ಆ್ಯಪ್ನಗರ

ದಾವಣಗೆರೆಯಲ್ಲಿ ತಿಂಗಳ ಬಾಣಂತಿ ಸಾವು

ಮೂರು ದಿನದ ಹಿಂದೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ ಎಂಬವರು ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ.

Vijaya Karnataka Web 3 Jun 2018, 4:43 pm
ದಾವಣಗೆರೆ: ಒಂದೂವರೆ ತಿಂಗಳ ಬಾಣಂತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ನಗರದ ಚಿಗಟೇರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.
Vijaya Karnataka Web women died


ಹೊರವಲಯದ ರಾಮನಗರದ ನಿವಾಸಿ ಜ್ಯೋತಿ (24) ಮೃತಪಟ್ಟ ಬಾಣಂತಿ. ಆಕೆಗೆ ಇತ್ತೀಚೆಗಷ್ಟೆ ಮೊದಲ ಹೆರಿಗೆಯಾಗಿತ್ತು. ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದರಿಂದಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದು, ವೈದ್ಯರ ನಿರ್ಲಕ್ಷ್ಯ ಖಂಡಿಸಿ ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡಲು ಮುಂದಾದರು.ಜ್ಯೋತಿ ಸಾವಿನ ಸುದ್ದಿ ಕೇಳಿದ ಸಂಬಂಧಿಕರ ರೋಧನ ಮುಗಿಲು ಮುಟ್ಟುವಂತಿತ್ತು.

ಆರೋಗ್ಯದಲ್ಲಿ ಏರು ಪೇರು:
ಹೆರಿಗೆ ಆದ ವೇಳೆ ಜ್ಯೋತಿಗೆ ರಕ್ತಸ್ರಾವ ಆಗಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಕೆಯನ್ನು ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರಲ್ಲದೇ, ಹೆಚ್ಚಿನ ರಕ್ತ ನೀಡಬೇಕು ಎಂದು ಸಲಹೆ ನೀಡಿದ್ದರು. ಇದಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದರು. ಆದರೆ ಭಾನುವಾರ ಬೆಳಗ್ಗೆ ಬಂದು ನೋಡಿದರೆ ಜ್ಯೋತಿ ಏಕಾಏಕಿ ಮೃತಪಟ್ಟಿದ್ದಳು. ಜ್ಯೋತಿ ಮೃತಪಟ್ಟ ವಿಷಯ ತಿಳಿದ ಸಂಬಂಧಿಕರು, ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಅಜ್ಜಿಗೂ ಚಿಕಿತ್ಸೆ ನೀಡಲಿಲ್ಲ : ಜ್ಯೋತಿಗೆ ಇದೀಗ ಒಂದೂವರೆ ತಿಂಗಳ ಹೆಣ್ಣು ಮಗುವಿದೆ. ಅವರ ಅಜ್ಜಿ ಬೆಳಗ್ಗೆಯೇ ಆಕೆಗೆ ಸ್ವಲ್ಪ ಗಂಜಿ ಕುಡಿಸಿ ಆಗಷ್ಟೆ ಮನೆಗೆ ತೆರಳಿದ್ದರು. ಅಜ್ಜಿ ಮನೆಗೆ ಹೋಗಿದ್ದ ಕ್ಷ ಣಾರ್ಧದಲ್ಲೆ ಜ್ಯೋತಿ ಮೃತಪಟ್ಟ ವಿಷಯ ತಿಳಿದಿದ್ದು, ವಿಷಯ ಕೇಳಿ ಅಜ್ಜಿ ದುಗ್ಗಮ್ಮ ಕೂಡ ಆಘಾತಕ್ಕೊಳಗಾಗಿದ್ದಾಳೆ. ಅಲ್ಲದೇ, ವೈದ್ಯರು ಆಕೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಜ್ಯೋತಿ ಅಣ್ಣ ರಾಘವೇಂದ್ರ ಆರೋಪಿಸುತ್ತಾರೆ. ಒಟ್ಟಿನಲ್ಲಿ, ವೈದ್ಯರ ನಿರ್ಲಕ್ಷ್ಯವೋ, ವಿಧಿಯಾಟವೋ, ತಾಯ್ತನ ಅನುಭವಿಸಬೇಕಿದ್ದ ಜ್ಯೋತಿ ಒಂದೂವರೆ ತಿಂಗಳು ಕಳೆಯುವಷ್ಟರಲ್ಲಿ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

ಹಿಂದೆ ರಕ್ತ ಬೇಕೆಂದಾಗ ನೀಡಲು ಬಂದಿದ್ದೆ. ಆದರೆ, ವೈದ್ಯರು ಬೇಡವೆಂದರು. ಆಕೆಗೆ ಹೃದಯಾಘಾತವಾಗಿರಬಹುದು. ವೈದ್ಯರು ಆಕೆಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಇದರಿಂದಲೇ ಆಕೆ ಮೃತಪಟ್ಟಿದ್ದಾಳೆ ಎಂದು ಜ್ಯೋತಿ ಅಣ್ಣ ರಾಘವೇಂದ್ರ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ