ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಕೊಲೆ ಮಾಡಿಸಿದ್ದ ಹೆಂಡತಿ ಅಂದರ್..!
ಗಂಡ ಬೇರೆ ಹೆಂಗಸಿನ ಜತೆ ಅನೈತಿಕ ಸಂಬಂಧ ಹೊಂದಿದ್ದ. ಈ ಕಾರಣಕ್ಕೆ ಮನೆಯಲ್ಲಿ ಪದೇ ಪದೇ ಗಲಾಟೆಯಾಗಿ ಸಂಸಾರದಲ್ಲಿ ನೆಮ್ಮದಿ ಇರಲಿಲ್ಲ. ಹಾಗಾಗಿ ತನ್ನ ಗಂಡನನ್ನು ಕೊಲೆ ಮಾಡಬೇಕು ಎಂದು ತೀರ್ಮಾನಿಸಿದ್ದಾಗಿ ಮಹಿಳೆ ತಿಳಿಸಿದ್ದಾರೆ.
Vijaya Karnataka Web 15 Oct 2020, 11:49 pm
ಹೈಲೈಟ್ಸ್:
- ಜಗಳೂರು ಪಟ್ಟಣವನ್ನು ಬೆಚ್ಚಿ ಬೀಳಿಸಿದ್ದ ವ್ಯಾಪಾರಿ ಕೊಲೆ ಪ್ರಕರಣ
- ಪತಿ ಕೊಲೆಗೆ ಪತ್ನಿಯಿಂದ ಸುಪಾರಿ
- ಜಗಳೂರಿನ ನಾಲ್ವರು ಆರೋಪಿಗಳ ಬಂಧನ
ದಾವಣಗೆರೆ: ಜಗಳೂರು ಪಟ್ಟಣವನ್ನು ಬೆಚ್ಚಿ ಬೀಳಿಸಿದ್ದ ಎಗ್ರೈಸ್ ವ್ಯಾಪಾರಿ ಬಸವರಾಜಪ್ಪ ಕೊಲೆ ಪ್ರಕರಣ ಸಂಬಂಧ ಗುರುವಾರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯಾದ ವ್ಯಕ್ತಿ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಪತ್ನಿಯೇ ಈ ಕೊಲೆಗೆ ಸುಪಾರಿ ಕೊಟ್ಟಿದ್ದರು ಎಂದು ಎಸ್ಪಿ ಹನುಂತರಾಯ ತಿಳಿಸಿದ್ದಾರೆ. ನಗರದ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣ ಕುರಿತು ವಿವರಣೆ ನೀಡಿದ ಅವರು, ಕೊಲೆಯಾದ ಬಸವರಾಜಪ್ಪ ಪತ್ನಿ ಭಾಗ್ಯಮ್ಮ, ಜಗಳೂರು ತಾಲೂಕು ಗುಡ್ಡದ ನಿಂಗನಹಳ್ಳಿಯ ಆಂಜಿನಪ್ಪ, ಚೌಡಪ್ಪ, ಮಾರುತಿ ಬಂಧಿತರು. ಈ ನಾಲ್ವರು ಆರೋಪಿಗಳನ್ನು 24 ಗಂಟೆ ಒಳಗೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಊಟದಲ್ಲಿ ನಿದ್ದೆ ಮಾತ್ರೆ: ಕೊಲೆಯಾದ ಬಸವರಾಜಪ್ಪ ಹೆಂಡತಿ ಭಾಗ್ಯಮ್ಮಳನ್ನು ವಿಚಾರಣೆ ಮಾಡಿದಾಗ, ತನ್ನ ಗಂಡ ಬೇರೆ ಹೆಂಗಸಿನ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಕಾರಣಕ್ಕೆ ಮನೆಯಲ್ಲಿ ಪದೇ ಪದೇ ಗಲಾಟೆಯಾಗಿ ಸಂಸಾರದಲ್ಲಿ ನೆಮ್ಮದಿ ಇರಲಿಲ್ಲ. ಹಾಗಾಗಿ ತನ್ನ ಗಂಡನನ್ನು ಕೊಲೆ ಮಾಡಬೇಕು ಎಂದು ತೀರ್ಮಾನಿಸಿದೆ.
ಬ್ರಿಗೇಡ್ ರೋಡ್ನಲ್ಲಿ ಅಂಡರ್ವರ್ಲ್ಡ್ ಶೂಟೌಟ್..! ಬನ್ನಂಜೆ ರಾಜ, ರವಿ ಪೂಜಾರಿ ಆಪ್ತ ಮನೀಶ್ ಶೆಟ್ಟಿ ಹತ್ಯೆ
ತನ್ನ ಗಂಡನನ್ನು ಕೊಲೆ ಮಾಡಿದರೆ ಒಂದು ಲಕ್ಷ ರೂ. ಕೊಡುವುದಾಗಿ ಮೂವರಿಗೆ ಒಪ್ಪಿಸಿದೆ. ಅಕ್ಟೋಬರ್ 13 ರ ರಾತ್ರಿ ಗಂಡ ಮನೆಗೆ ಬಂದಾಗ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿದೆ. ನಿದ್ದೆ ಮಂಪರಿನಲ್ಲಿದ್ದ ಇವರನ್ನು ಈ ಮೂವರು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಹೋಗಿ ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾಳೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪತಿಯ ಕೊಲೆಗೆ ಪ್ರತೀಕಾರ: ಕೈದಿಗಳಿಗೆ ಸುಪಾರಿ ಕೊಟ್ಟ ಪತ್ನಿ, ಜೈಲಿನಿಂದ ಪ್ಲಾನ್ ರೂಪಿಸಿದವರಿಗೆ ಏನಾಯ್ತು?
ಎಎಸ್ಪಿ ರಾಜೀವ್ ಮತ್ತು ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಜಗಳೂರು ಸಿಪಿಐ ದುರುಗಪ್ಪ, ಪಿಎಸ್ಐಗಳಾದ ಉಮೇಶ್ ಬಾಬು, ಶ್ರೀಧರ್ ಹಾಗೂ ತಾಂತ್ರಿಕ ವಿಭಾಗದ ರಾಘವೇಂದ್ರ, ಉಮೇಶ್ ಬಿಸ್ನಾಳ್ ತಂಡ ಪ್ರಕರಣ ಭೇದಿಸಿದೆ. ಈ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಆಸ್ತಿಗಾಗಿ ಸಂಬಂಧಿಕನ ಕೊಲೆಗೆ ಸುಪಾರಿ: ವಕೀಲ ಸೇರಿ 7 ಮಂದಿ ಕುಣಿಗಲ್ ಪೊಲೀಸರ ಬಲೆಗೆ
ಊಟದಲ್ಲಿ ನಿದ್ದೆ ಮಾತ್ರೆ: ಕೊಲೆಯಾದ ಬಸವರಾಜಪ್ಪ ಹೆಂಡತಿ ಭಾಗ್ಯಮ್ಮಳನ್ನು ವಿಚಾರಣೆ ಮಾಡಿದಾಗ, ತನ್ನ ಗಂಡ ಬೇರೆ ಹೆಂಗಸಿನ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಕಾರಣಕ್ಕೆ ಮನೆಯಲ್ಲಿ ಪದೇ ಪದೇ ಗಲಾಟೆಯಾಗಿ ಸಂಸಾರದಲ್ಲಿ ನೆಮ್ಮದಿ ಇರಲಿಲ್ಲ. ಹಾಗಾಗಿ ತನ್ನ ಗಂಡನನ್ನು ಕೊಲೆ ಮಾಡಬೇಕು ಎಂದು ತೀರ್ಮಾನಿಸಿದೆ.
ಬ್ರಿಗೇಡ್ ರೋಡ್ನಲ್ಲಿ ಅಂಡರ್ವರ್ಲ್ಡ್ ಶೂಟೌಟ್..! ಬನ್ನಂಜೆ ರಾಜ, ರವಿ ಪೂಜಾರಿ ಆಪ್ತ ಮನೀಶ್ ಶೆಟ್ಟಿ ಹತ್ಯೆ
ತನ್ನ ಗಂಡನನ್ನು ಕೊಲೆ ಮಾಡಿದರೆ ಒಂದು ಲಕ್ಷ ರೂ. ಕೊಡುವುದಾಗಿ ಮೂವರಿಗೆ ಒಪ್ಪಿಸಿದೆ. ಅಕ್ಟೋಬರ್ 13 ರ ರಾತ್ರಿ ಗಂಡ ಮನೆಗೆ ಬಂದಾಗ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿದೆ. ನಿದ್ದೆ ಮಂಪರಿನಲ್ಲಿದ್ದ ಇವರನ್ನು ಈ ಮೂವರು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಹೋಗಿ ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾಳೆ ಎಂದು ಎಸ್ಪಿ ಮಾಹಿತಿ ನೀಡಿದರು.
ಪತಿಯ ಕೊಲೆಗೆ ಪ್ರತೀಕಾರ: ಕೈದಿಗಳಿಗೆ ಸುಪಾರಿ ಕೊಟ್ಟ ಪತ್ನಿ, ಜೈಲಿನಿಂದ ಪ್ಲಾನ್ ರೂಪಿಸಿದವರಿಗೆ ಏನಾಯ್ತು?
ಎಎಸ್ಪಿ ರಾಜೀವ್ ಮತ್ತು ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಜಗಳೂರು ಸಿಪಿಐ ದುರುಗಪ್ಪ, ಪಿಎಸ್ಐಗಳಾದ ಉಮೇಶ್ ಬಾಬು, ಶ್ರೀಧರ್ ಹಾಗೂ ತಾಂತ್ರಿಕ ವಿಭಾಗದ ರಾಘವೇಂದ್ರ, ಉಮೇಶ್ ಬಿಸ್ನಾಳ್ ತಂಡ ಪ್ರಕರಣ ಭೇದಿಸಿದೆ. ಈ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಆಸ್ತಿಗಾಗಿ ಸಂಬಂಧಿಕನ ಕೊಲೆಗೆ ಸುಪಾರಿ: ವಕೀಲ ಸೇರಿ 7 ಮಂದಿ ಕುಣಿಗಲ್ ಪೊಲೀಸರ ಬಲೆಗೆ