ಆ್ಯಪ್ನಗರ

ಆಧುನಿಕ ಜೀವನಶೈಲಿಯಿಂದ ಬಂಜೆತನ

ಹುಬ್ಬಳ್ಳಿ : ಇಂದಿರಾ ಐವಿಎಫ್‌ ಸಂಸ್ಥೆಯು ನಗರದ ಮಿನಿ ವಿಧಾನಸೌಧದ ಎದುರಿನ ಶ್ವೇತಾ ಕಾಂಪ್ಲೆಕ್ಸ್‌ನಲ್ಲಿಆರಂಭಿಸಿದ ಬಂಜೆತನ ನಿವಾರಣಾ ಕೇಂದ್ರವು ಜ.15ರವರೆಗೆ ವಿಶೇಷ ಶಿಬಿರ ಆಯೋಜಿಸಿದೆ.

Vijaya Karnataka 3 Jan 2020, 5:00 am
ಹುಬ್ಬಳ್ಳಿ : ಇಂದಿರಾ ಐವಿಎಫ್‌ ಸಂಸ್ಥೆಯು ನಗರದ ಮಿನಿ ವಿಧಾನಸೌಧದ ಎದುರಿನ ಶ್ವೇತಾ ಕಾಂಪ್ಲೆಕ್ಸ್‌ನಲ್ಲಿಆರಂಭಿಸಿದ ಬಂಜೆತನ ನಿವಾರಣಾ ಕೇಂದ್ರವು ಜ.15ರವರೆಗೆ ವಿಶೇಷ ಶಿಬಿರ ಆಯೋಜಿಸಿದೆ.
Vijaya Karnataka Web
ಆಧುನಿಕ ಜೀವನಶೈಲಿಯಿಂದ ಬಂಜೆತನ


ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿಸಂಸ್ಥೆಯ ಚೇರಮನ್‌ ಡಾ. ಅಜಯ ಮುರ್ಡಿ ಮಾತನಾಡಿ, ಕರ್ನಾಟಕದಲ್ಲಿ5ನೇ ಹಾಗೂ ದೇಶದಲ್ಲಿ83 ನೇ ಚಿಕಿತ್ಸಾ ಕೇಂದ್ರ ಇದಾಗಿದೆ. ಬಂಜೆತನದಿಂದ ಬಳಲುತ್ತಿರುವ ದಂಪತಿಗೆ ಚಿಕಿತ್ಸೆಯ ಅವಶ್ಯಕತೆ ಇದ್ದು, ರಿಯಾಯಿತಿ ದರದಲ್ಲಿಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಜೀವನ ಶೈಲಿ ಮತ್ತು ಕಾರ್ಯಕ್ಷಮತೆಯಿಂದ ದೇಹದ ಆಯಾಸ ಹೆಚ್ಚಾಗುತ್ತಿದೆ. ಇದರಿಂದ ಮಹಿಳೆಯರಲ್ಲಿಮಧುಮೇಹ ಹಾಗೂ ಬೊಜ್ಜು ಹೆಚ್ಚಾಗುತ್ತಿದೆ. ಇದಲ್ಲದೇ ಕೆಲಸದ ಒತ್ತಡ, ವಿವಾಹ ವಿಳಂಬ, ಬದಲಾದ ಆಹಾರ ಪದ್ಧತಿಯಿಂದಾಗಿ ಮಹಿಳೆಯರಿಗೆ ಗರ್ಭಧಾರಣೆಗೆ ತೊಂದರೆಯಾಗುತ್ತಿದೆ. ಬಂಜೆತನ ನಿವಾರಿಸಲು ಚಿಕಿತ್ಸಾ ತೆರೆಯಲಾಗಿದೆ. ಈ ಭಾಗದ ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಐವಿಎಫ್‌ ತಜ್ಞೆ ಡಾ. ಪ್ರತಿಭಾ ಪವಾರ ಮಾತನಾಡಿ, ಭಾರತದಲ್ಲಿಶೇ 15 ರಷ್ಟು ಜನತೆ ಬಂಜೆತನದಿಂದ ಬಳಲುತ್ತಿದ್ದಾರೆ. ಆದರೆ ಮಾಹಿತಿಯ ಕೊರತೆಯಿಂದ ಕೇವಲ 1ರಷ್ಟು ದಂಪತಿ ಲಾಭ ಪಡೆಯುತ್ತಿದ್ದಾರೆ. ಜೀವನ ಶೈಲಿ ಬದಲಾದ ಕಾರಣ ಪುರುಷರಲ್ಲಿವೀರ್ಯದ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಡಾ. ಆಶಾ ಪಾಟೀಲ ಮಾತನಾಡಿ, ಪ್ರಪಂಚದಲ್ಲಿ80 ಲಕ್ಷಕ್ಕೂ ಅಧಿಕ ದಂಪತಿ ಐವಿಎಫ್‌ ನ ಸಹಾಯದಿಂದ ಸಂತಾನ ನೆಮ್ಮದಿ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ