ಆ್ಯಪ್ನಗರ

ಹೌದು ನಾನು ನಾಯಿ.. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ: ರೇಣುಕಾಚಾರ್ಯ

ರೇಣುಕಾಚಾರ್ಯ ಅವರನ್ನು ನಾಯಿ ಎಂದು ಕರೆದಿದ್ದ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರಿಗೆ ಶುಕ್ರವಾರ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಹೌದು, ನಾನು ನಾಯಿ, ನಿಯತ್ತಿನ ನಾಯಿ, ದೇಶ, ರಾಜ್ಯ ಹಾಗೂ ಕ್ಷೇತ್ರಕ್ಕೆ ನಾನು ನಾಯಿ ಆಗುತ್ತೇನೆ ಎಂದು ಹೇಳಿದರು.

Vijaya Karnataka Web 4 Dec 2020, 9:29 pm
ದಾವಣಗೆರೆ: ನಾನು ನಾಯಿ, ನಿಯತ್ತಿನ ನಾಯಿ ಆಗಿದ್ದು, ನನ್ನ ನಿಯತ್ತು ದೇಶ, ರಾಜ್ಯಕ್ಕಾಗಿ, ಮತಕ್ಷೇತ್ರಕ್ಕಾಗಿ ನಾನು ನಾಯಿ ಆಗುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ವಾಟಾಳ್ ನಾಗರಾಜ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Vijaya Karnataka Web Honnali MLA M P Renukacharya
ಎಂಪಿ ರೇಣುಕಾಚಾರ್ಯ, ಶಾಸಕ (ಸಂಗ್ರಹ ಚಿತ್ರ)


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಾಟಾಳ್ ನಾಗರಾಜ್ ಒಬ್ಬ ಬ್ಲಾಕ್ ಮೇಲ್ ವ್ಯಕ್ತಿ. ಶಾಸಕರಾಗಿದ್ದಾಗ ಚಿಕ್ಕಪೇಟೆ ವರ್ತಕರಿಗೆ ಕಣ್ಣೀರು ಹಾಕಿಸಿದ್ದಾರೆ. ನನಗೆ ನಾಯಿ ಎಂದು ಕರೆದಿದ್ದಾರೆ. ನಾಯಿಗೆ ಇರುವ ನಿಯತ್ತು ಮನುಷ್ಯರಿಗೆ ಇಲ್ಲ ಎಂದರು.

ರಾಜ್ಯದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯಾಗಿದೆ. ಅವರ ಅಭಿವೃದ್ಧಿಗೆ ನಿಗಮ ಸ್ಥಾಪನೆಯಾಗಿದೆ. ಅವರು ತಾಯಿ ಭುವನೇಶ್ವರಿ ಹೆಸರಲ್ಲಿ ಸ್ವಾರ್ಥಕ್ಕೆ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದನ್ನು ಮಾಡುವ ಬದಲು ನಿಮ್ಮ ಸ್ವಂತ ಸಂಪಾದನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ತೋರಿಸಿ ಎಂದು ಸವಾಲು ಹಾಕಿದ ಅವರು, ರಾಜ್ಯ ಬಂದ್‌ಗೆ ಸರಕಾರದ ಸಹಕಾರ ಇಲ್ಲ. ಬೀದಿ ಬದಿ ವ್ಯಾಪಾರಿಗಳು, ಜನರು ಬಂದ್‌ಗೆ ವಿರೋಧಿಸುತ್ತಿದ್ದಾರೆ. ನಾಡು, ಗಡಿ, ನುಡಿ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದರು.

ನಾಯಿಗಳಿಗಾದ್ರೂ ಉತ್ತರಿಸ್ತೀನಿ..! ಯತ್ನಾಳ, ರೇಣುಕಾಚಾರ್ಯ ಮಾತಿಗೆ ಪ್ರತಿಕ್ರಿಯಿಸಲ್ಲ ಎಂದ ವಾಟಾಳ್

ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಬಾರದು ಎಂಬ ಹೇಳಿಕೆ ನೀಡಿದ್ದ ರೇಣುಕಾಚಾರ್ಯ, ಸಚಿವ ಸ್ಥಾನದ ಬಗ್ಗೆ ಈಗ ನಾನು ಏನೂ ಮಾತನಾಡೋದಿಲ್ಲ ಎಂದು ಉಲ್ಟಾ ಹೊಡೆದರು. ಏನಿದ್ರೂ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದರು.

ಡಿಸೆಂಬರ್‌ 5ರಂದು ಕರ್ನಾಟಕ ಬಂದ್‌ ನಿಶ್ಚಿತ, ಕನ್ನಡ ಹೋರಾಟಗಾರರ ಘೋಷಣೆ

ಪದೇ ಪದೇ ಒಂದು ವಿಷಯದ ಬಗ್ಗೆ ಮಾತನಾಡಿದ್ರೆ ನನ್ನ ವರ್ಚಸ್ಸು ಕಡಿಮೆ ಆಗುತ್ತೆ. ಈ ಬಗ್ಗೆ ಯಾವುದೇ ಮಹತ್ವ ಕೊಡೊದಿಲ್ಲ. ಸಿಎಂ, ರಾಜ್ಯಾಧ್ಯಕ್ಷರು, ವರಿಷ್ಠರು ಸಚಿವ ಸ್ಥಾನದ ಬಗ್ಗೆ ತೀರ್ಮಾನ ಮಾಡ್ತಾರೆ. ನಮ್ಮ ಗುರಿ ಗ್ರಾಮ ಪಂಚಾಯತಿ ಚುನಾವಣೆ ಆಗಿದ್ದು, ಆ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಕಾರ್ಯಕರ್ತರನ್ನು ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿಯಾಗಿದೆ ಎಂದರು.

ಮರಾಠ ಅಭಿವೃದ್ದಿ ನಿಗಮಕ್ಕೆ ವಿರೋಧ: ಡಿಸೆಂಬರ್‌ 5 ರಂದು ‘ಕರ್ನಾಟಕ ಬಂದ್‌’ ಅಧಿಕೃತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ