ಆ್ಯಪ್ನಗರ

ಆರ್ಯಿಕಶ್ರೀ ವಿಶಾಶ್ರೀ ಮಾತಾಜಿ ರಜತ ವರ್ಷಾಯೋಗ ನಾಳೆ

ಹುಬ್ಬಳ್ಳಿ : ಜೈನ ಸಮಾಜದ ಪ್ರಮುಖ ಸಾಧ್ವಿಗಳಲ್ಲಿ ಒಬ್ಬರಾದ ಶ್ರಮಣಿ ಗಣಿನಿ ಆರ್ಯಿಕಶ್ರೀ ವಿಶಾಶ್ರೀ ಮಾತಾಜಿ ತಮ್ಮ ಎಂಟು ಶಿಷ್ಯ ಸಾಧ್ವಿಗಳೊಂದಿಗೆ ಜು.21 ರಂದು ರಜತ ವರ್ಷಾಯೋಗ ಆಚರಣೆ ನಗರದ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.

Vijaya Karnataka 20 Jul 2019, 5:00 am
ಹುಬ್ಬಳ್ಳಿ : ಜೈನ ಸಮಾಜದ ಪ್ರಮುಖ ಸಾಧ್ವಿಗಳಲ್ಲಿ ಒಬ್ಬರಾದ ಶ್ರಮಣಿ ಗಣಿನಿ ಆರ್ಯಿಕಶ್ರೀ ವಿಶಾಶ್ರೀ ಮಾತಾಜಿ ತಮ್ಮ ಎಂಟು ಶಿಷ್ಯ ಸಾಧ್ವಿಗಳೊಂದಿಗೆ ಜು.21 ರಂದು ರಜತ ವರ್ಷಾಯೋಗ ಆಚರಣೆ ನಗರದ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
Vijaya Karnataka Web
ಆರ್ಯಿಕಶ್ರೀ ವಿಶಾಶ್ರೀ ಮಾತಾಜಿ ರಜತ ವರ್ಷಾಯೋಗ ನಾಳೆ


ಮಧ್ಯಾಹ್ನದ ನಂತರ ಚಾತುರ್ಮಾಸ ಮಂಗಳ ಕಳಶ ಸ್ಥಾಪನಾ ಸಮಾರಂಭ ನೆರವೇರಲಿದ್ದು , ಹೊಂಬುಜ ಜೈನ ಮಠದ ಪೀಠಾಧಿಪತಿ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದಾರೆ. ನವಗ್ರಹ ತೀರ್ಥ ಪೀಠಾಧಿಪತಿ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿರುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ. ಹು-ಧಾ ಪೋಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಹುಬ್ಬಳ್ಳಿ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ.ಕೆ.ಹೋತಪೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ರಜತ ವರ್ಷಾಯೋಗ ನಿಮಿತ್ತ ಆರ್ಯಿಕಶ್ರೀ ಮಾತಾಜಿಯವರಿಗೆ ಪರಿವಾರದ 25 ಜನರಿಂದ ಪಾದ ಪ್ರಾಕ್ಷಾಲನೆ, ಆಚಾರ್ಯ ಅಘ್ರ್ಯ, ಅಷ್ಟದ್ರವ್ಯ ಪೂಜೆ, ಶಾಸ್ತ್ರ ಮತ್ತು ವಸ್ತು ಅರ್ಪಣೆ, ಭಕ್ತಿ ನೃತ್ಯಹಾಗೂ ಜೈನ ಸಮಾಜದ ವತಿಯಿಂದ ಚಾತುರ್ಮಾಸ ನಿವೇದನೆ , ಮಂಗಲ ಪ್ರವಚನ, ಮಂಗಲ ಕಳಶ ಸ್ಥಾಪನೆ, ಭಕ್ತಿ ಗಾಯನ ಕಾರ್ಯಕ್ರಮಗಳು ನಡೆಯಲಿದೆ. ಇದೇ ಸಂದರ್ಭದಲ್ಲಿ ಫ್ರೋ. ಜೀವಂಧರಕುಮಾರ ಹೋತಪೇಟಿ ಕನ್ನvಕ್ಕೆÜ ಅನುವಾದಿಸಿದ ಶ್ರವಣರ ಆಹಾರ ಚರ್ಯೆ ಪುಸ್ತಕ ಬಿಡುಗಡೆ ಮಾಡಲಾಗುವುದು. ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ಉತ್ತರ ಭಾರತದಿಂದ ಅನೇಕ ಭಕ್ತರು ಭಾಗಿಯಾಗಲಿದ್ದಾರೆ ಎಂದು ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ.ಕೆ. ಹೋತಪೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ