ಆ್ಯಪ್ನಗರ

ಕಾಂಗ್ರೆಸ್‌ನಿಂದ 2 ಸಾವಿರ ಮಾಸ್ಕ್‌ ವಿತರಣೆ

ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆ ತಡೆ ಹಾಗೂ ಜನರ ಆರೋಗ್ಯದ ಹಿತರಕ್ಷಣೆಗಾಗಿ ಕೆಪಿಸಿಸಿ ಕೋವಿಡ್‌-19 ಟಾಸ್ಕ್‌ಪೋರ್ಸ್‌ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್‌ ನೀಡಿದ 2 ಸಾವಿರ ಮಾಸ್ಕ್‌ಗಳನ್ನು ಶುಕ್ರವಾರ ಬಮ್ಮಾಪುರ ಬ್ಲಾಕ್‌ನ ವಿವಿಧೆಡೆ ವಿತರಿಸಲಾಯಿತು.

Vijaya Karnataka 9 May 2020, 5:00 am
ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್‌ ಹರಡುವಿಕೆ ತಡೆ ಹಾಗೂ ಜನರ ಆರೋಗ್ಯದ ಹಿತರಕ್ಷಣೆಗಾಗಿ ಕೆಪಿಸಿಸಿ ಕೋವಿಡ್‌-19 ಟಾಸ್ಕ್‌ಪೋರ್ಸ್‌ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್‌ ನೀಡಿದ 2 ಸಾವಿರ ಮಾಸ್ಕ್‌ಗಳನ್ನು ಶುಕ್ರವಾರ ಬಮ್ಮಾಪುರ ಬ್ಲಾಕ್‌ನ ವಿವಿಧೆಡೆ ವಿತರಿಸಲಾಯಿತು.
Vijaya Karnataka Web 2 thousand mask distribution by congress
ಕಾಂಗ್ರೆಸ್‌ನಿಂದ 2 ಸಾವಿರ ಮಾಸ್ಕ್‌ ವಿತರಣೆ


ಶಾಸಕರ ನಿರ್ದೇಶನದ ಮೇರೆಗೆ ಬಮ್ಮಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೆಹಮೂದ್‌ ಕೋಳೂರ ಅವರ ನೇತೃತ್ವದಲ್ಲಿಕೆ.ಕೆ. ನಗರ, ಯಲ್ಲಾಪುರ ಓಣಿ, ಮೆಹಬೂಬನಗರ ಸೇರಿದಂತೆ ಸುತ್ತಲಿನ ಜನತೆಗೆ ಮಾಸ್ಕ್‌ ವಿತರಣೆ ಮಾಡಲಾಯಿತು. ಕೊರೊನಾ ವೈರಸ್‌ ಹರಡುವಿಕೆ ತಡೆಗಾಗಿ ಪ್ರತಿಯೊಬ್ಬರೂ ಮನೆಯಲ್ಲೇ ಇರಬೇಕು. ಹೊರಗಡೆ ಹೋಗುವ ಅನಿವಾರ್ಯತೆ ಇದ್ದಲ್ಲಿಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು.

ಸ್ಥಳೀಯ ಮುಖಂಡರಾದ ಮೈನುದ್ದೀನ ಮುಚಾಲೆ, ಶರೀಫ್‌ ಮುಲ್ಲಾ, ಅಬ್ದುಲ್‌ರಜಾಕ್‌ ಸರಖವಾಸ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ