ಧಾರವಾಡ : ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ 14.6 ಮಿ.ಮೀ ಗುಡುಗು ಸಹಿತ ಮಳೆ ಸುರಿದಿದ್ದು, ಸಿಡಿಲಿಗೆ 4 ಕುರಿಗಳು ಬಲಿ ಆಗಿವೆ.
ಮುಂಗಾರು ಪೂರ್ವ ಮಳೆ ಕೈ ಕೊಟ್ಟಿದ್ದರಿಂದ ಕಳೆಗುಂದಿದ್ದ ರೈತನಿಗೆ ಗುರುವಾರ ರಾತ್ರಿ ಸುರಿದ ಮಳೆ ನಾನಾ ನಿರೀಕ್ಷೆಗಳನ್ನು ಮೂಡಿಸಿದೆ. ಕುಡಿವ ನೀರಿನ ಸಮಸ್ಯೆ ಜತೆಗೆ ಮುಂಗಾರು ಹಂಗಾಮಿಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಹೊತ್ತಿನಲ್ಲಿ ಬಂದ ಮಳೆರಾಯನನ್ನು ಜನರು ಸ್ವಾಗತಿಸಿದ್ದಾರೆ.
ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿ 20.03ಮೀ.ಮಿ. ಮಳೆ ಆಗುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಆದ ತಾಲೂಕಾಗಿದೆ. ಉಳಿದಂತೆ ಕಲಘಟಗಿ 15.2ಮಿ.ಮಿ, ಧಾರವಾಡ 15.02ಮಿ.ಮೀ, ಕುಂದಗೋಳ 5.03ಮಿ.ಮೀ, ನವಲಗುಂದ 12.09 ಮಿ.ಮೀ ಮಳೆ ಆಗಿದೆ ಎಂದು ಕೃಷಿವಿವಿ ಹವಾಮಾನ ಇಲಾಖೆ ಅಧಿಕಾರಿ ಸಿ.ಬಿ.ಕಬಾಡಗಿ ವಿಕಕ್ಕೆ ತಿಳಿಸಿದ್ದಾರೆ.
ಹುಬ್ಬಳ್ಳಿ ನಗರಕ್ಕೆ ಹೋಲಿಸಿದರೆ ಧಾರವಾಡ ನಗರದಲ್ಲಿ ಮಳೆ ಪ್ರಮಾಣ ತೀರ ಕಡಿಮೆ ಆಗಿದೆ. ಆದರೆ, ಗುರುವಾರ ಸುರಿದ ಮಳೆ ಶುಕ್ರವಾರ ಕಾಣಿಸದೇ ಇರುವುದು ಜನರಲ್ಲಿ ಮತ್ತೆ ಬೇಸರ ಮೂಡಿಸಿದೆ.
ಸಿಡಿಲಿಗೆ 4 ಕುರಿ ಸಾವು:
ಗುರುವಾರ ಸುರಿದ ಮಳೆಯಿಂದ ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಸಿಡಿಲು ಬಡಿದು 4 ಕುರಿಗಳು ಸಾವನ್ನಪ್ಪಿವೆ. ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಿತ್ತಾದರೂ ಇದರಿಂದ ಯಾವುದೇ ಅನಾಹುತಗಳು ನಡೆದ ಬಗ್ಗೆ ವರದಿ ಆಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುಂಗಾರು ಪೂರ್ವ ಮಳೆ ಕೈ ಕೊಟ್ಟಿದ್ದರಿಂದ ಕಳೆಗುಂದಿದ್ದ ರೈತನಿಗೆ ಗುರುವಾರ ರಾತ್ರಿ ಸುರಿದ ಮಳೆ ನಾನಾ ನಿರೀಕ್ಷೆಗಳನ್ನು ಮೂಡಿಸಿದೆ. ಕುಡಿವ ನೀರಿನ ಸಮಸ್ಯೆ ಜತೆಗೆ ಮುಂಗಾರು ಹಂಗಾಮಿಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಹೊತ್ತಿನಲ್ಲಿ ಬಂದ ಮಳೆರಾಯನನ್ನು ಜನರು ಸ್ವಾಗತಿಸಿದ್ದಾರೆ.
ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿ 20.03ಮೀ.ಮಿ. ಮಳೆ ಆಗುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಆದ ತಾಲೂಕಾಗಿದೆ. ಉಳಿದಂತೆ ಕಲಘಟಗಿ 15.2ಮಿ.ಮಿ, ಧಾರವಾಡ 15.02ಮಿ.ಮೀ, ಕುಂದಗೋಳ 5.03ಮಿ.ಮೀ, ನವಲಗುಂದ 12.09 ಮಿ.ಮೀ ಮಳೆ ಆಗಿದೆ ಎಂದು ಕೃಷಿವಿವಿ ಹವಾಮಾನ ಇಲಾಖೆ ಅಧಿಕಾರಿ ಸಿ.ಬಿ.ಕಬಾಡಗಿ ವಿಕಕ್ಕೆ ತಿಳಿಸಿದ್ದಾರೆ.
ಹುಬ್ಬಳ್ಳಿ ನಗರಕ್ಕೆ ಹೋಲಿಸಿದರೆ ಧಾರವಾಡ ನಗರದಲ್ಲಿ ಮಳೆ ಪ್ರಮಾಣ ತೀರ ಕಡಿಮೆ ಆಗಿದೆ. ಆದರೆ, ಗುರುವಾರ ಸುರಿದ ಮಳೆ ಶುಕ್ರವಾರ ಕಾಣಿಸದೇ ಇರುವುದು ಜನರಲ್ಲಿ ಮತ್ತೆ ಬೇಸರ ಮೂಡಿಸಿದೆ.
ಸಿಡಿಲಿಗೆ 4 ಕುರಿ ಸಾವು:
ಗುರುವಾರ ಸುರಿದ ಮಳೆಯಿಂದ ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಸಿಡಿಲು ಬಡಿದು 4 ಕುರಿಗಳು ಸಾವನ್ನಪ್ಪಿವೆ. ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಿತ್ತಾದರೂ ಇದರಿಂದ ಯಾವುದೇ ಅನಾಹುತಗಳು ನಡೆದ ಬಗ್ಗೆ ವರದಿ ಆಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.