ್ಯಾಂಪ್‌ನ ನಿವಾಸಿಗಳಿಗೆ ಕೊನೆಗೂ ಗುರುವಾರ ನೀರಿನ ಭಾಗ್ಯ ದೊರೆತಿದೆ.

Vijaya Karnataka 27 Apr 2019, 5:00 am
ಹರಪನಹಳ್ಳಿ : ಸಮರ್ಪಕ ಕುಡಿಯುವ ನೀರು ಒದಗಿಸುವವರೆಗೂ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡು ಶಾಸಕರ ಮನವೊಲಿಕೆ ನಂತರ ಮತದಾನ ಮಾಡಿದ್ದ ತಾಲೂಕಿನ ಅರಸೀಕೆರೆಯ ತಿಮ್ಮಲಾಪುರ ಕ್ಯಾಂಪ್‌ನ ನಿವಾಸಿಗಳಿಗೆ ಕೊನೆಗೂ ಗುರುವಾರ ನೀರಿನ ಭಾಗ್ಯ ದೊರೆತಿದೆ.
Vijaya Karnataka Web waterfall to the thimmalapura camp
ತಿಮ್ಮಲಾಪುರ ಕ್ಯಾಂಪ್‌ಗೆ ನೀರಿನ ಭಾಗ್ಯ


ಅರಸೀಕೆರೆ ಪಂಚಾಯಿತಿ 2ನೇ ವಾರ್ಡ್‌ನಲ್ಲಿ ತಿಮ್ಮಲಾಪುರದಲ್ಲಿ ಸುಮಾರು 150 ಮನೆಗಳಿದ್ದು, 800ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಕಳೆದ 6 ತಿಂಗಳುಗಳಿಂದ ಈ ಭಾಗದ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡದೆ ಪಂಚಾಯಿತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ ್ಯ ಧೋರಣೆ ಅನುಸರಿಸಿದ್ದರು. ಹಾಗಾಗಿ ಲೋಕಸಭೆ ಚುನಾವಣೆ ಬಹಿಷ್ಕಾರದ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ತಿಮ್ಮಲಾಪುರ ಕ್ಯಾಂಪ್‌ ಮುಖಂಡ ಪರಶುರಾಮ ತಿಳಿಸಿದರು.

ಮತದಾನ ಬಹಿಷ್ಕಾರ ಹಿಂಪಡೆಯುವಂತೆ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ನಿವಾಸಿಗಳ ಮನವೊಲಿಸಿ ಕೊಳವೆಬಾವಿ ಕೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಗ್ರಾಮದ ಕಲ್ಲು ಬಂಡೆಗಳ ಮಧ್ಯೆ ಕೊಳವೆಬಾವಿ ಕೊರೆದಿದ್ದು, ಜಲಧಾರೆ ಉಕ್ಕಿ ಹರಿದಿದೆ. ಕೊಳವೆಬಾವಿಯಲ್ಲಿ 4 ಇಂಚುಗಳಷ್ಟು ನೀರು ದೊರಕಿದ್ದರಿಂದ ಗ್ರಾಮಸ್ಥರು ಸಂಭ್ರಮಪಟ್ಟರು.

ಕಳೆದ ಒಂದು ವರ್ಷಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಮತದಾನ ಬಹಿಷ್ಕಾರದ ಬಿಸಿ ತಾಗಿದ್ದರಿಂದ ಶಾಸಕರು ಭೇಟಿ ನೀಡಿ, ಕೊಳವೆಬಾವಿ ಕೊರೆಯಲು ಸೂಚನೆ ನೀಡಿದ್ದರು. 4 ಇಂಚು ನೀರು ದೊರಕಿದ್ದು ಸಂತಸ ತಂದಿದೆ ಎಂದು ವಾರ್ಡ್‌ ಸದಸ್ಯ ಎಂ.ಮಧು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮುಖಂಡರಾದ ಕೆ.ಬಸವರಾಜ್‌, ವಿ.ತಿಮ್ಮೇಶ್‌, ಎನ್‌.ಸಿದ್ದಪ್ಪ, ಮಲ್ಲೇಶ್‌, ಚಂದ್ರಪ್ಪ, ಹಾದಿಮನೆ ನಾಗರಾಜ್‌, ಸಲೀಂ, ಗಣೇಶ್‌, ಶಡ್ಡಿ ನಿಂಗಪ್ಪ, ವೆಂಕಟೇಶ್‌, ಪೂಜಾರಿ ಮರಿಯಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ