ಆ್ಯಪ್ನಗರ

ಪ್ರತಿ ಕ್ಷೇತ್ರದಲ್ಲಿ2 ಎಲ್‌ಸಿಡಿ ಟಿವಿ

ಹುಬ್ಬಳ್ಳಿ : ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮುಂದೂಡಿಕೆಯಾದರೂ ಆನ್‌ಲೈನ್‌ ಸಿದ್ಧತೆ ಕುರಿತಾಗಿ ತಯಾರಿ ಪರೀಕ್ಷಿಸಲು ಜೂ.7ರಂದು ವಿಡಿಯೋ ಮೂಲಕ ಪೂರ್ವ ಸಿದ್ಧತಾ ಸಭೆ ನಡೆಸಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿತಲಾ ಎರಡು ಎಲ್‌ಸಿಡಿ ಟಿವಿ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

Vijaya Karnataka 3 Jun 2020, 5:00 am
ಹುಬ್ಬಳ್ಳಿ : ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮುಂದೂಡಿಕೆಯಾದರೂ ಆನ್‌ಲೈನ್‌ ಸಿದ್ಧತೆ ಕುರಿತಾಗಿ ತಯಾರಿ ಪರೀಕ್ಷಿಸಲು ಜೂ.7ರಂದು ವಿಡಿಯೋ ಮೂಲಕ ಪೂರ್ವ ಸಿದ್ಧತಾ ಸಭೆ ನಡೆಸಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿತಲಾ ಎರಡು ಎಲ್‌ಸಿಡಿ ಟಿವಿ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
Vijaya Karnataka Web 2 lcd tvs in each field
ಪ್ರತಿ ಕ್ಷೇತ್ರದಲ್ಲಿ2 ಎಲ್‌ಸಿಡಿ ಟಿವಿ


ನಗರದ ಕಾಂಗ್ರೆಸ್‌ ಕಚೇರಿಯಲ್ಲಿಮಂಗಳವಾರ ನಡೆದ ಪಕ್ಷದ ಬ್ಲಾಕ್‌, ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿಕೆಪಿಸಿಸಿ ವೀಕ್ಷಕರ ವೀರಕುಮಾರ ಪಾಟೀಲ ಮಾಹಿತಿ ನೀಡಿದರು.

ಹು-ಧಾ ಸೆಂಟ್ರಲ್‌ ಕ್ಷೇತ್ರದಲ್ಲಿವಿದ್ಯಾನಗರ ಮತ್ತು ಉಣಕಲ್ಲ, ಪಶ್ಚಿಮ ಕ್ಷೇತ್ರದಲ್ಲಿರಾಣಿ ಚೆನ್ನಮ್ಮ ನಗರ, ನವನಗರ, ಪೂರ್ವ ಕ್ಷೇತ್ರದಲ್ಲಿಬಮ್ಮಾಪುರ ಓಣಿ, ಇಂದಿರಾ ನಗರ, ನವಲಗುಂದ, ಅಣ್ಣಿಗೇರಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ, ಕಲಘಟಗಿ, ಅಳ್ನಾವರ, ಕುಂದಗೋಳ, ಛಬ್ಬಿಯಲ್ಲಿಆನ್‌ಲೈನ್‌ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಮುಖಂಡರು ತಿಳಿಸಿದರು.

ಜಿಲ್ಲೆಯಲ್ಲಿಎಲ್ಲರೀತಿಯ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದ್ದು, ಅಧಿಕಾರ ಸ್ವೀಕಾರದಂದು ಸಹ ಇನ್ನೂ ಹೆಚ್ಚಿನ ಪ್ರಾಜೆಕ್ಟರ್‌ಗಳನ್ನು ಅಳವಡಿಸುವುದಾಗಿ ತಿಳಿಸಿದರು.

ಸಭೆಯಲ್ಲಿಕೆಪಿಸಿಸಿ ಮುಖಂಡ ಹುಸೇನ್‌, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಐ.ಜಿ.ಸನದಿ, ಮಹಿಳಾ ಘಟಕದ ದೀಪಾ ಗೌರಿ, ವನಜಾಕ್ಷಿ ಪಾಟೀಲ, ನಾಗರಾಜ ಗೌರಿ, ರಜತ ಉಳ್ಳಾಗಡ್ಡಿಮಠ, ಪಿ.ನಾಗರಾಜ್‌, ಶಹಜಮಾನ ಮುಜಾಹಿದ್‌ ಸೇರಿದಂತೆ ಬ್ಲಾಕ್‌ ಹಾಗೂ ಜಿಲ್ಲಾಮಟ್ಟದ ಎಲ್ಲಪದಾಧಿಕಾರಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ