ಆ್ಯಪ್ನಗರ

10 ಲಕ್ಷ ರೂ. ಮೌಲ್ಯದ 52 ಕೆಜಿ ಗಾಂಜಾ ವಶ

ಹುಬ್ಬಳ್ಳಿ : ಬೀದರ್‌ನಿಂದ ಕಾರವಾರ ಮತ್ತು ಗೋವಾಕ್ಕೆ ಕಾರಿನಲ್ಲಿ 52.5 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಅಶೋಕ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 10 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ ತಿಳಿಸಿದರು.

Vijaya Karnataka 11 Jul 2019, 5:00 am
ಹುಬ್ಬಳ್ಳಿ : ಬೀದರ್‌ನಿಂದ ಕಾರವಾರ ಮತ್ತು ಗೋವಾಕ್ಕೆ ಕಾರಿನಲ್ಲಿ 52.5 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಅಶೋಕ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 10 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ ತಿಳಿಸಿದರು.
Vijaya Karnataka Web 10 lakhs 52kg worth of marijuana seized
10 ಲಕ್ಷ ರೂ. ಮೌಲ್ಯದ 52 ಕೆಜಿ ಗಾಂಜಾ ವಶ


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ಇದೇ ಪ್ರಥಮ ಬಾರಿಗೆ ಈ ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದ ತ್ರಿಪುರನಾಥ ಗ್ರಾಮದ ಕಾರು ಚಾಲಕ ಸಿದ್ಧರಾಮ ಗುಂಡೆ (29) ಎಂಬವನನ್ನು ಗಾಂಜಾ, ಕಾರು ಮತ್ತು ಮೊಬೈಲ್‌ ಸಮೇತ ಬಂಧಿಸಲಾಗಿದೆ'' ಎಂದರು.

''ಖಚಿತ ಮಾಹಿತಿ ಆಧರಿಸಿ ಕಲ್ಲಾಪುರ ಲೇಔಟ್‌ ಬಳಿ ದಾಳಿ ನಡೆದಿದೆ. ಬೀದರ್‌ ಜಿಲ್ಲೆ ಭಾಲ್ಕಿಯಿಂದ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಆರೋಪಿ ಸಿದ್ಧರಾಮ ಭಾಲ್ಕಿ ನಗರದ ವಿಕ್ರಮ ರಾಠೋಡ, ಎಸ್‌.ಬಿ.ಮುದ್ಧಾ ಅವರ ನಿರ್ದೇಶನದ ಮೇರೆಗೆ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ'' ಎಂದರು.

''ಬೀದರ್‌ ಎಸ್‌ಪಿಗೆ ಆರೋಪಿಗಳ ಕುರಿತು ಮಾಹಿತಿ ನೀಡಲಾಗಿದ್ದು, ತನಿಖೆ ನಡೆದಿದೆ. ಉತ್ತರ ಎಸಿಪಿ ಎಚ್‌.ಕೆ. ಪಠಾಣ ಅವರ ಮಾರ್ಗದರ್ಶನದಲ್ಲಿ ಅಶೋಕನಗರ ಠಾಣೆಯ ಸಿಪಿಐ ಜಗದೀಶ ಹಂಚಿನಾಳ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಈ ತಂಡಕ್ಕೆ ಐದು ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ'' ಎಂದು ತಿಳಿಸಿದರು.

''ಡಿಸಿಪಿಗಳಾದ ಡಿ.ಎಲ್‌. ನಾಗೇಶ, ಶಿವಕುಮಾರ ಗುಣಾರೆ ಸಹ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಪಿಎಸ್‌ಐ ಶ್ರೀದೇವಿ, ಸಿಬ್ಬಂದಿಗಳಾದ ಎ.ಪಿ. ಕಟ್ನಳ್ಳಿ, ಎಂ.ಎಸ್‌.ಬಣಕಾರ, ವೆಂಕಟೇಶ ಸುರ್ವೆ, ಯು.ಸಿ. ದೊಡ್ಡವಾಡ, ಮೈಲಾರಿ ಹಂಚಿನಾಳ, ಎಸ್‌.ಎಸ್‌.ನೇಶೂರ, ಆರ್‌.ಜಿ. ನೀಲಪ್ಪಗೌಡರ, ಎಂ.ವೈ. ಯಲ್ಲಕ್ಕನವರ ಮತ್ತಿತರರು ಭಾಗವಹಿಸಿದ್ದರು'' ಎಂದು ನಾಗರಾಜ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಎಲ್‌.ಡಿ. ನಾಗೇಶ, ಎಸಿಪಿ ಪಠಾಣ, ಸಿಪಿಐಗಳಾದ ಡಿಸೋಜಾ, ಜಗದೀಶ ಹಂಚಿನಾಳ ಇದ್ದರು.


ವಂಚಕ ಡೌಗ್ಲಾಸ್‌ ಬಂಧನ
ಹುಬ್ಬಳ್ಳಿ: ಮ್ಯಾಟ್ರಿಮೋನಿಯಲ್‌ ನಕಲಿ ಖಾತೆ ತೆರೆದು ಯುವತಿಯರನ್ನು ವಂಚಿಸುತ್ತಿದ್ದ ನೈಜೇರಿಯಾ ಮೂಲಕ ಡೌಗ್ಲಾಸ್‌ ಇಬೆಯನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ ಎಂದು ಎಂ.ಎನ್‌.ನಾಗರಾಜ ತಿಳಿಸಿದರು.

''ಬಂಧಿತ ಆರೋಪಿ ಹುಬ್ಬಳ್ಳಿ ಯುವತಿಯೊಬ್ಬಳಿಗೆ ವಂಚಿಸಿ 1.37 ಲಕ್ಷ ರೂ. ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಹು-ಧಾ ಸೈಬರ್‌ ಕ್ರೈಂ ಠಾಣೆಯ ಪಿಐ ಪ್ರಭುಗೌಡ ನೇತೃತ್ವದ ತಂಡ ಮ್ಯಾಟ್ರಿಮೋನಿಯಲ್‌ ನಕಲಿ ಖಾತೆಯ ಕಿಂಗ್‌ಪಿನ್‌ ಡೌಗ್ಲಾಸ್‌ನನ್ನು ಬಂಧಿಸಿದೆ. ಬಂಧಿತನ ಮೇಲೆ ಹೈದರಾಬಾದ್‌, ದಿಲ್ಲಿ, ಮಹಾರಾಷ್ಟ್ರ ಸೇರಿದಂತೆ ಇತರ ಹೊರ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ'' ಎಂದು ತಿಳಿಸಿದರು.

ವಂಚಕ ಡೌಗ್ಲಾಸ್‌ ಬಗ್ಗೆ 'ವಿಜಯ ಕರ್ನಾಟಕ' ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ