ಆ್ಯಪ್ನಗರ

ನೀರುಗಂಟಿ ಮೇಲೆ ಹಲ್ಲೆ, ತೀವ್ರ ಗಾಯ

ತಾಲೂಕಿನ ಬೇಲಿಮಲ್ಲೂರು ಗ್ರಾಪಂ ನೀರುಗಂಟಿ ಕೋಟೆಮಲ್ಲೂರಿನ ಎಸ್‌.ಜಿ. ಶಾಂತರಾಜ್‌ ಮೇಲೆ ಡಿ.31ರಂದು ಕ್ಷ ುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಅವರು ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 3 Jan 2019, 5:00 am
ಹೊನ್ನಾಳಿ : ತಾಲೂಕಿನ ಬೇಲಿಮಲ್ಲೂರು ಗ್ರಾಪಂ ನೀರುಗಂಟಿ ಕೋಟೆಮಲ್ಲೂರಿನ ಎಸ್‌.ಜಿ. ಶಾಂತರಾಜ್‌ ಮೇಲೆ ಡಿ.31ರಂದು ಕ್ಷ ುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಅವರು ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web wet attack severe injury
ನೀರುಗಂಟಿ ಮೇಲೆ ಹಲ್ಲೆ, ತೀವ್ರ ಗಾಯ


ಕೋಟೆಮಲ್ಲೂರಿನ ಮಂಜಪ್ಪ ಬುರಲಣ್ಣಾರ ಹಲ್ಲೆ ಮಾಡಿರುವ ವ್ಯಕ್ತಿ. ಕುಡಿವ ನೀರು ಪೂರೈಕೆ ವಿದ್ಯುತ್‌ ಸ್ವಿಚ್‌ನ್ನು ಅನಧಿಕೃತವಾಗಿ ಈತ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಎಷ್ಟು ಬಾರಿ ಇವರಿಗೆ ತಿಳಿ ಹೇಳಿದರೂ ಈತ ತನ್ನ ಕೃತ್ಯ ನಿಲ್ಲಿಸಿರಲಿಲ್ಲ. ಸಿಟ್ಟಿಗೆದ್ದ ನೀರುಗಂಟಿ ಶಾಂತರಾಜ್‌ ಕುಡಿವ ನೀರು ಪೂರೈಕೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಈ ಘಟನೆಯಿಂದ ಕೆರಳಿದ ಮಂಜಪ್ಪ ಡಿ.31ರಂದು ನೀರುಗಂಟಿ ಮೇಲೆ ಹಲ್ಲೆ ಹಲ್ಲೆ ಮಾಡಿದ್ದಾರೆ.

ಖಂಡನೆ: ಹಲ್ಲೆಯನ್ನು ನೀರುಗಂಟಿ ಸಂಘದ ಪದಾಧಿಕಾರಿಗಳು ಖಂಡಿಸಿದ್ದು, ಅಮಾಯಕ ಸಣ್ಣ ನೌಕರರ ಮೇಲೆ ಈ ರೀತಿ ಹಲ್ಲೆ ನಡೆಯುವುದರಿಂದ ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿಭಾಯಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನೀರುಗಂಟಿ ಕೋಟೆಮಲ್ಲೂರಿನ ಎಸ್‌.ಜಿ. ಶಾಂತರಾಜ್‌ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ