ಕುಂದಗೋಳ : ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ರಾತ್ರಿ ಸಮಯದಲ್ಲಿ ಅಂಗಡಿಯ ಬೀಗ ಮುರಿದು ಕಳ್ಳರು ಅಂಗಡಿಗಳನ್ನು ಲೂಟಿ ಮಾಡುತ್ತಿದ್ದು, ಕೂಡಲೇ ಕಳ್ಳರನ್ನು ಬಂಧಿಸಿ ವ್ಯಾಪಾರಸ್ಥರಿಗೆ ನೆರವಾಗಬೇಕೆಂದು ಕುಂದಗೋಳ ವ್ಯಾಪಾರಸ್ಥರ ಸಂಘದಿಂದ ಕುಂದಗೋಳ ಪೊಲೀಸ್ ಠಾಣೆಯ ಹವಾಲ್ದಾರ ಎಚ್.ಜೆ.ಜಾಧವ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 8ದಿನಗಳಿಂದ ಪಟ್ಟಣದಲ್ಲಿ 8 ಅಂಗಡಿ ಕಳುವು ಮಾಡಿದ್ದರಿಂದ ವ್ಯಾಪಾರಸ್ಥರು ಆರ್ಥಿಕ ನಷ್ಟದೊಂದಿಗೆ ಭಯದ ವಾತಾವರಣದಲ್ಲಿದ್ದಾರೆ. ಈ ಮೊದಲು ಪೊಲೀಸ್ ಇಲಾಖೆ ಗಸ್ತಿ ಮಾಡುತ್ತಿದ್ದರು. ಆದರೆ, ಇತ್ತೀಚಿಗೆ ಬರುತ್ತಿಲ್ಲದ್ದರಿಂದ ಕಳ್ಳರು ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಾರೆ. ಕೂಡಲೇ ಪಟ್ಟಣದಲ್ಲಿ ರಾತ್ರಿ ವೇಳೆ ಹೆಚ್ಚಿನ ಗಸ್ತಿಗೆ ನಿಯೋಜಿಸಬೇಕು ಹಾಗೂ ಮೂರಂಗಡಿ ಕೂಟ್ನಲ್ಲಿ ಪೊಲೀಸ್ ಚೌಕಿ ಸ್ಥಾಪಿಸಬೆಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಹವಾಲ್ದಾರ ಜಾಧವ, ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕಳ್ಳರನ್ನು ಶೀಘ್ರದಲ್ಲೆ ಬಂಧಿಸಲಾಗುವುದೆಂದು ಭರವಸೆ ನೀಡಿದರು.
ವಾಗೇಶ ಗಂಗಾಯಿ, ಸೋಮರಾವ ದೇಸಾಯಿ, ಮಲ್ಲಿಕಾರ್ಜುನ ಕಿರೇಸೂರ, ಮಾಬುಬಲಿ ನದಾಫ, ರಾಜು ಶಿವಳ್ಳಿ, ಪ್ರಕಾಶ ಸವಣೂರ, ದಶರತ ಕಲಾಲ, ಮಂಜುನಾಥ ಹಿರೇಮಠ, ಹುಸೇನಸಾಬ ಕಡ್ಲಿ, ನಿಂಗಪ್ಪ ಗುಡ್ಡದಕೇರಿ, ಪರಶುರಾಮ ಕಲಾಲ, ಗಿರೀಶ ಗಾಣಿಗೇರ, ಸುರೇಶ ಹಡಪದ, ನಾಗರಾಜ ದೇಶಪಾಂಡೆ, ಶೇಖಣ್ಣ ಬಾಳಿಕಾಯಿ, ಸುರೇಶ ಗಂಗಾಯಿ ಇದ್ದರು.