ಆ್ಯಪ್ನಗರ

ಕೋನರೆಡ್ಡಿ ಪಾದಯಾತ್ರೆ ವೇಳೆ ಜೇನು ಕಡಿತ, ಹಲವರಿಗೆ ಗಾಯ

ಮಲಪ್ರಭಾ ಕಾಲುವೆಯ ನವೀಕರಣ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ನೇತೃತ್ವದ ಪಾದಯಾತ್ರೆ ಬ್ಯಾಹಟ್ಟಿ ತಲುಪಿದ್ದು, ಅಲ್ಲಿ ಜೇನು ದಾಳಿಯಿಂದ ಹಲವರು ಗಾಯಕೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ವಿಕ ಸುದ್ದಿಲೋಕ 11 Sep 2016, 3:54 pm
ಹುಬ್ಬಳ್ಳಿ: ಮಲಪ್ರಭಾ ಕಾಲುವೆಯ ನವೀಕರಣ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ನೇತೃತ್ವದ ಪಾದಯಾತ್ರೆ ಬ್ಯಾಹಟ್ಟಿ ತಲುಪಿದ್ದು, ಅಲ್ಲಿ ಜೇನು ದಾಳಿಯಿಂದ ಹಲವರು ಗಾಯಕೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
Vijaya Karnataka Web  honey bee attack many hurt
ಕೋನರೆಡ್ಡಿ ಪಾದಯಾತ್ರೆ ವೇಳೆ ಜೇನು ಕಡಿತ, ಹಲವರಿಗೆ ಗಾಯ


ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಮೊರಬ ಗ್ರಾಮಸ್ಥ ಕುಮಾರ ಮಂಕಣಿ ಸ್ಥಿತಿ ಗಂಭೀರವಾಗಿದೆ. ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಶಾಸಕ ಕೋನರೆಡ್ಡಿ ಅಪಾಯದಿಂದ ಪಾರಾಗಿದ್ದಾರೆ.

ಕಳೆದ 9 ರಿಂದ ನವಲಗುಂದ ತಾಲೂಕಿನ ಶಿರೂರ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆ ಮೊರಬ, ತೀರ್ಲಾಪೂರ ಗ್ರಾಮಗಳ ಮೂಲಕ ಬ್ಯಾಹಟ್ಟಿ ತಲುಪಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ