ಆ್ಯಪ್ನಗರ

ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣು

ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಂಚಿಕೇರಿ ಗ್ರಾಮದ ಬಳಿಯ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

Vijaya Karnataka 20 Aug 2018, 8:43 am
ಹರಪನಹಳ್ಳಿ: ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಂಚಿಕೇರಿ ಗ್ರಾಮದ ಬಳಿಯ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
Vijaya Karnataka Web Suicide


ಶಶಿಕುಮಾರ(23), ಕಾವ್ಯ(16)ಮೃತ ಪ್ರೇಮಿಗಳು. ಇವರಿಬ್ಬರು ಕಂಚಿಕೇರಿ ಗ್ರಾಮದವರು. ಕಳೆದ ಆ.17ರಂದು ಊರು ಬಿಟ್ಟು ಬೇರೆ ಕಡೆ ಹೋಗಿದ್ದರು. ಇವರನ್ನು ಮನೆಯವರು ಆ.18ರಂದು ಹುಡುಕಾಡಿದ್ದಾರೆ, ಆದರೆ ಆ.19ರಂದು ಬೆಳಗ್ಗೆ ಹುಡುಗನ ಜಮೀನಿನಲ್ಲಿ ಇವರಿಬ್ಬರು ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.

ಕಾವ್ಯ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಒಂದೇ ಜನಾಂಗದ ಇವರಿಬ್ಬರು ಸಂಬಂಧದಲ್ಲಿ ಮಾವ, ಸೊಸೆ ಆಗಬೇಕು. ಆದರೆ ಹುಡುಗನಿಗೆ ಇನ್ನೊಬ್ಬ ಮಾವನ ಮಗಳನ್ನು ಮದುವೆ ಮಾಡಲು ಯೋಚಿಸಿದ್ದರು ಎನ್ನಲಾಗಿದೆ. ಆದರೆ ಇವರ ಪ್ರೀತಿಸುವ ವಿಷಯ ಮನೆಯವರಿಗೆ ಗೊತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಮೃತ ಹುಡುಗನ ತಂದೆ ಪರಸಪ್ಪ ದೂರು ನೀಡಿದ್ದು, ಸಿಪಿಐ ದುರುಗಪ್ಪ ಹಾಗೂ ಪಿಎಸ್‌ಐ ಪ್ರಸಾದ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಅರಸಿಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ