ಆ್ಯಪ್ನಗರ

ವೈ.ರಾಮಪ್ಪ ಕ್ಷಮೆ ಕೇಳಲಿ: ಅಟ್ರಾಸಿಟಿ ಕೇಸ್‌ ಹಿಂಪಡೆಯಲಿ

ಜಿಪಂ ಮಾಜಿ ಅಧ್ಯಕ್ಷ ವೈ.ರಾಮಪ್ಪ ವೈಯಕ್ತಿಕ ಪ್ರತಿಷ್ಠೆಗೆ ಅಹಿಂದ ಪದ ಬಳಕೆ ಮಾಡಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದು, ಕೂಡಲೇ ಕ್ಷಮಾಪಣೆ ಕೇಳಿ, ಅಟ್ರಾಸಿಟಿ ಕೇಸ್‌ ವಾಪಸ್ಸು ಪಡೆಯಬೇಕು ಎಂದು ಮಾಜಿ ಶಾಸಕ ಬಸವರಾಜ್‌ನಾಯ್ಕ್‌ ಆಗ್ರಹಿಸಿದರು.

Vijaya Karnataka 28 Apr 2019, 5:00 am
ದಾವಣಗೆರೆ : ಜಿಪಂ ಮಾಜಿ ಅಧ್ಯಕ್ಷ ವೈ.ರಾಮಪ್ಪ ವೈಯಕ್ತಿಕ ಪ್ರತಿಷ್ಠೆಗೆ ಅಹಿಂದ ಪದ ಬಳಕೆ ಮಾಡಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದು, ಕೂಡಲೇ ಕ್ಷಮಾಪಣೆ ಕೇಳಿ, ಅಟ್ರಾಸಿಟಿ ಕೇಸ್‌ ವಾಪಸ್ಸು ಪಡೆಯಬೇಕು ಎಂದು ಮಾಜಿ ಶಾಸಕ ಬಸವರಾಜ್‌ನಾಯ್ಕ್‌ ಆಗ್ರಹಿಸಿದರು.
Vijaya Karnataka Web y ramappa apologize lets get rid of the atrocity case
ವೈ.ರಾಮಪ್ಪ ಕ್ಷಮೆ ಕೇಳಲಿ: ಅಟ್ರಾಸಿಟಿ ಕೇಸ್‌ ಹಿಂಪಡೆಯಲಿ


ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಿಲ್ಲೆಯಲ್ಲಿ ಲಿಂಗಾಯತ, ಅಹಿಂದ ವರ್ಗ ಸಹೋದರರಂತೆ ಇದ್ದು, ನಮ್ಮ ಮಧ್ಯೆ ಜಾತಿ ವಿಷ ಬೀಜ ಬಿತ್ತಿ ಹಾಳು ಮಾಡುತ್ತಿದ್ದಾರೆ. ಜಾತಿನಿಂದನೆ ಪ್ರಕರಣವನ್ನು ವೈ.ರಾಮಪ್ಪ ವೈಯಕ್ತಿಕ ಪ್ರತಿಷ್ಠೆಗಾಗಿ, ತನ್ನ ರಕ್ಷಣೆಗಾಗಿ ಅಸ್ತ್ರವನ್ನಾಗಿ ಬಳಕೆ ಮಾಡಿರುವುದು ಖಂಡನೀಯ. ಇಂತಹ ಕೆಲ ವ್ಯಕ್ತಿಗಳು ಅಟ್ರಾಸಿಟಿ ಕೇಸ್‌ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಬೇರೆಯವರು ನಮ್ಮ ಜೊತೆ ಸೇರಲು ಹಿಂದೆ-ಮುಂದೆ ನೋಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈ.ರಾಮಪ್ಪನವರ ವಿರುದ್ಧ ದಾವಣಗೆರೆಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 12 ಮಂದಿ ಯುವ ಹೋರಾಟಗಾರರ ಮೇಲೆ ಬಡಾವಣೆ ಠಾಣೆಯಲ್ಲಿ ಅಟ್ರಾಸಿಟಿ ಕೇಸ್‌ ಹಾಕಿದ್ದಾರೆ. ಜಿಲ್ಲೆಯ ಸಾಮರಸ್ಯ ಕಾಪಾಡುವ ಹಿನ್ನಲೆಯಲ್ಲಿ ದೂರನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪದವೀಧರರಾದ ರಾಜಕಾರಣದಲ್ಲಿ ಯಾವ ಮಟ್ಟದಲ್ಲಿ ಮಾತನಾಡಬೇಕೆಂಬ ಅರಿವು ಇರಬೇಕು. ವೀರಶೈವ ಲಿಂಗಾಯತ ಎಂಬ ಪದ ಬಳಕೆ ಮಾಡದೆ ಇದ್ದರೂ, ಅದು ನೇರವಾಗಿ ಆ ಸಮಾಜಕ್ಕೆ ತಟ್ಟುವ ಮಾತಾಗಿದೆ. ನಿಂದನೆಯ ಮಾತನಾಡಿರುವುದಲ್ಲದೇ ಅಹಿಂದ ವರ್ಗದ ಬೆಂಬಲವಿದೆ ಎಂದು ಹೇಳಿರುವುದು ಆಘಾತ ತಂದಿದೆ ಎಂದರು.

ಅಹಿಂದ ಮುಖಂಡ ಅಣಬೇರು ಶಿವಮೂರ್ತಿ ಮಾತನಾಡಿ, ರಾಮಪ್ಪ ಅವರು ಅಹಿಂದ ಕ್ರಾಂತಿ ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ ಅಹಿಂದ ಸಮಾಜವನ್ನು ಲೀಸ್‌ಗೆ ಪಡೆದಿದ್ದಾರೆ. ಸಮಾಜ ಕದಡುವಂತಹ, ವಿಷಬೀಜ ಬಿತ್ತುವಂತಹ ಮಾತನಾಡುವುದು ಖಂಡನೀಯವೆಂದರು.

ಎಚ್‌.ಕೆ ಬಸವರಾಜ್‌, ತಾಪಂ ಸದಸ್ಯ ಆಲೂರು ನಿಂಗರಾಜ್‌, ಹನುಮಂತನಾಯ್ಕ್‌, ಮಹಾಬಲೇಶ್‌, ತಿಪ್ಪೇಸ್ವಾಮಿ, ಶ್ಯಾಗಲೆ ಮಂಜಣ್ಣ, ಮೆಳ್ಳೆಕಟ್ಟೆ ನಾಗರಾಜ್‌, ಆಲೂರು ಚನ್ನಬಸಪ್ಪ, ಅನಗೋಡು ಕೃಷ್ಣಮೂರ್ತಿ, ಅನುಗೋಡು ತಿಪ್ಪೇಸ್ವಾಮಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ